ಅತ್ತಿಗೆ ಜೊತೆ ಅಸಹ್ಯ ವರ್ತನೆ/ ತಮ್ಮನನ್ನೆ ಕೊಂದ ಅಣ್ಣ/ ವಿಚಿತ್ರ ಕೊಲೆ ಕೇಸ್
ದಿನಾಂಕಃ-18-12-2022 ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂ ನ ಮೃತ ದೇಹವು ಪತ್ತೆಯಾಗಿತ್ತು.
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಆನವಟ್ಟಿ ಪೊಲೀಸ್ ಸ್ಟೇಷನ್ (Anavatti Police Station) ವ್ಯಾಪ್ತಿಯಲ್ಲಿ ಬರುವ ತುಡಿನೀರು ಎಂಬಲ್ಲಿ ಕಳೆದ 18 ನೇ ತಾರೀಖಿನಂದು ಮೃತದೇಹವೊಂದು ಪತ್ತೆಯಾಗಿತ್ತು. ಈ ಘಟನೆಯ ಹಿಂದಿನ ರಹಸ್ಯವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ
ತುಡಿನೀರಿನಲ್ಲಿ ಪತ್ತೆಯಾಗಿತ್ತು ಮೃತದೇಹ
ತುಡಿನೀರು ಗ್ರಾಮದ ವಾಸಿಯಾದ ಸಲೀಂ ಎಂಬ 25 ವರ್ಷದ ಯುವಕ ದಿನಾಂಕಃ- 15-12-2022 ರಂದು ರಾತ್ರಿ ಜಮೀನಿಗೆ ಮಲಗಲು ಹೋಗಿದ್ದ. ಆದರೆ ಮರುದಿನ ವಾಪಾಸ್ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಆನಂತರ ಆತನಿಗಾಗಿ ಎಲ್ಲೆಡೆ ಹುಡುಕಲಾಗಿತ್ತು. ಬಳಿಕ ದಿನಾಂಕಃ-18-12-2022 ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂ ನ ಮೃತ ದೇಹವು ಪತ್ತೆಯಾಗಿತ್ತು.
ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ
ಕೊಲೆ...
ಮೇಲ್ನೋಟಕ್ಕೆ ಅದೊಂದು ಮರ್ಡರ್ ಎಂಬುದು ಗೊತ್ತಾಗಿತ್ತು. ತಲೆ ಮತ್ತು ಎಡಗಾಲಿನ ಹತ್ತಿರ ಹಲ್ಲೆ ಮಾಡಿದ ಗುರುತುಗಳಿದ್ದವು. ಈ ಸಂಬಂಧ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಎಫ್ಐಆರ್ 0186/2022 ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ
ಸ್ವಂತ ಅಣ್ಣನೇ ಆರೋಪಿ
ಸದ್ಯ ಪ್ರಕರಣವನ್ನು ಆನವಟ್ಟಿ ಪೊಲೀಸರು ಭೇಧಿಸಿದ್ದು, ಕಳೆದ 23-12-2022 ರಂದು ಪ್ರಕರಣದ 1ನೇ ಆರೋಪಿ ರಫೀಕ್ ನನ್ನ ಬಂಧಿಸಿದ್ದಾರೆ. 35 ವರ್ಷದ ರಫೀಕ್ ತುಡಿನೀರು ಗ್ರಾಮದ ನಿವಾಸಿಯಾಗಿದ್ದು, ಮೃತ ಸಲೀಂನ ಸಹೋದರನನೇ ಆಗಿದ್ಧಾನೆ. ಇನ್ನ ಪ್ರಕರಣ ಸಂಬಂಧ 24-12-2022 ರಂದು ಪ್ರಕರಣದ 2ನೇ ಆರೋಪಿ ಸಂತೋಷ್, 24 ವರ್ಷ, ತುಡಿನೀರು ಗ್ರಾಮ, ಸೊರಬ ತಾಲ್ಲೂಕು ರವರನ್ನು ದಸ್ತಗಿರಿ ಮಾಡಲಾಗಿದೆ.
ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ
ನಡೆದಿದ್ದು ಏನು ?
ಆರೋಪಿ ರಫೀಕ್ ಮೃತ ಸಲೀಂನ ಅಣ್ಣ, ಇವರಿಬ್ಬರ ನಡುವೆಯು ಜಮೀನಿನ ವಿಚಾರದಲ್ಲಿ ಆಗಾಗ್ಗೆ ಜಗಳವಾಗುತ್ತಿತ್ತಂತೆ. ಅಲ್ಲದೆ ಸಲೀಂ ರಫೀಕ್ನ ಹೆಂಡತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ತಿದ್ದನಂತೆ. ಇದರಿಂದ ರಫೀಕ್ ಸಲೀಂನನ್ನು ಮುಗಿಸುವ ಯೋಚನೆ ಮಾಡಿದ್ದ, ಈ ಕಾರಣಕ್ಕೆ ಸಂತೋಷನ ಸಹಾಯ ಪಡೆದು, ಕಳೆದ 16 ನೇ ತಾರೀಖು ಜಮೀನಿನಲ್ಲಿ ಮಲಗಿದ್ದ ಸಲೀಂನ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಸಮೀಪದಲ್ಲಿ ಹರಿಯುವ ಬದನಿಕಟ್ಟೆ ಹಳ್ಳಕ್ಕೆ ಎಸೆದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
ಆನವಟ್ಟಿ ಠಾಣೆಯಲ್ಲಿ ವರದಿಯಾದ ಸಲೀಂ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ DySP ಶಿಕಾರಿಪುರ, CPI ಸೊರಬ ವೃತ್ತ, PSI ಆನವಟ್ಟಿ & ಸಿಬ್ಬಂದಿಗಳ ತಂಡವು ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಿದೆ @DgpKarnataka@alokkumar6994 @mithunkumargk pic.twitter.com/xdwklToB7y — SP Shivamogga (@Shivamogga_SP) December 24, 2022