ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ರನ್ನು ಜೈಲಿಗೆ ಕಳುಹಿಸಿಯೇ ತೀರುತ್ತೇವೆ/ ಕೆಎಸ್​.ಈಶ್ವರಪ್ಪ ಹೀಗೆ ಹೇಳಿದ್ದೇಕೆ!?

Siddaramaiah and DK Shivakumar will be sent to jail: Why did KS Eshwarappa say this?

KARNATAKA NEWS/ ONLINE / Malenadu today/ SHIVAMOGGA / Apr 23, 2023


ಶಿವಮೊಗ್ಗ / ಶಿವಮೊಗ್ಗ ಪ್ರೆಸ್ ಟ್ರಸ್ಟ್  ಪತ್ರಿಕಾ ಭವನದಲ್ಲಿ ಶನಿವಾರ,  ಶಿವಮೊಗ್ಗ ಪ್ರೆಸ್ ಟ್ರಸ್ಟ್  , (shivamogga press trust ) ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಹಯೋಗದಲ್ಲಿ ಹಮ್ಮಿಕೊ೦ಡಿದ್ದ ಪತ್ರಿಕಾ ಸಂವಾದದಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ರವರು ತಮ್ಮ ರಾಜಕಾರಣದ ಅನುಭವಗಳನ್ನ ಹಂಚಿಕೊಂಡರು. 

ಈ ವೇಳೆ ಅವರು  ಮಾತನಾಡ್ತಾ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಬೇರೆ ಪಕ್ಷದ ಶಾಸಕರು ಅಲ್ಲಿ ಅನುಭವಿಸಿದ ಅತೃಪ್ತಿಯಿಂದ ನಮ್ಮ ಪಕ್ಷದ ಕಡೆ ಬಂದಾಗ ಕರೆದುಕೊಂಡಿದ್ದೇವೆ. 

ಅವರನ್ನು ಪುನಃ ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.ಆದರೆ, ಬಿಜೆಪಿಯಲ್ಲಿ ಭ್ರಷ್ಟಾಚಾರವಿಲ್ಲ. ಜಾತೀಯತೆ ಎಂಬುದು ಇಲ್ಲ. 

ಭ್ರಷ್ಟಾಚಾರ ಇದೆ ಎನ್ನುವುದು ಕೇವಲ ಕಾಂಗ್ರೆಸ್ ಪಕ್ಷ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಅವರನ್ನು ಬಳಸಿಕೊಂಡು ಮಾಡಿದ ಹುನ್ನಾರವಾಗಿದೆ ಎಂದರು. 

ಇದುವರೆಗೆ ಮಾಧ್ಯಮದ ಮೂಲಕವಾದರೂ ಸಾಕ್ಷ್ಯ ಒದಗಿಸಿ ಎಂದರೆ ಇದುವರೆಗೂ ಅದನ್ನು ಮಾಡಿಲ್ಲ ಎಂದು ಆರೋಪಿಸಿದ್ರು. 

ಇನ್ನೂ ಇದೇ ವೇಳೆ  ವಾಸ್ತವವಾಗಿ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂಪಾಯಿ ಹಗರಣವಿದ್ದು, ನಿವೃತ್ತನ್ಯಾಯಾಧೀಶರು ನೀಡಿದ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. 

ಇನ್ನು ಡಿ.ಕೆ. ಶಿವಕುಮಾ‌ರ್​ ಈಗಾಗಲೇ ತಿಹಾರ್ ಜೈಲುವಾಸ ಅನುಭವಿಸಿದ್ದು, ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ ಇವರಿಬ್ಬರನ್ನೂ  ಜೈಲಿಗೆ ಕಳುಹಿಸಿಯೇ ತೀರುತ್ತೇವೆ. 

ಕಬ್ಬಿಣವನ್ನು ಈ ಕೆಂಪಗೆ ಕಾಯಿಸಿಯೇ ಬಡಿಯುತ್ತಾರೆ. ಹಾಗಾಗಿ ಇವರಿಬ್ಬರ ಪಾಪದ ಕೊಡ ಇನ್ನಷ್ಟು ತುಂಬಲಿ ಎಂದು ಕಾಯುತ್ತಿದ್ದೇವೆ. 

ಒಂದಲ್ಲ ಒಂದು ದಿನ ಜೈಲಿಗೆ ಕಳುಹಿಸುವುದು ಗ್ಯಾರಂಟಿ ಎಂದರು. ಈಶ್ವರಪ್ಪನವರ ಮಾತಿನ ವಿಡಿಯೋ ಇಲ್ಲಿದೆ ನೋಡಿ.. 

Malenadutoday.com Social media