ಗೃಹಸಚಿವರ ತವರು ತೀರ್ಥಹಳ್ಳಿಯ DYSP ಶಾಂತವೀರ.ಇ, ಜಮಖಂಡಿಗೆ ಟ್ರಾನ್ಸಫರ್​/ BREAKING NEWS

ಒಂದೇ ದಿನ 45 ಮಂದಿ ಡಿವೈಎಸ್​ಪಿಗಳನ್ನು ವಿವಿಧ ಕಡೆ ಟ್ರಾನ್ಸಫರ್ ಮಾಡಿರುವ ರಾಜ್ಯಸರ್ಕಾರ, ಈ ತಕ್ಷಣದಿಂದಲೇ ಜಾರಿಬರುವಂತೆ ಆದೇಶ ಮಾಡಿದೆ. ಇ

ಗೃಹಸಚಿವರ ತವರು ತೀರ್ಥಹಳ್ಳಿಯ DYSP ಶಾಂತವೀರ.ಇ, ಜಮಖಂಡಿಗೆ ಟ್ರಾನ್ಸಫರ್​/ BREAKING NEWS

ರಾಜ್ಯ ಸರ್ಕಾರ, ಗೃಹ ಇಲಾಖೆಯಲ್ಲಿ ಕಳೆದ ಕೆಲದಿನಗಳಿಂದ ಭಾರೀ ಬದಲಾವಣೆಯನ್ನು ಮಾಡುತ್ತಿದೆ. ಇದರ ನಡುವೆ ಇವತ್ತು ಇದ್ದಕ್ಕಿದ್ದಂತೆ 45 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಬಿದ್ದಿದೆ. ಅದರಲ್ಲಿ ಗಮನಾರ್ಹ ಸಂಗತಿ ಅಂದರೆ, ಗೃಹಸಚಿವ ಆರಗ ಜ್ಞಾನೇಂದ್ರರ ತವರು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್​ಪಿ ವರ್ಗಾವಾಗಿದ್ದಾರೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ತೀರ್ಥಹಳ್ಳಿ ಡಿವೈಎಸ್​ಪಿಯಾಗಿರುವ ಶಾಂತವೀರ. ಇ. ರವರನ್ನ ಭಾಗಲಕೋಟೆಯ ಜಮಖಂಡಿ ವಿಭಾಗಕ್ಕೆ ಟ್ರಾನ್ಸಫರ್ ಮಾಡಲಾಗಿದೆ. ಅವರ ಜಾಗಕ್ಕೆ ಸಿಐಡಿ ವಿಭಾಗದಲ್ಲಿ ಪ್ರೊಬೇಶನರಿ ಡಿವೈಎಸ್​ಪಿ ಆಗಿ ಇತ್ತೀಚೆಗಷ್ಟೆ ಪ್ಲೇಸ್ ಪಡೆದುಕೊಂಡಿದ್ದ ಗಜಾನನ ವಾಮನ ಸುತಾರ್​ ರವರು ವರ್ಗಾವಾಗಿದ್ದಾರೆ. 

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

45 ಡಿವೈಎಸ್​ಪಿಗಳ ವರ್ಗ 

ಒಂದೇ ದಿನ 45 ಮಂದಿ ಡಿವೈಎಸ್​ಪಿಗಳನ್ನು ವಿವಿಧ ಕಡೆ ಟ್ರಾನ್ಸಫರ್ ಮಾಡಿರುವ ರಾಜ್ಯಸರ್ಕಾರ, ಈ ತಕ್ಷಣದಿಂದಲೇ ಜಾರಿಬರುವಂತೆ ಆದೇಶ ಮಾಡಿದೆ. ಇನ್ನೂ ತೀರ್ಥಹಳ್ಳಿಯ ಡಿವೈಎಸ್​ಪಿಯಾಗಿದ್ದ ಶಾಂತವೀರರವರ ವರ್ಗಾವಣೆ ಕತೂಹಲ ಮೂಡಿಸಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link