SHIVAMOGGA | Dec 10, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬರ ಕಾರನ್ನ ಜಖಂಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಿಜೆಪಿ ಕಾರ್ಯಕರ್ತನ ಕಾರು ಪೀಸ್ ಪೀಸ್
ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ ಕೃಷ್ಣ ಎಂಬವರ ಕಾರನ್ನು ಜಖಂಗೊಳಿಸಲಾಗಿದೆ. ಮತ್ತು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ನಿನ್ನೆ ಒಂಬತ್ತೆ ತಾರೀಖು ಎರಡು ಗಂಟೆ ಸುಮಾರಿ ಮುಖ ಕವರ್ ಮಾಡುವ ಜರ್ಖೀನ್ ಧರಿಸಿ ಬಂದ ಮೂವರು ದುಷ್ಕರ್ಮಿಗಳು ಲಟ್ಟಾ ಬಳಸಿ ಕಾರಿನ ಗಾಜುಗಳನ್ನ ಪುಡಿ ಮಾಡುತ್ತಾರೆ. ಅಲ್ಲದೆ ಹಲವು ಸಲ ಕಾರಿಗೆ ಹೊಡೆದು ಜಖಂಗೊಳಿಸುತ್ತಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
READ : Haratalu halappa / ಮಧು ಬಂಗಾರಪ್ಪ ,ಕುಮಾರ್ ಬಂಗಾರಪ್ಪ ಒಂದಾಗಲಿ ಎಂದ ಹರತಾಳು ಹಾಲಪ್ಪ
ಫೇಸ್ಬುಕ್ ಪೋಸ್ಟ್
ಇನ್ನೂ ಗೋಕುಲ್ರವರು ಬರೆದುಕೊಂಡ ಫೇಸ್ ಬುಕ್ ಪೋಸ್ಟ್ ನ ಹಿನ್ನೆಲೆಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಗೋಕುಲ್ರವರು ಭದ್ರಾವತಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಗ್ಗೆ ಪ್ರಸ್ತಾಪಿಸಿ ಅದರ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಅವರ ಮಗನ ಬಗ್ಗೆ ಆರೋಪಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದರು
ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್
.ಈ ಪೋಸ್ಟ್ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಲಾಗುತ್ತಿದೆ. ಈ ಬಗ್ಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ನ ಪೊಲೀಸರು ತನಿಖೆ ನಡೆಸಿ ಸ್ಪಷ್ಟತೆ ನೀಡಬೇಕಿದೆ.
