ಕಟ್ಟಿದ್ದ ಒಂದೇ ಕಂತಿನಿಂದ ಬಂತು ಇನ್ಸುರೆನ್ಸ್ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!
A woman in Soraba taluka has received insurance money of Rs 18 lakh ಸೊರಬ ತಾಲ್ಲೂಕಿನ ಮಹಿಳೆಯೊಬ್ಬರಿಗೆ 18 ಲಕ್ಷ ರೂಪಾಯಿ ಇನ್ಸುರೆನ್ಸ್ನ ಹಣ ಲಭ್ಯವಾಗಿದೆ

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS
ದುಡಿಮೆಯ ಆಧಾರವಾಗಿದ್ದ ಮನೆಯ ಮಗ ನಿಧನವಾದರೇ, ಆ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದ ಕುಟುಂಬವೊಂದಕ್ಕೀಗ ವಿಮೆಯ ಹಣವೊಂದು ಲಾಟರಿಯಂತೆ ಬಂದು ಬದುಕಿಗೆ ಆಧಾರವಾಗಿದೆ.
ಏನಿದು ಪ್ರಕರಣ!
ಶಿವಮೊಗ್ಗ ಜಿಲ್ಲೆ ಆಯನೂರಿನ ಬಾರ್ವೊಂದರಲ್ಲಿ ಸುನಿಲ್ ಎಂಬವರು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಸೊರಬದ ಸಾರೇಕೊಪ್ಪಕ್ಕೆ ದೀಪಾವಳಿ ಹಬ್ಬಕ್ಕೆಂದು ಹೊರಟಿದ್ದ ಸುನೀಲ್, ಶಿರಾಳಕೊಪ್ಪ ಬಳಿ ಸಂಭವಿಸಿದ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದರು. ಮನೆಯಲ್ಲಿ ಸುನಿಲ್ ಒಬ್ಬನೆ ದುಡಿಯುತ್ತಿದ್ದ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆತನಿಲ್ಲದ ಆತನ ತಾಯಿ ಮುಂದೇಗೆ ಬದುಕು ಎಂದು ದುಃಖದಲ್ಲಿದ್ದರು.
ಈ ನಡುವೆ ಪುತ್ರನ ಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಿಸಲೆಂದು ಸುನೀಲ್ರವರ ತಾಯಿ ಕರ್ನಾಟಕ ಬ್ಯಾಂಕ್ಗೆ ಬಂದಿದ್ಧಾರೆ. ಈ ವೇಳೆ ಅವರಿಗೆ ಬ್ಯಾಂಕ್ ಅಧಿಕಾರಿಗಳು ತಿಳಿಸಿದ ಸುದ್ದಿ, ಆ ತಾಯಿ ಕಣ್ಣಲ್ಲಿ ನೀರು ತರಿಸಿತ್ತು.
ಸಾಯುವುವದಕ್ಕೂ ಮೊದಲು ಸುನೀಲ್, ವರ್ಷಕ್ಕೆ 300 ರೂ.ಗಳ ಕೆಬಿಎಲ್ ಸುರಕ್ಷಾ ಪಾಲಿಸಿ ಹಾಗೂ ವಾರ್ಷಿಕ 25 ಸಾವಿರ ರೂ.ಗಳ ವಿಮಾ ಪಾಲಿಸಿ ತೆಗೆದುಕೊಂಡಿದ್ದ. ಅದರ ಒಂದು ಕಂತು ಕಟ್ಟಿದ್ದ ಕೂಡ. ಆದರೆ ದುರದೃಷ್ಟವಶಾತ್ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದ. ಸುನೀಲ್ರವರ ತಾಯಿಗೆ ಈ ವಿಷಯ ತಿಳಿಸಿದ ಬ್ಯಾಂಕ್ ಸಿಬ್ಬಂದಿ ತಾಯಿ ಸವಿತಾ ಅವರಿಗೆ ಕೆಬಿಎಲ್ ಸುರಕ್ಷಾ ಪಾಲಿಸಿಯಿಂದ 10 ಲಕ್ಷ ಹಾಗೂ ಇನ್ನೊಂದು ಪಾಲಿಸಿಯಿಂದ 8 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಪ್ರಾಮಾಣಿಕ ಸೇವೆ ಹಾಗೂ ಸುನೀಲ್ನ ಮುಂಜಾಗ್ರತೆಯಿಂದಾಗಿ ತಾಯಿ ಸವಿತಾರಿಗೆ ಇದೀಗ ಆರ್ಥಿಕವಾಗಿ ಬಲ ಬಂದಂತಾಗಿದೆ. ಅಲ್ಲದೆ ಘಟನೆ ಇನ್ಸುರೆನ್ಸ್ನ ಮಹತ್ವ ಸಾರುತ್ತಿದೆ
ಇನ್ನಷ್ಟು ಸುದ್ದಿಗಳು
-
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
-
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?