ರಸ್ತೆ ಪಕ್ಕ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ | ತಡರಾತ್ರಿ 3 ಗಂಟೆಗೆ ಕುತ್ತಿಗೆ ಮೇಲಿತ್ತು ಕತ್ತಿ | ಶಾಕಿಂಗ್ ಘಟನೆ

Here is the details of the incident that took place in Shimoga Rural Police Stationಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆ ವಿವರ ಇಲ್ಲಿದೆ

ರಸ್ತೆ ಪಕ್ಕ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ | ತಡರಾತ್ರಿ 3 ಗಂಟೆಗೆ ಕುತ್ತಿಗೆ ಮೇಲಿತ್ತು ಕತ್ತಿ |  ಶಾಕಿಂಗ್ ಘಟನೆ



KARNATAKA NEWS/ ONLINE / Malenadu today/ Oct 17, 2023 SHIVAMOGGA NEWS

ಶಿವಮೊಗ್ಗದಲ್ಲಿ ಎರಡು ದಿನಗಳ ಹಿಂದೆ ಕುತ್ತಿಗೆಗೆ ಚಾಕು ಇಟ್ಟು ಹಣ ರಾಬರಿ ಮಾಡಿಕೊಂಡು ಹೋದ ಘಟನೆಯೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ 15 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shimoga Rural Police Station) ನಲ್ಲಿ ಕೇಸ್ ದಾಖಲಾಗಿದೆ. 

ಇಲ್ಲಿನ ಗುರುಪುರದಲ್ಲಿ ಈ ಘಟನೆ ನಡೆದಿದ್ದು, ಲಾರೀ ಚಾಲಕರೊಬ್ಬರು 14 ನೇ ತಾರೀಖು ರಾತ್ರಿ ತಮ್ಮ ಲಾರಿಯನ್ನು ಸೈಡ್​ಗೆ ನಿಲ್ಲಿಸಿ ಅದರಲ್ಲಿಯೇ ಮಲಗಿದ್ದರು. ಈ ವೇಳೆ ತಡರಾತ್ರಿ ಮೂರು ಗಂಟೆ ಹೊತ್ತಿಗೆ ಇಬ್ಬರು ದುಷ್ಕರ್ಮಿಗಳು ಲಾರಿ ಹತ್ತಿ ಕರ್ಟನ್​ ಸರಿಸಿ, ಚಾಲಕನ ಕುತ್ತಿಗೆ ಚಾಕು ಹಿಡಿದಿದ್ದಾರೆ.  

ಕುತ್ತಿಗೆಗೆ ಚಾಕು ಇಟ್ಟು ಪಿರ್ಯಾದಿಯವರನ್ನು ಎಬ್ಬಿಸಿ ನಿನ್ನ ಹತ್ತಿರ ಎಷ್ಟೋ ಹಣ ಇದೆ ಕೊಡು ಇಲವಾದರೆ ನಿನ್ನನ್ನು ಚಾಕುವಿನಿಂದ ಕುತ್ತಿಗೆಯನ್ನು ಕೊಯು ಸಾಯಿಸುವುದಾಗಿ ಹೆದರಿಸಿ ಚಾಲಕನ ಬಳಿ ಇದ್ದ 14,000/- ರೂ ನಗದು ಹಣ ಮತ್ತು 10,000/- ಬೆಲೆಯ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು ತಮ್ಮೊಂದಿಗೆ ಬಂದಿದ್ದ ಇನ್ನೊಬ್ಬನ ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ. 

ಈ ಸಂಬಂಧ  IPC 1860 (U/s-397 ಅಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ