ಸಿಎಂ ಸಿದ್ದರಾಮಯ್ಯರ ಕುರಿತಾದ ವಾಟ್ಸಾಪ್ ಚಾಟ್ | ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತನ ಫೈಟ್ |
A WhatsApp chat about CM Siddaramaiah led to a physical altercation in Holehonnur, Shivamogga district. The incident occurred in Mangote village where a WhatsApp group of friends discussed the CM.
![ಸಿಎಂ ಸಿದ್ದರಾಮಯ್ಯರ ಕುರಿತಾದ ವಾಟ್ಸಾಪ್ ಚಾಟ್ | ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತನ ಫೈಟ್ |](https://malenadutoday.com/uploads/images/202405/image_870x_6659745ba8e60.webp)
SHIVAMOGGA | MALENADUTODAY NEWS | May 31, 2024 ಮಲೆನಾಡು ಟುಡೆ
ಸಿಎಂ ಸಿದ್ದರಾಮಯ್ಯರ ಕುರಿತಾಗಿ ನಡೆದ ವಾಟ್ಸಾಪ್ ಚಾಟ್ ಪರಸ್ಪರ ಹಲ್ಲೆಗೆ ಕಾರಣವಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ನಡೆದಿದೆ. ಹೊಳೆಹೊನ್ನೂರು ಸಮೀಪದ ಮಂಗೋಟೆಯ ಗ್ರಾಮದ ಸ್ನೇಹಿತರ ವಾಟ್ಸಪ್ ಗ್ರೂಪ್ನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪರ-ವಿರುದ್ಧ ವಾಟ್ಸಪ್ ಚಾಟಿಂಗ್ ನಡೆದಿದೆ.
ಈ ವಿಚಾರವಾಗಿ ಯುವಕರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಮಲ್ಲೇಶ ಎಂಬುವರು ಗಾಯಗೊಂಡಿದ್ದಾರೆ. ಅವರು ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗೋಟೆಯ ಬಿಜೆಪಿ ಕಾರ್ಯಕರ್ತ ವೀರೇಶ ಎಂಬಾತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂನ್ 4 ರಂದು ರಾಜ್ಯ ಬಿಟ್ಟು ಹೋಗಬೇಕು ಎಂದು ವಿಡಿಯೋ ಒಂದನ್ನು ಅಪಲೋಡ್ ಮಾಡಿದ್ದರು. ಅಲ್ಲದೆ ಈ ವೇಳೆ ಅಸಭ್ಯ ಮಾತುಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಈ ಪೋಸ್ಟ್ ವಿಚಾರವಾಗಿ ಮಲ್ಲೇಶ ಹಾಗೂ ವೀರೇಶ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮಲ್ಲೇಶನ ಮೇಲೆ ವೀರೇಶ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ.
A WhatsApp chat about CM Siddaramaiah led to a physical altercation in Holehonnur, Shivamogga district. The incident occurred in Mangote village where a WhatsApp group of friends discussed the CM.