ಕ್ಷಿಪ್ರ ಕಾರ್ಯಾಚರಣೆ/ ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​

Four students from the state, including two from Shimoga, are safe in Manipur

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​

KARNATAKA NEWS/ ONLINE / Malenadu today/ May 7, 2023 GOOGLE NEWS 

ಬೆಂಗಳೂರು/ ದೂರದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಲ್ಲಿ ಸಿಲುಕಿದ್ದ ಶಿವಮೊಗ್ಗ ಇಬ್ಬರು ಸೇರಿದಂತೆ ರಾಜ್ಯದ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ  ಕಾರ್ಯಾಚರಣೆ ನಡೆಯುತ್ತಿದೆ. ಅಂದುಕೊಂಡಂತೆ ನಡೆದರೆ, ಇವತ್ತು ರಾತ್ರಿ ನಾಲ್ವರು ವಿದ್ಯಾರ್ಥಿಗಳು ತವರಿಗೆ ವಾಪಸ್ ಬರಲಿದ್ದಾರೆ. 

ಆಯನೂರು ಮಂಜುನಾಥ್ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂವಾದ ! ತಲೆ ತಗ್ಗಿಸಬೇಕು ಎಂದಿದ್ದೇಕೆ ಕೆಪಿಸಿಸಿ ಅಧ್ಯಕ್ಷ ! 

ರಾಜ್ಯದ  ನಾಲ್ವರು ವಿದ್ಯಾರ್ಥಿಗಳನ್ನು, ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿದೆ. ಈ ಪೈಕಿ ಶಿವಮೊಗ್ಗದ  ವಾರ್ತಾ ಮತ್ತು ಪ್ರಚಾರ ಇಲಾಖೆಯ ನೌಕರರಾದ ತಿಪ್ಪೇಸ್ವಾಮಿಯವರ ಪುತ್ರ ಮನೋಜ್ ಹಾಗೂ ತೀರ್ಥಹಳ್ಳಿ ತಾಲ್ಲೂಕು ನಿವಾಸಿ ವಿಶಾಲ್​ ಪ್ರಪುಲ್ಲಚಂದ್ರರವರ ಪುತ್ರಿ ಅಪ್ಸರ ಹಾಗೂ ಚಿಕ್ಕಮಗಳೂರಿನ ಓರ್ವರು ಸೇರಿದಂತೆ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬರಿದ್ದಾರೆ. ಇವರುಗಳು ಕಾಲೇಜೊಂದರಲ್ಲಿ ಓದುತ್ತಿದ್ದಾರೆ. 

 Karnataka election /  ಈ ಸಲ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕೆ ಸಿಗೋದು ಹೊಸ ಎಂಎಲ್​ಎ

ಇನ್ನೂ ನಾಲ್ವರನ್ನು ಅವರುಗಳ ಹಾಸ್ಟೆಲ್​ನಿಂದ ಪೊಲೀಸ್ ಭದ್ರತೆಯೊಂದಿಗೆ  ಮಣಿಪುರದ ಇಂಫಾಲ ಕ್ಕೆ ಕರೆತರಲಾಗಿದೆ. ಅಲ್ಲಿಂದ ಅಸ್ಸಾಂನ ಗೌಹಾತಿ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಕರೆತರಲಾಗಿದ್ದು, ರಾತ್ರಿ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. 

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಶಿವಮೊಗ್ಗ & ದಾವಣಗೆರೆ ಹಾಗೂ  ಹರಿಹರದಿಂದ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಅವರ ಸುಳಿವು ಸಿಕ್ಕಲ್ಲಿ ಹುಡುಕಿಕೊಡಿ  ಎಂದು ಪ್ರಕಟಣೆ ನೀಡಲಾಗಿದೆ. ಈ ಇಬ್ಬರು ವ್ಯಕ್ತಿಗಳ ಗುರುತು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ದೂರವಾಣಿ ಸಂಖ್ಯೆಯನ್ನು ಕೂಡ ನೀಡಲಾಗಿದೆ. 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

ದಾವಣಗೆರೆ ಯಲ್ಲಮ್ಮನಗರದಿಂದ ವ್ಯಕ್ತಿ ನಾಪತ್ತೆ

ದಾವಣೆಗೆರೆಯ ಯಲ್ಲಮನಗರ, ದೇವರಾಜ ಅರಸ್ ಬಡಾವಣೆ 4ನೇ ಕ್ರಾಸ, 3ನೇ ಮುಖ್ಯರಸ್ತೆ ವಾಸಿ ಬಸವರಾಜು ಎಂಬುವವರ ಮಗ 45 ವರ್ಷದ ಗುರುರಾಜು ನಾಪತ್ತೆಯಾಗಿದ್ದಾರೆ. ಇವರು 2023ರ ಜನವರಿ 03 ರಂದು ಮನೆ ಬಿಟ್ಟು ಹೋಗಿರುತ್ತಾರೆ. ಈತನ ಚಹರೆ 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಹರಿಹರದಿಂದ ಯುವಕ ಕಾಣೆ

ಹರಿಹರ ನಗರದ ಮಹಾತ್ಮಗಾಂಧಿ ಪ್ರದೇಶ, 16ನೇ ಕ್ರಾಸ್ ಟ್ಯಾಂಕ್ ಹತ್ತಿರ ವಾಸವಿರುವ ಹಫೀಜ್ ಸಾಬ್ ಎಂಬುವವರ ಮಗ  35 ವರ್ಷದ ಫೈರೋಜ್ ಖಾನ್ ಎಂಬುವವರು  ದಿ: 05/06/2022 ಕಾಣೆಯಾಗಿರುತ್ತಾರೆ.   

ಎಲೆಕ್ಷನ್​ಗೆ ಸಿದ್ದತೆ ಹೇಗಿದೆ? ಜಿಲ್ಲಾಡಳಿತ ಹೇಳಿದ್ದೇನು? ಮತ ಎಣಿಕೆ ಎಲ್ಲಿ? ಮತದಾರರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ 

ಈತನ ಚಹರೆ ಸುಮಾರು 5.8 ಅಡಿ ಎತ್ತರ, ಎಣ್ಣೆಗೆಂಪು  ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಕಪ್ಪು ಬಣ್ಣದ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.  ವಿವಿಧ ದಿನಾಂಕಗಳಂದು ಕಾಣೆಯಾದ ಇವರು ಎಲ್ಲಿಯಾದರೂ ಕಂಡು ಬಂದಲ್ಲಿ ಹರಿಹರ ನಗರ ಪೊಲೀಸ್ ಠಾಣೆ-08192-272016/ 9480803257, ದಾವಣಗೆರೆ-08192-253100/08192-253400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.   

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media