ಶಿವಮೊಗ್ಗ ಎಚ್ಚರ/ ಆನ್​ಲೈನ್​ನಲ್ಲಿ ಕಾಣುವುದೆಲ್ಲವೂ ಕಸ್ಟಮರ್ ಕೇರ್ ಅಲ್ಲ/ ನಂಬಿಸಿ ಮೋಸ ಮಾಡ್ತಾರೆ ಹುಷಾರ್

Malenadu Today

ಆನ್​ಲೈನ್​ ವಂಚನೆಯ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಬಂದಿದೆ. ಅಲ್ಲದೆ ಈ ಸಂಬಂಧ ಮಾಧ್ಯಮಗಳು ಸಹ ನಡೆಯುತ್ತಿರುವ ಘಟನೆಗಳ ವರದಿ ಮೂಲಕ ಜಾಗೃತಿ ಮೂಡಿಸುತ್ತಿವೆ. ಇನ್ನೂ ಜನರು ಸಹ ಜಾಗೃತರಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಇದರ ಜೊತೆಗೆ ಮೋಸದ ಜಾಲ ಕೂಡ, ಇನ್ನಷ್ಟು ಮತ್ತಷ್ಟು ಶಾರ್ಪ್​ ಆಗುತ್ತಿದೆ. ಇದಕ್ಕೆ ಸಾಕ್ಷಿ ಶಿವಮೊಗ್ಗದಲ್ಲಿ ನಡೆದ ಘಟನೆ

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಶಿವಮೊಗ್ಗದ ನಿವಾಸಿಯೊಬ್ಬರು ಆನ್​ಲೈನ್​ ಶಾಪಿಂಗ್​ ಸಂಸ್ಥೆಯ (Online transactions) ಮೂಲಕ ಆಫರ್ ನೋಡಿ ವಸ್ತುವೊಂದನ್ನ ಬುಕ್​ ಮಾಡಿದ್ದರಂತೆ. ಮನೆಗೆ ಡೆಲಿವರಿ ಆದಾಗ, ಖರೀದಿಸಿದ್ದ  ವಸ್ತು ಜೊತೆ ಆಫರ್​ನಲ್ಲಿ ನೀಡಿದ್ದ ವಸ್ತು ಬಂದಿರಲಿಲ್ಲ. ಹೀಗಾಗಿ ನಿವಾಸಿಯು, ಡೆಲಿವರಿ ಬಾಯ್ ಬಳಿ ವಿಚಾರಿಸಿದ್ಧಾರೆ. ಅವರು ಕಸ್ಟಮರ್ ಕೇರ್​ನ್ನ ವಿಚಾರಿಸಿ ಎಂದಿದ್ಧಾರೆ.

ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಹೀಗಾಗಿ ಆ ನಿವಾಸಿಯು ಕಸ್ಟಮರ್​ ಕೇರ್​ಗೆ ಕರೆಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆ ಕಡೆಯಿಂದ ಫೋನ್​ ಕರೆ ಸ್ವೀಕರಿಸಿದವರು, ಹೌದು ಮಿಸ್ಟೇಕ್ ಆಗಿದೆ, ನಿಮ್ಮ ಹಣವನ್ನು ರಿಫಂಡ್ ಮಾಡುತ್ತೇವೆ ಎಂದು, ಅದಕ್ಕಾಗಿ ಬ್ಯಾಂಕ್ ಡಿಟೇಲ್ಸ್​ ಕೇಳಿ, ಓಟಿಪಿ ಬರುತ್ತೆ ಕೊಡಿ ಎಂದಿದ್ದಾರೆ. ಹೀಗೆ ಓಟಿಪಿ ಕೊಟ್ಟಿದ್ದರಿಂದ, ಕೆಲವೇ ಹೊತ್ತಿನಲ್ಲಿ ಆ ನಿವಾಸಿಯ ಅಕೌಂಟ್ನಿಂದ ಸುಮಾರು 50 ಸಾವಿರ ರೂಪಾಯಿವರೆಗೂ ಡ್ರಾ ಆಗಿದೆ. 

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

ಇಲ್ಲಿ ನಿವಾಸಿಯು  ಕಸ್ಟಮರ್ ಕೇರ್​ ನಂಬರ್​ನ್ನು ಆನ್​ಲೈನ್​ನಲ್ಲಿ ಸರ್ಚ್​ ಮಾಡುವಾಗ, ಡೂಪ್ಲಿಕೇಟ್ ಸಂಸ್ಥೆಯ ನಂಬರ್​ ಸಿಕ್ಕಿದೆ. ಈ ಮಧ್ಯೆಯು ನಿವಾಸಿಯು ಜಾಗೃತೆ ವಹಿಸಿದ್ದರು. ಆದರೆ ಕಸ್ಟಮರ್ ಕೇರ್ ಹೆಸರಿನ ಕರೆಯಲ್ಲಿದ್ದವರು, ನಿವಾಸಿಯನ್ನು ನಂಬಿಸಿ ಓಟಿಪಿ  (OTP fraud) ಪಡೆದಿದ್ಧಾರೆ ಎನ್ನಲಾಗಿದೆ. ನಂಬಿದ್ದರ ಫಲವಾಗಿ ನಿವಾಸಿಯ ಬ್ಯಾಂಕ್​ ಅಕೌಂಟ್​ನಲ್ಲಿದ್ದ ಹಣ ವಿತ್ ಡ್ರಾ ಆಗಿದೆ. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಈ ಸಂಬಂಧ ಶಿವಮೊಗ್ಗದ ಸಿಇಎನ್​ ಠಾಣೆಯಲ್ಲಿ ದೂರು ಕೊಡಲು ನಿವಾಸಿಯು ಮುಂದಾಗಿದ್ದಾರೆ. ಆದರೆ ಬ್ಯಾಂಕ್​ ಅಕೌಂಟ್ ಸ್ಟೇಟ್ಮೆಂಟ್ ನೀಡಲು ಸಾದ್ಯವಾಗಿಲ್ಲ ಇದಕ್ಕೆ ಕಾರಣ ಬ್ಯಾಂಕ್​ಗಳಿಗೆ ಇವತ್ತು ರಜೆ. ಹೀಗಾಗಿ ಕಂಪ್ಲೆಂಟ್ ಕೊಡಲು ಇನ್ನೂ ಸಾಧ್ಯವಾಗಿಲ್ಲವಂತೆ. ಸದ್ಯ ಈ ಬಗ್ಗೆ ಮಾಹಿತಿ ತಿಳಿದ ವಿದ್ಯಾರ್ಥಿ ಸಂಘಟನೆಯೊಂದು ವಿಚಾರ ತಿಳಿದು ಜಾಗೃತಿ ಮೂಡಿಸುವ ಸಲುವಾಗಿ ಟುಡೆ ತಂಡಕ್ಕೆ ಮಾಹಿತಿ ನೀಡಿದೆ

ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

ಶಿವಮೊಗ್ಗದ ನಾಗರಿಕರು ಇಂತಹ ಘಟನೆಗಳಿಂದ ಇನ್ನಷ್ಟು ಜಾಗೃತಿ ವಹಿಸುವುದು ಉತ್ತಮ. ಆನಲೈನ್​ನಲ್ಲಿ ಏನೇ ಖರೀದಿಸಿದರೂ ಅದಕ್ಕೆ ಪೂರಕವಾಗಿ ಬೇಕಿರುವ ಸುರಕ್ಷತೆಯನ್ನು ವಹಿಸಿ, ಅಲ್ಲದೆ ಆಗಾಗ ಸುರಕ್ಷತಾ ಪಾಸ್​ವರ್ಡ್​ಗಳನ್ನು ಬದಲಾಯಿಸುವುದು ಒಳ್ಳೆಯದು. ಎಲ್ಲದಕ್ಕಿಂತ ಹೆಚ್ಚಾಗಿ ಅನಗತ್ಯವಾಗಿ ಬರುವ ಮೆಸೇಜ್​ಗಳನ್ನು ಕ್ಲಿಕ್ ಮಾಡಬೇಡಿ, ಮೇಲಾಗಿ ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಒಟಿಪಿಯನ್ನು ನೀಡಬೇಡಿ,  ಬ್ಯಾಂಕ್​ಗಳೇ ಆಗಲಿ, ಕಂಪನಿಗಳೇ ಆಗಲಿ ನಿಮ್ಮ ಓಟಿಪಿಯನ್ನು ಕೇಳುವುದಿಲ್ಲ. ಇಂತಹ ಘಟನೆಗಳಲ್ಲಿ ಅಪರಾಧಿಗಳನ್ನು ಹಿಡಿದು ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸವಾಗುತ್ತದೆ. ಹಾಗಾಗಿ ಜಾಗೃತೆ ವಹಿಸುವುದೊಂದೇ ಸರಿಯಾದ ದಾರಿಯಾಗಿದೆ. 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article