ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು
Actor Shivarajkumar visits Soraba Dyamavva, Sagara Marikambe
ಶಿವಮೊಗ್ಗ ಜಿಲ್ಲೆಗೆ ಮತ್ತೆ ನಿನ್ನೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದರು. ಈ ಸಲ ಯಾವುದೇ ಸಿನಿಮಾ ಪ್ರಮೋಶನ್ಗಾಗಿ ಅವರು ಭೇಟಿ ನೀಡಿರಲಿಲ್ಲ. ಬದಲಾಗಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಬಟೂರಿನ ದ್ಯಾಮವ್ವ ಜಾತ್ರೆ ಹಾಗೂ ಸಾಗರ ತಾಲ್ಲೂಕಿನ ಮಾರಿಜಾತ್ರೆ ನೋಡಲು ಶಿವಣ್ಣ ಬಂದಿದ್ದರು.
ರಾಜ್ಯದ ಕೊಡಗು-ಕೇರಳ ಬಾರ್ಡರ್ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್ ತಂಡ
ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆಗೆ ಆಗಮಿಸಿದ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧುಬಂಗಾರಪ್ಪ ತಾಯಿಯ ದರ್ಶನ ಪಡೆದರು, ಈ ವೇಳೇ ಶಿವಣ್ಣನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಹಲವರು ಶಿವಣ್ಣರ ಜೊತೆ ಸೆಲ್ಪಿ ಕ್ಲಿಕ್ಕಿಸಿದರೇ , ಶಿವಣ್ಣರವರು ಸಹ ಮಾರಿಕಾಂಬೆಯ ದರ್ಶನ ಪಡೆದು, ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡರು. ಶಿವಮೊಗ್ಗ ಜಿಲ್ಲೆಗೆ ಬಂದಾಗ ತಮಗಾಗುವ ಆಪ್ತ ಅನುಭವವನ್ನು ಹಂಚಿಕೊಂಡರ ಅವರು, ಈ ತಾಯಿಯ ಜಾತ್ರೆಯಲ್ಲಿ ನನ್ನದೊಂದು ಅಳಿಲು ಸೇವೆಯಿದೆ. ಆ ಸೇವೆಯು ತಾಯಿಗೆ ಸಲ್ಲಲ್ಲಿ, ಅದರಿಂದ ನಾಲ್ಕು ಜನರಿಗೆ ಒಳ್ಳೆಯದಾಗಲಿ ಎಂದರು.
ಬಂಗಾರಪ್ಪರ ಅಳಿಯಂದಿರಿಂದ ತಲಾ 5 ಲಕ್ಷ ರೂಪಾಯಿಗೆ ದೇಣಿಗೆ
ಇನ್ನೂ ಸೊರಬ ತಾಲ್ಲೂಕಿನ ಆನವಟ್ಟಿ ಸಮೀಪದ ಕುಬಟೂರಿನಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ಜಾತ್ರೆಗೂ ಶಿವಣ್ಣ ಭೇಟಿಕೊಟ್ಟಿದ್ದರು. ಅವರಷ್ಟೆ ಅಲ್ಲದೆ ಟಿಪಿಎಂಎಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್ ಕುಮಾರ್ ಸಹ ಭೇಟಿಕೊಟ್ಟಿದ್ದರು. ಈ ವೇಳೇ ನಟ ಶಿವರಾಜ್ ಕುಮಾರ್ ಅವರು ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದರು, ಇದೇ ವೇಳೆ ತಿಲಕ್ ಕುಮಾರ್ ಅವರು ದಂಪತಿ ಸಹ 5 ಲಕ್ಷ ದೇಣಿಗೆ ದೇವಸ್ಥಾನ ಸಮಿತಿಗೆ ನೀಡಿದರು. ಇನ್ನೂ ಶಿವಣ್ಣ ತಮ್ಮ 'ವೇದ' ಚಿತ್ರದ 50ನೇ ದಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com