ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ

Naxalite team reappears on Kodagu-Kerala border

ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ
ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ

MALENADUTODAY.COM  | STATE NEWS 

ರಾಜ್ಯದ ಗಡಿಭಾಗದಲ್ಲಿ ಮತ್ತೆ ನಕ್ಸಲ್​ ಚಟುವಟಿಕೆ ಕಾಣಿಸಿಕೊಂಡಿದ್ದು, ಈ ಬಗ್ಗೆ ವರದಿಯಾಗಿದೆ ಮಡಿಕೇರಿ ಕೊಡಗು-ಕೇರಳ ಭಾಗದ ಗ್ರಾಮದಲ್ಲಿ ನಕ್ಸಲರ ತಂಡವೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯವಾಗಿ ಆತಂಕ ಮೂಡಿಸಿದೆ ಹಾಗೂ ಎರಡು ರಾಜ್ಯದ ಪೊಲೀಸರು ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿದೆ.  

ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ

ಕೊಡಗು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆರಳಾಂ ಗ್ರಾಮದ ಭಾಗವೊಂದರಲ್ಲಿ ನಕ್ಸಲರ ತಂಡ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯಿದೆ.  ಐವರು ಬಂದೂಕುಧಾರಿನಕ್ಸಲರ ಗುಂಪಿನಲ್ಲಿ ಓರ್ವ  ಮಹಿಳೆ ಹಾಗೂ ನಾಲ್ವರು ಪುರುಷರಿದ್ದರು ಎನ್ನಲಾಗುತ್ತಿದೆ. ಸುಮಾರು ಮೂರು ದಿನಗಳ ಹಿಂದೆ ಈ ತಂಡ ರಾತ್ರಿ 7.30ರ ಸುಮಾರಿಗೆ ರಾಜೀವ್ ಎಂಬವರ ಮನೆಗೆ ಬಂದು ಹೋಗಿದ್ದಾರೆ ಎಂದು ಸ್ಥಳೀಯವಾಗಿ ವರದಿಯಾಗಿದೆ. ಅಲ್ಲಿ ಊಟ ಮುಗಿಸಿ ಹೋಗಿದ್ದ ತಂಡ  ರಾಜೀವ್ ಮನೆಯಿಂದ ಅಕ್ಕಿ, ಬೇಳೆ, ಉಪ್ಪು, ಸೋಪುಗಳನ್ನು ಒಯ್ದಿದ್ದಾರೆ. ಈ ಸಂಬಂಧ ಕೇರಳದ  ಕಣ್ಣೂರು ಜಿಲ್ಲೆಯ ಠಾಣೆಯಲ್ಲಿ ಕೇಸ್ ಸಹ ದಾಖಲಾಗಿದೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com