ಬಿಜೆಪಿ ಮೊದಲ ಪಟ್ಟಿ ರಿಲೀಸ್ ವಿಳಂಭ ಆಗುತ್ತಿರುವುದು ಏಕೆ? ಬಿಎಸ್ ಯಡಿಯೂರಪ್ಪ ಹೇಳಿದ್ದೇನು? 70 ವರ್ಷ ಆದವರಿಗೆ ಟಿಕೆಟ್ ಇಲ್ವಾ?
Why is the BJP delaying the release of its first list? What did BS Yediyurappa say? Don't you have a ticket for those who are 70 years old?
![ಬಿಜೆಪಿ ಮೊದಲ ಪಟ್ಟಿ ರಿಲೀಸ್ ವಿಳಂಭ ಆಗುತ್ತಿರುವುದು ಏಕೆ? ಬಿಎಸ್ ಯಡಿಯೂರಪ್ಪ ಹೇಳಿದ್ದೇನು? 70 ವರ್ಷ ಆದವರಿಗೆ ಟಿಕೆಟ್ ಇಲ್ವಾ?](https://malenadutoday.com/uploads/images/202304/image_750x_6434c3cbcbd35.jpg)
MALENADUTODAY.COM/ SHIVAMOGGA / KARNATAKA WEB NEWS
ಭಾರತೀಯ ಜನತಾ ಪಾರ್ಟಿಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ವಿಳಂಭವಾಗುತ್ತಿರೋದು ಏಕೆ? ಈ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (bs yadiyurappa) ಮಾತನಾಡಿದ್ದಾರೆ.
ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ ಆದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಪಟ್ಟಿ ವಿಳಂಭವಾಗುತ್ತಿರುವುದಕ್ಕೆ ಕಾರಣವನ್ನು ನೀಡಿದರು, ಅಳೆದ ತೂಗಿ ಈ ಸಂಬಂಧ ನಿರ್ಧಾರಕ್ಕೆ ಬರಲಾಗುತ್ತಿದೆ. ಸುದೀರ್ಘವಾದ ಚರ್ಚೆಗಳು ನಡೆದಿದ್ದು, ಯಾರ್ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ನಿರ್ಧಾರವಾಗಿದ್ದು,11 ನೇ ತಾರೀಖು ಬೆಳಗ್ಗೆ ಅಥವಾ ಸಂಜೆ ಪಸ್ಟಿ ಬಿಡುಗಡೆಯಾಗಬಹುದು ಎಂದಿದ್ದಾರೆ.
ಅಚ್ಚರಿಯ ಅಭ್ಯರ್ಥಿ ಆಯ್ಕೆ
ಅಲ್ಲದೆ ಈ ಸಲದ ಅಭ್ಯರ್ಥಿಗಳ ಹೆಸರು ಕೇಳಿದರೇ, ಆಶ್ಚರ್ಯವಾಗಲಿದೆ. ಜನರು ನೂರಕ್ಕೆ ನೂರು ನಮ್ಮ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುತ್ತಾರೆ ಎಂದ ಬಿಎಸ್ ಯಡಿಯೂರಪ್ಪ, ನಾವು ಮುಖ್ಯಮಂತ್ರಿ ಎನ್ನುವವರಿಗೆ ಅವಕಾಶ ಇಲ್ಲ ಎಂದಿದ್ದಾರೆ.
ಬಂಡಾಯದ ಬಿಸಿಯಿಲ್ಲ
ವಿರೋಧ ಪಕ್ಷದ ಟೀಕೆಗೂ ನಮಗೂ ಸಂಬಂಧ ಇಲ್ಲ ಎಂದ ಮಾಜಿ ಸಿಎಂ ಮೂರು ದಿನಗಳಿಂದ ಚರ್ಚೆ ನಡೆಸಿ, ಪಟ್ಟಿ ಫೈನಲ್ ಮಾಡಿದ್ದೇವೆ. ಕೆಲವು ಒಬ್ಬರು ಇಬ್ಬರು ಅಸಮಾಧಾನ ಗೊಂಡಿದ್ರೆ, ಅವರನ್ನ ಕರೆದು ಸೂಕ್ತ ಸ್ಥಾನ ಮಾನ ನೀಡುವ ಮಾತುಕತೆ ನಡೆಸ್ತೇವೆ ಎಂದರು. ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳಬಹುದು. ಆದರೆ ಅಂತಹವರನ್ನು ಮನವೊಲಿಸುತ್ತೇವೆ.
70 ವರ್ಷ ಆದವರಿಗೆ ಟಿಕೆಟ್ ಇಲ್ವಾ
ಇನ್ನೂ ಇದೇ ವೇಳೆ 70 ವರ್ಷ ಆದವರಿಗೆ ಟಿಕೆಟ್ ಇಲ್ವಾ ಎಂದು ಕೇಳಿದ ಪ್ರಶ್ನೆಗೆ ಮಾಜಿ ಸಿಎಂ ಅಂತಹ ಯಾವುದೇ ಚರ್ಚೆಗಳಾಗಿಲ್ಲ. ಅದೊಂದು ಸುಳ್ಳು ಸುದ್ದಿಯಷ್ಟೆ ಎಂದಿದ್ದಾರೆ. ಆಥರ ಯಾರ ವಯಸ್ಸನ್ನು ಲೆಕ್ಕಹಾಕಿಲ್ಲ ಎಂದು ತಿಳಿಸಿದರು.
ಪಟ್ಟಿ ಬಿಡುಗಡೆ ತಡವೇಕೆ?
ಇನ್ನೂ ಬಿಜೆಪಿ ಪಟ್ಟಿ ರಿಲೀಸ್ಗೆ ವಿಳಂಭವಾಗುತ್ತಿರುವುದಕ್ಕೆ ಕಾರಣವಾಗಿರೋದು ನಿರೀಕ್ಷಿತ ಪಟ್ಟಿಯಲ್ಲಿ ಆಗುತ್ತಿರುವ ಬದಲಾವಣೆಗಳು. ಹೌದು, ರಾಜ್ಯ ನಾಯಕರು ನೀಡಿರುವ ಪಟ್ಟಿಯಲ್ಲಿ ಹೈಕಮಾಂಡ್ ಸಾಕಷ್ಟು ಬದಲಾವಣೆ ಮಾಡಿದ ಎನ್ನಲಾಗುತ್ತಿದೆ. ಇನ್ನೂ ಕೆಲವು ನಾಯಕರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡುವ ಬಗ್ಗೆಯು ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಕುಟುಂಬ ರಾಜಕಾರಣದ ವಿಚಾರದ ಕಾರಣಕ್ಕೂ ಪಟ್ಟಿ ಬಿಡುಗಡೆ ವಿಳಂಭವಾಗುತ್ತಿದೆ ಎನ್ನಲಾಗುತ್ತಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಆರ್ಎಸ್ಎಸ್ ನಾಯಕರು ಮೂರು ಸರ್ವೆಗಳ ರಿಪೋರ್ಟ್ ಗಮನಿಸಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಲಹೆ ನೀಡಿದ್ದು, ಸರ್ವೆ ರಿಪೋರ್ಟ್ ಬಂದ ನಂತರವಷ್ಟೆ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನು ಸಹ ಓದಿ
Read /ಶಿವಮೊಗ್ಗ ಸಿಟಿಯಲ್ಲಿ Made in Bangalore ಗನ್ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?
Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?
Read / ಶಿವಮೊಗ್ಗದ ಚೆಕ್ಪೋಸ್ಟ್ಗಳಲ್ಲಿ ಕಾಂಚಾಣ ಸಂಚಾರ/ ಒಂದೇ ದಿನ ಪೊಲೀಸರಿಗೆ ಸಿಕ್ಕ ಕ್ಯಾಶ್ ಎಷ್ಟು ಗೊತ್ತಾ?
Read / ಆರ್ಎಂ ಮಂಜುನಾಥ್ ಗೌಡರ ‘ಕೈ’ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?
Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News