ಗಾಂಧಿ ಬಜಾರ್​ ನಲ್ಲಿ ಉಗ್ರ ನರಸಿಂಹನ ದರ್ಶನ! ಹಿಂದೂ ಮಹಾಸಭಾ ಗಣಪತಿಯ ಅಲಂಕಾರ ಹೇಗಿದೆ ನೋಡಿ

Malenadu Today

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ನಿನ್ನೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ ಸಡಗರದಿಂದ ನಡೆದಿದೆ. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 

ವಿಶೇಷವಾಗಿ ಗಾಂಧಿ ಬಜಾರ್​ನ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಅಲಂಕಾರವನ್ನು ಮಾಡಲಾಗಿದ್ದು, ವಿಶೇಷವಾಗಿ ಕಾಣುತ್ತಿದೆ. 

ಹಿಂದೂಮಹಾಸಭಾ ಅಲಂಕಾರ ಸಮಿತಿಯು ಈ ಸಲ ಉಗ್ರ ನರಸಿಂಹನ ಅಲಂಕಾರವನ್ನು ಆಯ್ದುಕೊಂಡಿದ್ದು, ಅದರಂತೆ ನಿನ್ನೆ ಸಂಜೆ ಹೊತ್ತಿಗೆ ಪ್ರವೇಶದ್ವಾರದಲ್ಲಿ ಉಗ್ರ ನರಸಿಂಹನ ಮೂರ್ತಿಯನ್ನು ಕೂರಿಸಲು ಕಲಾವಿದರ ತಂಡ ಮುಂದಾಯ್ತು. 

ಬೃಹತ್ ಕ್ರೇನ್ ಬಳಸಿ, ಹಲವು ಕಲಾವಿದರು, ಈ ಮೊದಲೇ ತಯಾರಿಸಿದ್ದ ಉಗ್ರನರಸಿಂಹನ ಮೂರ್ತಿಯನ್ನು,ತಾತ್ಕಾಲಿಕವಾಗಿ ಸಿದ್ದಪಡಿಸಿರುವ ದ್ವಾರ ಬಾಗಿಲನ ಮೇಲೆ ಕೂರಿಸಿದರು. ಕಲಾವಿದರ ಕೆಲಸ ಹಾಗೂ ಅಲಂಕಾರವನ್ನು ಕಣ್ತುಂಬಿಕೊಳ್ಳಲು ನಿನ್ನೆ ತಡರಾತ್ರಿಯಾದರೂ ಶಿವಪ್ಪ ನಾಯಕ ಮೂರ್ತಿಯ ಸಮೀಪ ನೂರಾರು ಜನರು ಜಮಾಯಿಸಿದ್ದರು. 

ಮೊಬೈಲ್​ಗಳಲ್ಲಿ ರೀಲ್ಸ್​ ಮಾಡಲು ವಿಡಿಯೋ ತೆಗೆಯುತ್ತಿದ್ದವರ ಸಂಖ್ಯೆಯಂತು ವಿಶೇಷವಾಗಿ. ಅದರಲ್ಲಿಯು ಉಗ್ರ ನರಸಿಂಹರ ಮೂರ್ತಿಯನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಹಿಡಿಯುವಾಗ  ಜನರು ಮೊಬೈಲ್​ಗಳಲ್ಲಿ ದೃಶ್ಯವನ್ನು ಸೆರೆ ಹಿಡಿದು ಘೋಷಣೆ ಕೂಗುತ್ತಿದ್ದರು. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

Share This Article