ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

A fan has written a letter in support of Chikkamagaluru Kadur Congress candidate YSV Dutta.

ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ!  ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!
ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

MALENADUTODAY.COM  |CHIKKAMAGALURU| #KANNADANEWSWEB

ಚುನಾವಣೆ ಬರುತ್ತಿದ್ದಂತೆ, ಜನರನ್ನ ಸಮಾವೇಶಕ್ಕೆ ದುಡ್ಡುಕೊಟ್ಟು ಕರೆಸುವುದು ಮಾಮೂಲಿ ಸಂಗತಿ, ಆದರೆ ಅಪರೂಪಕ್ಕೊಮ್ಮೆ ಅಭ್ಯರ್ಥಿಗಳಿಗೆ ಮತದಾರರ ದುಡ್ಡು ಕೊಟ್ಟು ಅಚ್ಚರಿ ಮೂಡಿಸುತ್ತಾನೆ. ಇದಕ್ಕೀಗ ವೈಎಸ್​ವಿ ದತ್ತರವರು ಸಾಕ್ಷಿಯಾಗಿದ್ದಾರೆ. 

ಅವರ ಕ್ಷೇತ್ರದ ಮತದಾರನನೊಬ್ಬ ಪ್ರೀತಿಯ ಮೆಷ್ಟ್ರಿಗೆ 101 ರೂಪಾಯಿ ಹಣದ ಜೊತೆ ಕಾಗದವೊಂದನ್ನ ಬರೆದಿದ್ದು, ಯಥಾಶಕ್ತಿ ದೇಣಿಗೆ ಕೊಡುತ್ತಿದ್ದೇನೆ, ನೀವು ಗೆಲ್ಲಬೇಕು ಎಂದು ಹೇಳಿದ್ದಾನೆ. ಚೆಂದರ ಅಕ್ಷರಗಳ ಜೊತೆಗೆ, ಪ್ರೀತಿಯ ಮಾತುಗಳನ್ನ ಬರೆದಿರುವ ಅಭಿಮಾನಿಯ ಪತ್ರ ಸದ್ಯ ಸಖತ್ ಸದ್ದು ಮಾಡುತ್ತಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು (Kadur) ಕ್ಷೇತ್ರದ ಮಾಜಿ ಶಾಸಕ  ವೈ.ಎಸ್.ವಿ. ದತ್ತ (YSV Datta) ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯು ಈ ಹಣವನ್ನು ಕಳಿಸಿದ್ದಾನೆ. ಸದ್ಯ ಕಡೂರಿನ ಕಾಂಗ್ರೆಸ್ (Congress) ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ದತ್ತಣ್ಣರಿಗೆ  ಬರೆದಿರುವ ಪತ್ರದಲ್ಲಿ ಜಿ.ಕೆ ಭಾರ್ಗೇಶಪ್ಪ  ಎಂಬ ಅಭಿಮಾನಿ ಹೀಗೆ ಬರೆಯುತ್ತಾರೆ. 

READ | ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ

ವೈಎಸ್​ವಿ ದತ್ತಣ್ಣನವರಿಗೆ, 

ಬಾರ್ಗೇಶಪ್ಪನವವರಿಂದ ಅನಂತ ನಮಸ್ಕಾರಗಳು, ತಮ್ಮ ಅಧಿಕಾರದ ಅವದಿಯಲ್ಲಿ  ಕ್ಷೇತ್ರದ ಜನತೆ ಮೇಲೆ ತೋರಿದ  ಪ್ರೀತಿ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿದ ರೀತಿ, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ತೋರಿದ ಆಸಕ್ತಿ, ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು, ಮಳೆ ನೀರು ಶೇಖರಣೆಯ ಬಗ್ಗೆ ಇರುವ ಪ್ರಕೃತಿ ರಕ್ಷಣೆಯ ಒಲವು, ಇನ್ನೂ ಅನೇಕ ಸತ್ಕಾರ್ಯಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. 

ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಒತ್ತುಕೊಡುವ ತಮ್ಮ ವ್ಯಕ್ತಿತ್ವಕ್ಕೆ ಅನಂತ ಅನಂತ ಪ್ರಣಾಮಗಳು, ನಿಮ್ಮಂತಹ ಅನೇಕ ದತ್ತಣ್ಣನವರುಗಳಿಂದ ಪ್ರಕೃತಿಯನ್ನು ಕಾಪಾಡುವ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಹೊಸ ಜವಾಬ್ದಾರಿ ಇದೆಯೇಂಬ, ಅಪಾರವಾದ ನಂಬಿಕೆ ನನಗಿದೆ. ಕಾರಣ, ಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕೈ ಬಲ ಪಡಿಸಲು, ನನ್ನ ಮತ್ತು ನನ್ನ ಪತ್ನಿಯ ವೋಟುಗಳು ನಿಮಗೆ ಬೀಳಲಿದೆ. ಆರ್ಥಿಕವಾಗಿ ಸಬಲವಿಲ್ಲದ ಕಾರಣ ಕೇವಲ ರೂ 101 ರನ್ನು ಕಳುಹಿಸುತ್ತಿದ್ದೇನೆ. ಎಲ್ಲಾ ವಿಷಯಗಳು ಗೌಪ್ಯವಾಗಿಡಿ 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGSChikkamagaluru, Kadur Congress candidate, YSV Dutta, a fan, wrote a letter and supported it, Chikkamagaluru News, Malnad News, Malnad News, Malnad Today News, Malnad Today Report, Politics Report,ಚಿಕ್ಕಮಗಳೂರು, ಕಡೂರು ಕಾಂಗ್ರೆಸ್ ಅಭ್ಯರ್ಥಿ, ವೈಎಸ್​ವಿ ದತ್ತಾ,    ಅಭಿಮಾನಿಯೊಬ್ಬರು, ಪತ್ರ ಬರೆದು ಬೆಂಬಲ, ಚಿಕ್ಕಮಗಳೂರು ನ್ಯೂಸ್, ಮಲೆನಾಡು ನ್ಯೂಸ್, ಮಲ್ನಾಡ್ ನ್ಯೂಸ್​, ಮಲೆನಾಡು ಟುಡೆ ನ್ಯೂಸ್, ಮಲೆನಾಡು ಟುಡೆ ರಿಪೋರ್ಟ್, ರಾಜಕಾರಣ ವರದಿ  #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga