ಕರೆಂಟ್ ಬಿಲ್ ಶಾಕ್! ಕಳೆದ ಸಲಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬರುತ್ತಿದೆಯಾ ವಿದ್ಯುತ್ ಬಿಲ್! ಪವರ್ ತಲೆನೋವು ಏನಿದು!
Electricity bill shock! Is the electricity bill two to three times more than last time? What's a power headache!
KARNATAKA NEWS/ ONLINE / Malenadu today/ Jun 10, 2023 SHIVAMOGGA NEWS
ಬೆಂಗಳೂರು/ ಉಚಿತ ವಿದ್ಯುತ್ನ ಸಮಾಲೋಚನೆಯ ನಡುವೆ, ಇದೀಗ ಗ್ರಾಹಕರ ವಿದ್ಯುತ್ ವಿತರಣ ಕಂಪನಿಗಳು ದುಬಾರಿ ಬಿಲ್ ನೀಡುತ್ತಿದೆ. ಕಳೆದ ತಿಂಗಳಿಗಿಂತಲೂ ದುಪ್ಪಟ್ಟು ಬಿಲ್ಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿಯು ಈ ಬಿಲ್ ವಿತರಣೆಯಾಗುವ ಸಾಧ್ಯತೆ ಇದೆ.
ಡಬ್ಬಲ್ ಬಿಲ್ ಗ್ಯಾರಂಟಿ
500 ಬಿಲ್ ಕಟ್ಟುತ್ತಿದ್ದವರಿಗೆ ಸಾವಿರ ರೂಪಾಯಿ, ಸಾವಿರ ರೂಪಾಯಿ ಕಟ್ಟುತ್ತಿದ್ದವರಿಗೆ 2 ಸಾವಿರ ರೂಪಾಯಿ ಜೂನ್ ತಿಂಗಳ ಬಿಲ್ ನಲ್ಲಿ ಬರುತ್ತಿದೆ. ಇದು ಮಧ್ಯಮವರ್ಗದ ಮಂದಿಯನ್ನ ಹೈರಾಣಾಗಿಸುತ್ತಿದೆಯಷ್ಟೆ ಅಲ್ಲದೆ ಹಲವೆಡೆ ಪ್ರತಿಭಟನೆಗಳು ಸಹ ಆರಂಭವಾಗಿದೆ. ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ತಮ್ಮ ಕರೆಂಟ್ ಬಿಲ್ಗಳನ್ನು ಅಪ್ಲೋಡ್ ಮಾಡುತ್ತಿದ್ದ ಏಪ್ರಿಲ್ ತಿಂಗಳ ಬಿಲ್ ಹಾಗೂ ಮೇ ತಿಂಗಳ ಬಿಲ್ಗಳನ್ನು ಪ್ರದರ್ಶನ ಮಾಡುತ್ತಿದ್ದು, ಯಾಕೀಗೇ ಎಂದು ಪ್ರಶ್ನಿಸುತ್ತಿದ್ದಾರೆ.
ಕರೆಂಟ್ ಬಿಲ್ನಲ್ಲಿ ರಾಜಕಾರಣ
ಇನ್ನೂ ಈ ವಿಚಾರದಲ್ಲಿಯು ರಾಜಕಾರಣ ತಲೆದೂರಿಕೊಂಡು ಬಂದಿದ್ದು, ಕೆಲವರು ಇದು ಬಿಜೆಪಿ ಅಧಿಕಾರದಲ್ಲಿದ್ಧಾಗಿನ ಬಿಲ್, ಇದು ಕಾಂಗ್ರೆಸ್ ಸರ್ಕಾರದ ಬಿಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯವರೇ ಬೆಲೆ ಹೆಚ್ಚು ಮಾಡಿದ್ದರು ಎಂಬ ಟೀಕೆಯು ವ್ಯಕ್ತವಾಗುತ್ತಿದೆ. ಇದಕ್ಕೆ ಉತ್ತರವಾಗಿ ಬಿಜೆಪಿ ಹೆಚ್ಚು ಮಾಡಿದ್ದರೇ, ಕಾಂಗ್ರೆಸ್ನವರು ಕಡಿಮೆ ಮಾಡಲಿ ಎಂಬ ಪ್ರತಿಪಾದನೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ
ಹೆಚ್ಚುವರಿ ಬಿಲ್ ಏಕೆ?
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಕಳೆದ ಮೇ 12ರಂದು ಗೃಹಬಳಕೆಯ ಪ್ರತಿ ಯುನಿಟ್ಗೆ ಸರಾಸರಿ 70 ಪೈಸೆಯಷ್ಟು ದರ ಹೆಚ್ಚಳ ಮಾಡಿತ್ತು. ಈ ದರವೂ ಏಪ್ರಿಲ್ ಒಂದರಿಂದಲೇ ಪೂರ್ವನ್ವಯವಾಗಲಿದೆ ಎಂದು ತಿಳಿಸಿತ್ತು. ಹಾಗಾಗಿ ಏಪ್ರಿಲ್ ಮತ್ತು ಮೇ ತಿಂಗಳ ಹೆಚ್ಚುವರಿ ದರವನ್ನು ಜೂನ್ ತಿಂಗಳ ಬಿಲ್ನಲ್ಲಿ ಸೇರಿಸಿ ನೀಡಲಾಗುತ್ತಿದೆ. ಇದು ದುಬಾರಿ ಬಿಲ್ ಬರಲು ಮೊದಲ ಕಾರಣ ಎನ್ನಲಾಗಿದೆ. ಆದರೆ ಸಾರ್ವಜನಿಕರು ಬಿಲ್ಗಳನ್ನು ನೋಡಿಯೇ ಹೆದರುತ್ತಿದ್ದು, ತಿಂಗಳ ಬಜೆಟ್ನಲ್ಲಿ ಬಿಲ್ ಹೊಂದಿಸುವುದು ಹೇಗೆ ಎಂಬ ಚರ್ಚೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವೆಡೆ ಬಿಲ್ ಇನ್ನೂ ವಿತರಣೆಯಾಗಿಲ್ಲ. ಹಾಗಿದ್ದು ಗ್ರಾಹಕರು ಬೇರೆ ಕಡೆಗಳ ಬಿಲ್ಗಳನ್ನು ನೋಡಿಯೇ ಗಾಬರಿಯಾಗುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟತೆ ಸಿಗಲಿ ಎಂದು ನ್ಯೂಸ್ ವರದಿಗಳನ್ನು ಗಮನಿಸುತ್ತಿದ್ಧಾರೆ.
Chief Minister of Karnataka ಒಬ್ಬರ ತಲೆ ಹೊಡೆದು ಇನ್ನೊಬ್ಬರ ಹೊಟ್ಟೆ ತುಂಬಿಸೋ ಅಧಿಕಾರ ನಿಮಗಿಲ್ಲ ,ನಮಗೆ ಈ ಹಿಂದಿನ ದರಪಟ್ಟಿಯಲ್ಲೇ ವಿದ್ಯುತ್ ಪೂರೈಕೆ ಮಾಡಿ ಸಾಕು ,ಅದರಲ್ಲೂ ಸೋಲಾರ್ ವಿನಾಯತಿಗೂ ಕೂಡ ಕಲ್ಲು ಹಾಕಿದ್ದಿರ, ಇದೇನ್ರಿ ಒದೂವರೆ ಪಟ್ಟು ಹೆಚ್ಚು ವಿದ್ಯುತ್ ಬಿಲ್ ಕಟ್ಟೋದಕ್ಕೆ ನಮಗ್ಯಾವ ಕರ್ಮ????????.. pic.twitter.com/0Sw8f6a70a — Kuldeep Somayaji P. (@kuldeepcet) June 9, 2023