ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

Malenadu Today

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಿಲ್ಲೇಶ್ವರದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೈಕ್​ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಅವರ ಸಮೀಪವೇ ಹೋಗುತ್ತಿದ್ದ ಲಾರಿಯೊಂದರಿಂದ ಮರದ ತುಂಡು ಬಿದ್ದಿದೆ. ಪರಿಣಾಮ ಘಟನೆಯಲ್ಲಿ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ 

ಗಾಯಗೊಂಡವರನ್ನ 32 ವರ್ಷದ ನವೀನ್​ ಎಂದು ಗುರುತಿಸಲಾಗಿದೆ. ನಿನ್ನೆ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣವಾಗಿದೆ. 

ಇಲ್ಲಿನ ಬಿಲ್ಲೇಶ್ವರ ಗ್ರಾಮದ ಬಳಿಯಲ್ಲಿರುವ ರಸ್ತೆಯಲ್ಲಿ ನವೀನ್ ಬೈಕ್​ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಟಿಂಬರ್ ಲಾರಿಯೊಂದು ಸಾಗುತ್ತಿತ್ತು. ಲೋಡ್ ಗಾಡಿಯಿಂದ ಮರದ ತುಂಡೊಂದು ಕಳಚಿ ಬಿದ್ದಿದೆ. ಬಿದ್ದ ಮರ ನೇರವಾಗಿ ನವೀನ್​ರ ಕುತ್ತಿಗೆ ಬಡಿದಿದ್ದು, ಬಡಿದ ರಭಸಕ್ಕೆ ಕುತ್ತಿಗೆ ತುಂಡಾಗಿ ಗಾಯವಾಗಿದೆ. 

ವಿಷಯ ತಿಳಿದ ತಕ್ಷಣವೇ ಅವರನ್ನು ಹುಂಚಾ ಪ್ರಾಥಮಿಕ ಕೇಂದ್ರಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.  


ಇನ್ನಷ್ಟು ಸುದ್ದಿಗಳು 

 


 

Share This Article