ಗೃಹಸಚಿವರ ತವರು ತೀರ್ಥಹಳ್ಳಿಯ DYSP ಶಾಂತವೀರ.ಇ, ಜಮಖಂಡಿಗೆ ಟ್ರಾನ್ಸಫರ್/ BREAKING NEWS
ಒಂದೇ ದಿನ 45 ಮಂದಿ ಡಿವೈಎಸ್ಪಿಗಳನ್ನು ವಿವಿಧ ಕಡೆ ಟ್ರಾನ್ಸಫರ್ ಮಾಡಿರುವ ರಾಜ್ಯಸರ್ಕಾರ, ಈ ತಕ್ಷಣದಿಂದಲೇ ಜಾರಿಬರುವಂತೆ ಆದೇಶ ಮಾಡಿದೆ. ಇ
ರಾಜ್ಯ ಸರ್ಕಾರ, ಗೃಹ ಇಲಾಖೆಯಲ್ಲಿ ಕಳೆದ ಕೆಲದಿನಗಳಿಂದ ಭಾರೀ ಬದಲಾವಣೆಯನ್ನು ಮಾಡುತ್ತಿದೆ. ಇದರ ನಡುವೆ ಇವತ್ತು ಇದ್ದಕ್ಕಿದ್ದಂತೆ 45 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಬಿದ್ದಿದೆ. ಅದರಲ್ಲಿ ಗಮನಾರ್ಹ ಸಂಗತಿ ಅಂದರೆ, ಗೃಹಸಚಿವ ಆರಗ ಜ್ಞಾನೇಂದ್ರರ ತವರು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ವರ್ಗಾವಾಗಿದ್ದಾರೆ.
ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?
ತೀರ್ಥಹಳ್ಳಿ ಡಿವೈಎಸ್ಪಿಯಾಗಿರುವ ಶಾಂತವೀರ. ಇ. ರವರನ್ನ ಭಾಗಲಕೋಟೆಯ ಜಮಖಂಡಿ ವಿಭಾಗಕ್ಕೆ ಟ್ರಾನ್ಸಫರ್ ಮಾಡಲಾಗಿದೆ. ಅವರ ಜಾಗಕ್ಕೆ ಸಿಐಡಿ ವಿಭಾಗದಲ್ಲಿ ಪ್ರೊಬೇಶನರಿ ಡಿವೈಎಸ್ಪಿ ಆಗಿ ಇತ್ತೀಚೆಗಷ್ಟೆ ಪ್ಲೇಸ್ ಪಡೆದುಕೊಂಡಿದ್ದ ಗಜಾನನ ವಾಮನ ಸುತಾರ್ ರವರು ವರ್ಗಾವಾಗಿದ್ದಾರೆ.
ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ
45 ಡಿವೈಎಸ್ಪಿಗಳ ವರ್ಗ
ಒಂದೇ ದಿನ 45 ಮಂದಿ ಡಿವೈಎಸ್ಪಿಗಳನ್ನು ವಿವಿಧ ಕಡೆ ಟ್ರಾನ್ಸಫರ್ ಮಾಡಿರುವ ರಾಜ್ಯಸರ್ಕಾರ, ಈ ತಕ್ಷಣದಿಂದಲೇ ಜಾರಿಬರುವಂತೆ ಆದೇಶ ಮಾಡಿದೆ. ಇನ್ನೂ ತೀರ್ಥಹಳ್ಳಿಯ ಡಿವೈಎಸ್ಪಿಯಾಗಿದ್ದ ಶಾಂತವೀರರವರ ವರ್ಗಾವಣೆ ಕತೂಹಲ ಮೂಡಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link