ಕೆಎಸ್​ ಈಶ್ವರಪ್ಪ ಶಿವಮೊಗ್ಗ ನಿವಾಸದಲ್ಲಿ ಬೆಳಗಾವಿಯ ರಮೇಶ್ ಜಾರಕಿಹೊಳಿ! ಇನ್ನೂ ಕಾಲ ಮಿಂಚಿಲ್ಲ ಎಂದ ಮಾಜಿ ಮಿನಿಸ್ಟರ್!?

Ramesh Jarakiholi of Belgaum visited the residence of KS Eshwarappa Shimoga and held talks.

ಕೆಎಸ್​ ಈಶ್ವರಪ್ಪ ಶಿವಮೊಗ್ಗ ನಿವಾಸದಲ್ಲಿ ಬೆಳಗಾವಿಯ ರಮೇಶ್ ಜಾರಕಿಹೊಳಿ! ಇನ್ನೂ ಕಾಲ ಮಿಂಚಿಲ್ಲ ಎಂದ ಮಾಜಿ ಮಿನಿಸ್ಟರ್!?
Ramesh Jarakiholi

shivamogga Mar 15, 2024  Ramesh Jarakiholi  ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಇನ್ನೇನು ರಾಷ್ಟ್ರ ಭಕ್ತರ ಬಳಗದ ಸಭೆಗೆ ನಡೆಯಲು ಕೆಲವೇ ಹೊತ್ತಿಗೂ ಮೊದಲು ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪನವರ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಕೊಟ್ಟಿದ್ದಾರೆ. ಅಲ್ಲದೆ ಕೆಲವು ಹೊತ್ತು ಈಶ್ವರಪ್ಪನವರ ಜೊತೆಗೆ ಅವರು ಚರ್ಚೆ ನಡೆಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅವರು,  ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಜೊತೆ ಟಿಕೆಟ್ ಅಸಮಾಧಾನ ಕುರಿತು ಚರ್ಚೆ ನಡೆಸಿದ್ದೇನೆ. ಈಶ್ವರಪ್ಪ ಅವರನ್ನು ಮನವೊಲಿಸುವ ಪ್ರಯತ್ನ ನಡೆದಿದೆ. ಇನ್ನೂ ಕೂಡಾ ಸಮಯ ಮೀರಿಲ್ಲ. ನಾನು ಟಿಕೆಟ್ ವಿಚಾರವಾಗಿ  ದೆಹಲಿಗೆ ಹೋಗಿ ವರಿಷ್ಠರ  ಜೊತೆ ಚರ್ಚೆ ನಡೆಸುತ್ತೇನೆ ಎಂದಿದ್ಧಾರೆ. 

ಇನ್ನೂ ಚುನಾವಣೆ ಘೋಷಣೆ ಆಗಿಲ್ಲ.  ಸಾಕಷ್ಟು ಬದಲಾವಣೆಗೆ ಅವಕಾಶ ಇದೆ. ಈಶ್ವರಪ್ಪ ಅವರಿಗೆ ಪದೇ ಪದೇ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸಬೇಕು. ಎಲ್ಲವೂ ಸರಿ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದಿದ್ಧಾರೆ. 

ಈಗಲೂ ಕೆಇ ಕಾಂತೇಶ್ ಹಾವೇರಿ ಟಿಕೆಟ್ ನೀಡಲು ಅವಕಾಶ ಇದೆ ಎಂದ ರಮೇಶ್ ಜಾರಕಿಹೊಳಿ ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿಯು ಮಾತನಾಡಿದರು. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಬೇಕು ಎಂದ ಅವರು, ಸ್ಥಳೀಯವಾಗಿ ಸಂಜಯ್ ಪಾಟೀಲ್, ಹಾಲಿ ಸಂಸದೆ ಮಂಗಳ ಅಂಗಡಿ ಇದ್ದರು ಎನ್ನುವ ಮೂಲಕ ಬೆಳಗಾವಿ ಟಿಕೆಟ್​ ಹಂಚಿಕೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ರು. 

ಅಲ್ಲದೆ  ಇನ್ನೂ ಜಗದೀಶ್​ ಶೆಟ್ಟರ್ ರವರ ಟಿಕೆಟ್ ಫೈನಲ್ ಆಗಿಲ್ಲ. ನಾವು ಸ್ಥಳೀಯರಿಗೆ ಟಿಕೇಟ್ ನೀಡುವಂತೆ ಒತ್ತಾಯ ಮಾಡ್ತಿದ್ದೇವೆ ಸ್ಥಳೀಯರಿಗೆ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ