Bhadravati case / ಭದ್ರಾವತಿಯಲ್ಲಿ ನಡೆದ ಹತ್ಯೆ ಪ್ರಕರಣ/ ಕದ್ದ ಮೊಬೈಲ್ ವಿಚಾರಕ್ಕೆ ನಡೀತಾ ಹತ್ಯೆ!?! ನಾಲ್ವರು ಅರೆಸ್ಟ್!
Murder case in Bhadravathi The murder took place over a stolen mobile phone!?! Four arrested!
KARNATAKA NEWS/ ONLINE / Malenadu today/ SHIVAMOGGA / Apr 22, 2023
ಭದ್ರಾವತಿ ಶಿವಮೊಗ್ಗ/ನಿನ್ನೆ ಭದ್ರಾವತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಕ್ಷಿಪ್ರವಾಗಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?
ನಿನ್ನೆ ಭದ್ರಾವತಿಯಲ್ಲಿ 28 ವರ್ಷದ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು ಮೃತನನ್ನ ಕೋಡಿಹಳ್ಳಿ ನಿವಾಸಿ ನವೀನ್(೨೮) ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೆ ಸ್ಥಳೀಯವಾಗಿ ಆತಂಕ ಮನೆ ಮಾಡಿತ್ತು. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು (hosamane police station bhadravati) ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು.
ಏನಾಗಿತ್ತು?
ಪ್ರಕರಣದಲ್ಲಿ ಕೊಲೆಯಾದ ನವೀನ್ ತನ್ನ ಸ್ನೇಹಿತ ಅರುಣ್ ಜೊತೆಗೆ ಎರಡು ಮೊಬೈಲ್ಗಳನ್ನು ಕದ್ದಿದ್ದರು. ಈ ಮೊಬೈಲ್ಗಳನ್ನುಸುಹೇಲ್ ಎಂಬಾತನಿಗೆ ಮಾರಿದ್ದರಂತೆ. ಅದರ ದುಡ್ಡು ಬಾಕಿಯಿತ್ತು.
ಇದೇ ವಿಚಾರದಲ್ಲಿ ಹಣ ಕೊಡು ಎಂದು ಅರುಣ್ ಹಾಗೂ ನವೀನ್ ಹೋಗಿದ್ದಾರೆ. ಈ ವೇಳೇ ಅರುಣ್, ಸುಹೇಲ್ ಹಾಗೂ ನವೀನ್ ನಡುವೆ ಜಗಳವಾಗಿದೆ.
ಈ ವೇಳೆಯಲ್ಲಿ ಸುಹೇಲ್ ಹಾಗೂ ಆತನ ಜೊತೆಗಿದ್ದವರು, ನವೀನ್ ನ ಬೆನ್ನಿಗೆ ಚಾಕುವಿನಿಂದ ಇರಿದುಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಘಟನೆ ವೇಳೆ ಸ್ಥಳದಿಂದ ಪರಾರಿಯಾಗಿದ್ದ ಅರುಣ್ ಪುನಃ ವಾಪಸ್ ಬಂದು ನೋಡುವಾಗ ನವೀನ್ ಗಂಭೀರವಾಗಿ ಗಾಯಗೊಂಡಿದ್ದ.
ಆತನನ್ನು ಆಸ್ಪತ್ರೆಗೆ ಸೇರಿಸುವ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ. ಇದಿಷ್ಟು ವಿವರವನ್ನು ಅರುಣ್ ಪೊಲೀಸರಿಗೆ ನೀಡಿದ್ದಾರೆ. ಆತನ ಮಾಹಿತಿಯಂತೆ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.
-
Read/ BREAKING NEWS/ ಶಿವಮೊಗ್ಗ ಜೆಡಿಎಸ್ಗೆ ಕಾಂಗ್ರೆಸ್ & ಬಿಜೆಪಿಯಿಂದ ಪ್ಲಸ್ 1/ ವರ್ಕ್ ಆಗುತ್ತಾ ಹೊಸ ಸ್ಟ್ಯಾಟರ್ಜಿ
Malenadutoday.com Social media