ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯ ದಿನಾಂಕ ತೀರ್ಮಾನ! ಮೂರು ದಿನ!

Hindu Mahasabha Ganapati and Om Ganapati Procession and Eid Milad Procession Dates Finalised! Three days!ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯ ದಿನಾಂಕ ತೀರ್ಮಾನ! ಮೂರು ದಿನ!

ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯ ದಿನಾಂಕ ತೀರ್ಮಾನ! ಮೂರು ದಿನ!

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಶಿವಮೊಗ್ಗದಲ್ಲಿ ಈ ಸಲ ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಒಂದೇ ದಿನ ಬರುತ್ತದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿಚಾರ ತಾರ್ಕಿಕ ಅಂತ್ಯಕಂಡಿದ್ದು, ಮುಸ್ಲಿಮರು ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಅಕ್ಟೋಬರ್​ 1 ಭಾನುವಾರ ನಡೆಸಲು ತೀರ್ಮಾನಿಸಿದ್ದಾರೆ. 

ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಪೊಲೀಸ್‌ ಇಲಾಖೆ ಈ ನಿಟ್ಟಿನಲ್ಲಿ ನಿರಂತರ ಶಾಂತಿ ಸಭೆಗಳನ್ನು ನಡೆಸಿಕೊಂಡು ಬಂದಿದೆ. ಈ ಸಂಬಂಧ ಹಿಂದೂ ಮಹಾಸಭಾ ಹಾಗೂ ಓಂ ಗಣಪತಿ ಮತ್ತು ಮುಸ್ಲಿಮ್ ಸಂಘಟನೆಗಳ ಮುಖಂಡರು ನಡೆಸಿದ ಮಾತುಕತೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.  

ಹಿಂದೂ ಮಹಾಸಭಾ, ಓ ಗಣಪತಿ ಸಮಿತಿ ಹಾಗೂ ಸುನ್ನಿ ಜಮೈತುಲ್ ಉಲೆಮಾ ಕಮಿಟಿಯ ಮುಖಂಡರು ಶಿವಮೊಗ್ಗದಲ್ಲಿನ ಶಾಂತಿಗಾಗಿ ಪರಸ್ಪರ ಸಹಕಾರದ ನಿರ್ಧಾರಕ್ಕೆ ಬಂದಿದ್ದಾರೆ. 

  • ಸಮಿತಿಯಲ್ಲಿ ಆದ ತೀರ್ಮಾನದಂತೆ ಸೆಪ್ಟೆಂಬರ್ 28ರಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆಯಲಿದೆ. 

  • ಅಂದೇ ನಡೆಯಬೇಕಿದ್ದ ಈದ್ ಮಿಲಾದ್‌ ಮೆರವಣಿಗೆಯನ್ನು ಅಕ್ಟೋಬರ್​ 1ರ ಭಾನುವಾರ ನಡೆಸಲು ಮುಸ್ಲಿಂ ಸಂಘಟನೆಗಳು ತೀರ್ಮಾನಿಸಿವೆ

  • ಅಕ್ಟೋಬರ್​ ರಂದು ನಿಗದಿಯಾಗಿದ್ದ ಓಂ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯನ್ನು ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್​ 30 ರಂದು ಶನಿವಾರ ನಡೆಸಲು ತೀರ್ಮಾನಿಸಲಾಗಿದೆ. 

  

ಈ ಸಂಬಂಧ  ಮುಸ್ಲಿಮ್​ ಸಂಘಟನೆಗಳ ಪರವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆಫ್ತಬ್​ ಪರ್ವಿಜ್ ಮಾದ್ಯಮಗಳಿಗೆ ಕೈಗೊಂಡ ತೀರ್ಮಾನದ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್​ 1 ರಂದು ಮಧ್ಯಾಹ್ನ ಮೂರು ಗಂಟೆಗೆ ಈದ್ ಮಿಲಾದ್​ ಮೆರವಣಿಗೆ ನಡೆಯಲಿದ್ದು, ರಾತ್ರಿ ವೇಳೆಗೆ ಅಮೀರ್ ಅಹಮದ್ ಸರ್ಕಲ್​ನಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.  




ಇನ್ನಷ್ಟು ಸುದ್ದಿಗಳು