ನಿಂಬೆಹಣ್ಣಿನ ಮೇಲೆ ಕೆಎಸ್‌ಇ ಎಂದು ಬರೆದು ಚುನಾವಣಾ ಕಚೇರಿ ಎದುರು ವಾಮಾಚಾರ ?

Writing KSE on a lemon and witchcraft in front of the election office? KS Eshwarappa, Kantesh KE, Shimoga Election, Shikaripura Election, Election News

ನಿಂಬೆಹಣ್ಣಿನ ಮೇಲೆ  ಕೆಎಸ್‌ಇ ಎಂದು ಬರೆದು ಚುನಾವಣಾ ಕಚೇರಿ ಎದುರು ವಾಮಾಚಾರ ?
Writing KSE on a lemon and witchcraft in front of the election office? KS Eshwarappa, Kantesh KE, Shimoga Election, Shikaripura Election, Election News

 

SHIVAMOGGA | MALENADUTODAY NEWS | May 2, 2024  

 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ತೆರೆಯಲಾಗಿರುವ ರಾಷ್ಟ್ರ ಭಕ್ತರ ಬಳಗ ಕೆಎಸ್‌ ಈಶ್ವರಪ್ಪರವರ ಚುನಾವಣಾ ಕಚೇರಿಯ ಮುಂದೆ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.   

 

ಶಿಕಾರಿಪುರ ಪೇಟೆಯಲ್ಲಿ

 

ಶಿಕಾರಿಪುರ ಪೇಟೆಯಲ್ಲಿರುವ ಈಶ್ವರಪ್ಪನವರ ಚುನಾವಣಾ ಕಚೇರಿ ರೋಲಿಂಗ್‌ ಶೆಟ್ಟರ್‌ ಬಳಿಯಲ್ಲಿಯೇ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನ ಬಳಸಿ ಏನೋ ಮಾಡಿದಂತೆ. ಇದರ ದೃಶ್ಯಗಳು ಇದೀಗ ಹೊರಬಿದ್ದಿದ್ದು, ಈ ಕೃತ್ಯವೆಸಗಿದವರು ಯಾರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

 

https://malenadutoday.com/

 

ನಿಂಬೆ ಹಣ್ಣು ಬಳಸಿ ವಾಮಾಚಾರ

 

ಎರಡು ನಿಂಬೆ ಹಣ್ಣಿಗೆ ತ್ರೀಶೂಲವನ್ನು ಚುಚ್ಚಲಾಗಿದ್ದು, ಅದರ ಮೇಲೆ ಕೆಎಸ್‌ಇ ಎಂದು ಬರೆಯಲಾಗಿದೆ. ಅಲ್ಲದೆ ಮರದ ಬೊಂಬೆಗಳನ್ನು ದಾರದಲ್ಲಿ ಕಟ್ಟಿ, ತ್ರೀಶೂಲವಿಟ್ಟು ಬಂಧ ಮಾಡಿದಂತೆ ಇರಿಸಲಾಗಿದೆ. ಅಲ್ಲದೆ ಕುಂಕುಮ ಹಾಗೂ ಅರಶಿನವನ್ನು ಚೆಲ್ಲಿ ಹೋಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಾಮಚಾರ ಪ್ರಯತ್ನ ಎಂಬುದು ಸ್ಪಷ್ಟವಾಗಿದ್ದು ಈ ಬಗ್ಗೆ ಕಾರ್ಯಕರ್ತರು ಕೆಎಸ್‌ ಈಶ್ವರಪ್ಪರಿಗೆ ಮಾಹಿತಿ ನೀಡಿದ್ದಾರೆ.