ಶಿವಮೊಗ್ಗಕ್ಕಿಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಭೇಟಿ | ಕುತೂಹಲ ಮೂಡಿಸಿದ ವಿಸಿಟ್‌!

Home Minister Dr. G. Parameshwara will visit Shivamogga today following the suicide of a Valmiki Corporation official.

ಶಿವಮೊಗ್ಗಕ್ಕಿಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಭೇಟಿ | ಕುತೂಹಲ ಮೂಡಿಸಿದ ವಿಸಿಟ್‌!
Home Minister, g parameshwara,Shivamogga today

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ಶಿವಮೊಗ್ಗಕ್ಕೆ ಇವತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್‌ರವರು ಆಗಮಿಸಲಿದ್ದಾರೆ. ವಾಲ್ಮೀಕಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಅವರು, ಇಂದು ಸಂಜೆ ಮೃತರ ಕುಟುಂಬಸ್ಥರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಅಲ್ಲದೆ ಚಂದ್ರಶೇಖರನ್‌ ಪಿ ರವರ ಆತ್ಮಹತ್ಯೆ ಕೇಸ್‌ನ ತನಿಖೆಯ ಬಗ್ಗೆ ವಿಶ್ವಾಸ ನೀಡಲಿದ್ದಾರೆ. 

ಕಳೆದ ಎರಡು ದಿನಗಳಿಂದ ಅಧಿಕಾರಿಯ ಮನೆಗೆ ಹಲವು ರಾಜಕೀಯ ನಾಯಕರು ಭೇಟಿ ನೀಡುತ್ತಿದ್ದು ಸಾಂತ್ವನ ಹೇಳುತ್ತಿದ್ದಾರೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮುಖಂಡರು ಭೇಟಿಯಾಗಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. 

ಇವತ್ತು ಮಧ್ಯಾಹ್ನ 3 ಗಂಟೆಗೆ ಚಂದ್ರಶೇಖರನ್‌ ನಿವಾಸಕ್ಕೆ ಗೃಹ ಸಚಿವ ಪರಮೇಶ್ವರ್‌ರವರು ಭೇಟಿ ನೀಡಲಿದ್ಧಾರೆ.  

ಬೆಂಗಳೂರಿನಿಂದ ವಿಮಾನದ ಮೂಲಕ ಶಿವಮೊಗ್ಗಕ್ಕೆ ಅವರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಗೃಹಸಚಿವರು ಬರುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆಯು ಅಲರ್ಟ್‌ ಆಗಿದ್ದು ಹಲವು ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿದ್ದಾರೆ. 

ಇನ್ನೂ ಪರಮೇಶ್ವರ್‌ ಭೇಟಿ ವೇಳೆ ಪೊಲೀಸ್‌ ಇಲಾಖೆಯ ಚಟುವಟಿಕೆಗಳ ಬಗ್ಗೆ ಗೃಹಸಚಿವರು ಪರಿಶೀಲನೆ ನಡೆಸಿ, ಕೆಲವು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇಲಾಗಿ ರೌಡಿಗಳ ಹಾವಳಿ ಮತ್ತು ಇವತ್ತು ನಡೆದಿರುವ ಘಟನೆಯ ಬಗ್ಗೆಯು ಮಾಧ್ಯಮಗಳು ಗೃಹಸಚಿವರ ಗಮನ ಸೆಳೆಯುವ ಸಾಧ್ಯತೆಗಳಿವೆ. 

Home Minister Dr. G. Parameshwara will visit Shivamogga today following the suicide of a Valmiki Corporation official. He will meet the family of the deceased this evening and assure them of a thorough investigation into Chandrashekhar P's suicide case. Several political leaders, including Minister Madhu Bangarappa, BJP State President BV Vijayendra, and Kota Srinivasa Poojary, have already visited the family.