ಕಿರಿಕ್​ ಬಿಡಿಸಲು ಹೋದ ಪೊಲೀಸರಿಗೆ ಸಿಕ್ಕಿಬಿದ್ದ ಮೋಸ್ಟ್​ ವಾಟೆಂಡ್ ಆರೋಪಿ! ಕ್ಯಾಮರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ

Shimoga Doddpet police have arrested an accusedಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ

ಕಿರಿಕ್​ ಬಿಡಿಸಲು ಹೋದ ಪೊಲೀಸರಿಗೆ ಸಿಕ್ಕಿಬಿದ್ದ ಮೋಸ್ಟ್​ ವಾಟೆಂಡ್ ಆರೋಪಿ! ಕ್ಯಾಮರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS

ಸಣ್ಣದೊಂದು ಗಲಾಟೆಯನ್ನು ಬಿಡಿಸಲು ಹೋದ ಪೊಲೀಸರಿಗೆ ಹಲವು ಕೇಸ್​ಗಳ ವಾರಂಟ್​ನಲ್ಲಿ ಬೇಕಾಗಿದ್ದ ಆರೋಪಿಯೇ ಸಿಕ್ಕಿಬಿದ್ದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. 

ಸುಮಾರು 11 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಕಾಲಾ ಅನ್ಸರ್​ ​ ಎಂಬಾತನ ದೊಡ್ಡಪೇಟೆ ಪೊಲೀಸರಿಗೆ ಅವಶ್ಯಕವಾಗಿ ಬೇಕಾಗಿದ್ದ. ಆದರೆ ಪೊಲೀಸರ ಕಣ್ತಿಪ್ಪಿಸಿ ತಿರುಗಾಡುತ್ತಿದ್ದ. ಈತನ ಮೇಲೆ ಗಾಂಜ ಮಾರಾಟ ಸೇರಿದಂತೆ ಕೊಲೆಯತ್ನ ಹಾಗೂ ರಾಬರಿ ಕೇಸ್​ಗಳಿದ್ದವು. 

ಈ ಮಧ್ಯೆ ಕಾಲಾ ಅನ್ಸರ್​  ಬುದ್ಧಾನಗರದಲ್ಲಿ ಅಲ್ಲಿನ ಸ್ಥಳೀಯ ಯುವಕನ ಜೊತೆಗೆ ಕಿರಿಕ್ ತೆಗೆದು ತೆಗೆದು ಜಗಳವಾಡುತ್ತಿದ್ದ. ಇದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬೈಕ್​ನಲ್ಲಿ  ಬಂದ ಪೊಲೀಸರಿಗೆ ತಕ್ಷಣವೇ ಜಗಳವಾಡುತ್ತಿರುವುದು ಅನ್ಸರ್ ಎಂಬುದು ಗೊತ್ತಾಗಿದೆ. ಹಿಂದೆ ಮುಂದೆ ನೋಡದೇ ಆತನನ್ನು ಹಿಡಿದ ಪೊಲೀಸರು ಆತನ ಪರಿಶೀಲನೆ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದಾನಾ ಎಂದು ಚೆಕ್ ಮಾಡಿ ಆತನ ಕೈಗೆ ಕೋಳ ಹಾಕಿ ಅಲ್ಲಿಯೇ ಆಟೋದಲ್ಲಿ  ಬಂಧಿಸಿದ್ದಾರೆ. ಬಳಿಕ ಮೇಲಾಧಿಕಾರಿಗಳಿಗೆ ಫೋನ್ ಮಾಡಿ ಪೊಲೀಸ್ ವ್ಯಾನ್​ ಕರೆಸಿಕೊಂಡು ಆತನನ್ನು ಕರೆದೊಯ್ದಿದ್ದಾರೆ.  

ಕಾನ್​ಸ್ಟೇಬಲ್​ ನಿತಿನ್ ಮತ್ತು ರಮೇಶ್ ತೋರಿದ ಸಮಯ ಪ್ರಜ್ಞೆಯಿಂದ ಪೊಲೀಸರಿಗೆ ಬೇಕಿದ್ದ ಆರೋಪಿ ಪತ್ತೆಯಾಗಿದ್ದಾನೆ. ಇನ್ನೂ  ಘಟನೆಯ ದೃಶ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ