BREAKING NEWS/ ಸಾಗರ ಹೆದ್ಧಾರಿಯಲ್ಲಿ ಮಂಗಳೂರು-ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!

BREAKING NEWS/ A gas lorry on its way to Mangaluru-Ranebennur overturned on sagar highway.

BREAKING NEWS/ ಸಾಗರ  ಹೆದ್ಧಾರಿಯಲ್ಲಿ ಮಂಗಳೂರು-ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!
ಆನಂದಪುರದಲ್ಲಿ ಸಂಭವಿಸಿದ ಅಪಘಾತ

KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE


ಆನಂದಪುರ/ ಸಾಗರ  / ಶಿವಮೊಗ್ಗ/  : ಇಲ್ಲಿನ ಬೀರನ ಕಣವಿಯ ಬಳಿಯಲ್ಲಿ ಗ್ಯಾಸ್ ಲಾರಿಯೊಂದು ಪಲ್ಟಿಯಾಗಿದೆ. 

ನಡೆದ ಘಟನೆ!

ಆನಂದಪುರದ ಬಳಿ ಬರುವ  ಗೌತಮಪುರ ಹತ್ರ ಬೀರನ ಕಣವಿಯ ಕ್ರಾಸ್​ನಲ್ಲಿ ಇವತ್ತು ಗ್ಯಾಸ್ ಲಾರಿಯೊಂದು ಅಪ್​ಸೆಟ್ ಆಗಿತ್ತು. 

ಘಟನೆಯಲ್ಲಿ ಲಾರಿಯಲ್ಲಿದ್ದ 350 ಕ್ಕೂ ಹೆಚ್ಚು ಸಿಲಿಂಡರ್​ಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. 

ಗ್ಯಾಸ್​ ಲಾರಿ ಮಂಗಳೂರು ನಿಂದ  ರಾಣೆಬೆನ್ನೂರು ಗೆ ಹೋಗುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯತ್ರಂಣಕ್ಕೆ ಸಿಗದೆ ಲಾರಿ ಪಲ್ಟಿಯಾಗಿದೆ. 

ಘಟನೆಯಲ್ಲಿ ಶಿಗ್ಗಾವಿ ಮೂಲದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. 



Malenadutoday.com Social media