ಮಧು ಬಂಗಾರಪ್ಪರಿಗೆ ಅಹಂಕಾರ? | ಹರತಾಳು ಹಾಲಪ್ಪ ಹೇಳಿದ್ದೇನು? | ದೊಡ್ಡಮಾತು

Arrogance for Madhu Bangarappa? | What did Harathalu Halappa say? | Harathalu Halappa, Madhu Bangarappa, BY Raghavendra, Geeta Sivarajakumar,

ಮಧು ಬಂಗಾರಪ್ಪರಿಗೆ ಅಹಂಕಾರ? | ಹರತಾಳು ಹಾಲಪ್ಪ ಹೇಳಿದ್ದೇನು? |  ದೊಡ್ಡಮಾತು
Harathalu Halappa, Madhu Bangarappa, BY Raghavendra, Geeta Sivarajakumar,

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ರವರ ಪರವಾಗಿ ರಾಕ್‌ ಸ್ಟೈಲ್‌ನಲ್ಲಿ ನಿಂತಿರುವ ಸಚಿವ ಮಧು ಬಂಗಾರಪ್ಪರವರಿಗೆ ಅಹಂಕಾರ ಜಾಸ್ತಿಯಾಗಿದೆಯಾ? ಕಾಂಗ್ರೆಸ್‌ ಪಾಳಯದಲ್ಲಿ ಹರಿದಾಡುತ್ತಿರುವ ಈ ವದಂತಿಯನ್ನು ಮಾಜಿ ಸಚಿವ ಹರತಾಳು ಹಾಲಪ್ಪ ವ್ಯಂಗ್ಯವಾಗಿ ಟೀಕಿಸಿದ್ದಾರೆ.   

ಬಿವೈ ರಾಘವೇಂದ್ರರವರ ಪರವಾಗಿ ಮತಯಾಚನೆ ನಡೆಸಿದ ಅವರು, ಮಧು ಬಂಗಾರಪ್ಪ ನವರ ಠೇಂಕಾರ ಮತ್ತು ಅಹಂಕಾರ ನೋಡುತ್ತಿದ್ದರೇ ಅವರ ಹತ್ತಿರ ಹೋಗಲು ಸಹ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ  ಅವರು ಬಿಎಸ್‌ವೈ ಮಕ್ಕಳನ್ನು ನೋಡಿ ಸಂಸ್ಕೃತಿಯನ್ನು ಕಲಿಯಲಿ ಎಂದು ವ್ಯಂಗ್ಯವಾಡಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮತ್ತು ಸಂಸದ ರಾಘವೇಂದ್ರ ಅವರಿಬ್ಬರೂ ಭಾರೀ ಅಂತರದ ಮತಗಳ ಮೂಲಕ ಗೆದ್ದು, ಕೇಂದ್ರದಲ್ಲಿ ಸಚಿವರಾಗುವುದು ನಿಶ್ಚಿತ ಎಂದ ಹರತಾಳು ಹಾಲಪ್ಪ  ಕಾಂಗ್ರೆಸ್ ನ ಅಭ್ಯರ್ಥಿಗೆ ಅರಣ್ಯ

ಇಲಾಖೆಯ ಸೂಕ್ಷತೆ ಗೊತ್ತೆ? ಸಮಸ್ಯೆ ಆಲಿಸುವ ವ್ಯವಧಾನವಿದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಒಳ್ಳೆಯ ಮಹಿಳೆಯೇ, ಆದರೆ ಅವರು ಮತಪಡೆಯಲು ಯೋಗ್ಯರಲ್ಲ ಎಂದ ಹಾಲಪ್ಪರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಕೂತರೆ ಏಳಲು ಆಗಲ್ಲ, ಏದ್ದರೆ ಕೂರಲು ಆಗಲ್ಲ ಎಂದು ಟೀಕಿಸಿದ್ರು.