ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?

The CCB police conducted a raid to bring Gagan Kadur, the accused in the ticket deal case, to Shimoga.ಟಿಕೆಟ್ ಡೀಲ್ ಪ್ರಕರಣದ ಆರೋಪಿ ಗಗನ್ ಕಡೂರ್​ರನ್ನ ಶಿವಮೊಗ್ಗಕ್ಕೆ ಕರೆತಂದು ಸಿಸಿಬಿ ಪೊಲೀಸರು ಮಹಜರ್ ನಡೆಸಿದ್ದಾರೆ

ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’

ಟಿಕೆಟ್ ಡೀಲ್ ಪ್ರಕರಣ ಸಂಬಂಧ ಚಿಕ್ಕಮಗಳೂರಿಗೆ ಚೈತ್ರಾ ಕುಂದಾಪುರ & ಟೀಂನ್ನ ಮಹಜರ್​ಗೆ ಕರೆತಂದಿದ್ದ ತನಿಖಾ ತಂಡ ಇದೀಗ ಶಿವಮೊಗ್ಗಕ್ಕೆ ಆಗಮಿಸಿದ ಮಹಜರ್​ ನಡೆಸಿದೆ. ಪ್ರಕರಣದ ಆರೋಪಿಯಾದ ಗಗನ್ ಕಡೂರನ್ನ ಶಿವಮೊಗ್ಗದ ಪ್ರಮುಖ ಕಚೇರಿಯ ಬಳಿಗೆ ಕರೆತಂದು ಪೊಲೀಸರು ಮಹಜರ್ ನಡೆಸಿದ್ದಾರೆ. 

ತನಿಖಾ ತಂಡದ ಜೊತೆಗೆ ಬಂದಿರುವ ಸಿಸಿಬಿ ಪೊಲೀಸರು ಗೌಡಸ್ವಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಪ್ಯಾರಡೇಸ್​ ಬಳಿ ಹಾಗೂ ಕೆಲವು ಆಯ್ದ ಸ್ಥಳದಲ್ಲಿ ಮಹಜರ್​ ನಡೆಸಿದ್ದಾರೆ.ಪ್ರಕರಣದ ಭಾಗಿ ಗಗನ್ ಕಡೂರು, ಶಿವಮೊಗ್ಗದ ಮುಖ್ಯ ಕಚೇರಿ  ಬಳಿಯಲ್ಲಿ  ಉದ್ಯಮಿಯಿಂದ 50 ಲಕ್ಷ ರೂ ಗಳನ್ನು ಗಗನ್ ಕಡೂರು ಪಡೆದು ಚೈತ್ರ ಕುಂದಾಪುರಕ್ಕೆ ನೀಡಿದ್ದ ಎಂಬುದು ತನಿಖೆಯಲ್ಲಿ ಹೊರಬಿದ್ದಿತ್ತು. ಹಾಗೂ ಎಫ್ಐಆರ್​ನಲ್ಲಿ ದಾಖಲಾಗಿತ್ತು.



ಈ ಹಿನ್ನೆಲೆಯಲ್ಲಿ ಸ್ಥಳ ಮಹಜರ್ ಗಾಗಿ ಸಿಸಿಬಿ ಇನ್ಸಪೆಕ್ಟರ್ ಭರತ್  ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಇದ್ದ ತಂಡ ಶಿವಮೊಗ್ಗ ನಗರಕ್ಕೆ ಆರೋಪಿಯನ್ನ ಕರೆತಂದು ಮಹಜರ್ ನಡೆಸಿದೆ. ಸ್ಥಳದಲ್ಲಿ ಆರೋಪಿ ಗಗನ್ ಕಡೂರ್​ರನ್ನ ನಿಲ್ಲಿಸಿ ಪೋಟೊ ತೆಗೆದುಕೊಂಡು ಪೊಲೀಸರು ವಾಪಸ್ ತೆರಳಿದ್ದಾರೆ. 




ಇನ್ನಷ್ಟು ಸುದ್ದಿಗಳು