ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?
The CCB police conducted a raid to bring Gagan Kadur, the accused in the ticket deal case, to Shimoga.ಟಿಕೆಟ್ ಡೀಲ್ ಪ್ರಕರಣದ ಆರೋಪಿ ಗಗನ್ ಕಡೂರ್ರನ್ನ ಶಿವಮೊಗ್ಗಕ್ಕೆ ಕರೆತಂದು ಸಿಸಿಬಿ ಪೊಲೀಸರು ಮಹಜರ್ ನಡೆಸಿದ್ದಾರೆ
KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’
ಟಿಕೆಟ್ ಡೀಲ್ ಪ್ರಕರಣ ಸಂಬಂಧ ಚಿಕ್ಕಮಗಳೂರಿಗೆ ಚೈತ್ರಾ ಕುಂದಾಪುರ & ಟೀಂನ್ನ ಮಹಜರ್ಗೆ ಕರೆತಂದಿದ್ದ ತನಿಖಾ ತಂಡ ಇದೀಗ ಶಿವಮೊಗ್ಗಕ್ಕೆ ಆಗಮಿಸಿದ ಮಹಜರ್ ನಡೆಸಿದೆ. ಪ್ರಕರಣದ ಆರೋಪಿಯಾದ ಗಗನ್ ಕಡೂರನ್ನ ಶಿವಮೊಗ್ಗದ ಪ್ರಮುಖ ಕಚೇರಿಯ ಬಳಿಗೆ ಕರೆತಂದು ಪೊಲೀಸರು ಮಹಜರ್ ನಡೆಸಿದ್ದಾರೆ.
ತನಿಖಾ ತಂಡದ ಜೊತೆಗೆ ಬಂದಿರುವ ಸಿಸಿಬಿ ಪೊಲೀಸರು ಗೌಡಸ್ವಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಪ್ಯಾರಡೇಸ್ ಬಳಿ ಹಾಗೂ ಕೆಲವು ಆಯ್ದ ಸ್ಥಳದಲ್ಲಿ ಮಹಜರ್ ನಡೆಸಿದ್ದಾರೆ.ಪ್ರಕರಣದ ಭಾಗಿ ಗಗನ್ ಕಡೂರು, ಶಿವಮೊಗ್ಗದ ಮುಖ್ಯ ಕಚೇರಿ ಬಳಿಯಲ್ಲಿ ಉದ್ಯಮಿಯಿಂದ 50 ಲಕ್ಷ ರೂ ಗಳನ್ನು ಗಗನ್ ಕಡೂರು ಪಡೆದು ಚೈತ್ರ ಕುಂದಾಪುರಕ್ಕೆ ನೀಡಿದ್ದ ಎಂಬುದು ತನಿಖೆಯಲ್ಲಿ ಹೊರಬಿದ್ದಿತ್ತು. ಹಾಗೂ ಎಫ್ಐಆರ್ನಲ್ಲಿ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳ ಮಹಜರ್ ಗಾಗಿ ಸಿಸಿಬಿ ಇನ್ಸಪೆಕ್ಟರ್ ಭರತ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಇದ್ದ ತಂಡ ಶಿವಮೊಗ್ಗ ನಗರಕ್ಕೆ ಆರೋಪಿಯನ್ನ ಕರೆತಂದು ಮಹಜರ್ ನಡೆಸಿದೆ. ಸ್ಥಳದಲ್ಲಿ ಆರೋಪಿ ಗಗನ್ ಕಡೂರ್ರನ್ನ ನಿಲ್ಲಿಸಿ ಪೋಟೊ ತೆಗೆದುಕೊಂಡು ಪೊಲೀಸರು ವಾಪಸ್ ತೆರಳಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ