ಶಿವಮೊಗ್ಗಕ್ಕೆ ಸ್ವಾದ್ವಿ ಪ್ರಜ್ಞಾಸಿಂಗ್/ ಬೃಹತ್ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಿದ್ಧತೆ/ ಸಮ್ಮೆಳನದ ಫುಲ್ ಡಿಟೇಲ್ಸ್ ಇಲ್ಲಿದೆ ಓದಿ
ಇನ್ನೂ ಇವತ್ತು ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಶುಷ್ಕ ದಿನ ಘೋಷಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಲಭ್ಯವಾಗಿಲ್ಲ.
ಶಿವಮೊಗ್ಗದಲ್ಲಿ ಇವತ್ತು ಹಿಂದು ಜಾಗರಣಾ ವೇದಿಕೆಯ ದಕ್ಷಿಣ ಕರ್ನಾಟಕದ ವತಿಯಿಂದ 3ನೇ ತ್ರೈ ವಾರ್ಷಿಕ ಸಮ್ಮೇಳನ ನಡೆಯಲಿದೆ.
ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಸರಿಮಯವಾಗಿದೆ, ಎಲ್ಲೆಡೆ ಕೇಸರಿ ಧ್ವಜ, ಬ್ಯಾನರ್, ಬಂಟಿಂಗ್ಸ್, ಹಾಗೂ ಕಟೌಟ್ಗಳನ್ನು ಹಾಕಲಾಗಿದೆ. ಇನ್ನೂ ಇವತ್ತು ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಶುಷ್ಕ ದಿನ ಘೋಷಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಲಭ್ಯವಾಗಿಲ್ಲ.
ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ
ಇನ್ನೂ ಸಮ್ಮೇಳನ ಹಾಗೂ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಅಮಿರ್ ಅಹಮದ್ ಸರ್ಕಲ್ನಲ್ಲಿ ಕೇಸರಿ ಬಣ್ಣಗಳಿಂದ ಶೃಂಗರಿಸಲಾಗಿದೆ. ಇನ್ನೂ ನೆಹರು ರೋಡ್ನ ಉದ್ದಕ್ಕೂ, ವಿವಿಧ ಘಟನೆಗಳಲ್ಲಿ ಮೃತ ಪಟ್ಟ ಹಿಂದೂ ಯುವಕರ ಫೋಟೋಗಳ ಜೊತೆ ಅಡಿಬರಹವಿರುವ ಬ್ಯಾನರ್ಗಳನ್ನ ಹಾಕಲಾಗಿದೆ. ಗೋಪಿ ಸರ್ಕಲ್ನಲ್ಲಿ ವಿಶೇಷವಾಗಿ ರಂಗೋಲಿಯನ್ನು ಬಿಡಿಸಲಾಗಿದ್ದು, ರಂಗೋಲಿ ಜನರ ಗಮನ ಸೆಳೆಯುತ್ತಿದೆ.
ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ
3 ವರ್ಷಕ್ಕೊಮ್ಮೆ ನಡೆಯುವ ಈ ಪ್ರಾಂತ ಸಮ್ಮೇಳನ ಈ ಸಲ ಶಿವಮೊಗ್ಗದಲ್ಲಿ ನಡೆಯುತ್ತಿದ್ದು, ಒಟ್ಟು 18 ಜಿಲ್ಲೆಗಳಿಂದ ಸಾವಿರಾರು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶ ನಡೆಯುವ ಎನ್ಇಎಸ್ ಮೈದಾನದಲ್ಲಿ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ
ಏಷ್ಟೊತ್ತಿಗೆ ಏನೇನು ಕಾರ್ಯಕ್ರಮ
- ಇವತ್ತು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದ ಹಿಂಭಾಗದ ಎನ್ಐಎಸ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಉದ್ಘಾಟನೆಯಾಗಲಿದೆ.
- ಬಳಿಕ ಮಧ್ಯಾಹ್ನದ ವರೆಗೆ ವಿವಿಧ ಗೋಷ್ಠಿಗಳು ಸಮ್ಮೇಳನದಲ್ಲಿ ನಡೆಯಲಿದೆ/ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ಕುರಿತಾಗಿ ಚರ್ಚೆ ನಡೆಯಲಿದೆ.
- ಇನ್ನೂ 2.30 ಕ್ಕೆ ಎನ್ಇಎಸ್ ಮೈದಾನದಿಂದ ಬೃಹತ್ ಶೋಭಾಯಾತ್ರೆಯು ನಡೆಯಲಿದೆ.
- ಈ ಶೋಭಾಯಾತ್ರೆಯು ಎನ್ ಇಎಸ್ ಮೈದಾನದಿಂದ ಕೃಷ್ಣಕೆಫೆ ರಸ್ತೆಗೆ ಬಂದು, ಅಲ್ಲಿಂದ ಗಾಂಧಿಬಜಾರ್, ನೆಹರೂ ರಸ್ತೆ ಮೂಲಕ ಮತ್ತೆ ಎನ್ ಇಎಸ್ ಮೈದಾನ ಸೇರಲಿದೆ
- ಸಂಜೆ 4.30 ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ ಬೃಹತ್ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮಮನೋಹರ ಶಾಂತವೇರಿ ಭಾಗವಹಿಸಲಿದ್ದಾರೆ. ಭೋಪಾಲ್ ಸಂಸದರಾದ ಸಾದ್ವಿಪ್ರಜ್ಞಾಸಿಂಗ್ ಫಾಕೂರ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ
ಶಿವಮೊಗ್ಗಕ್ಕೆ ಸಾದ್ವಿ ಪ್ರಜ್ಞಾಸಿಂಗ್
ಇವತ್ತು ಪ್ರಾಂತ ಸಮ್ಮೇಳನದ ಹಿನ್ನೆಲೆಯಲ್ಲಿ ಸ್ವಾದ್ವಿ ಪ್ರಜ್ಞಾಸಿಂಗ್ ವಿಶೇಷ ವಿಮಾನದಲ್ಲಿ ಬಂದಳಿದಿದ್ದು, ಶಿವಮೊಗ್ಗಕ್ಕೆ ಬರುತ್ತಿದ್ದಾರೆ, ಈ ಸಂಬಂಧ ಅವರು ಏರ್ಪೋರ್ಟ್ನಿಂದ ಹೊರಕ್ಕೆ ಬರುತ್ತಿರುವ ವಿಡಿಯೋ ಇಲ್ಲಿದೆ ನೋಡಿ