ಕುಂಸಿ ಬಳಿ ಟ್ರೈನ್​ಗೆ ಸಿಲುಕಿ ರೈಲ್ವೆ ಸ್ಟೇಷನ್​ ಮಾಸ್ಟರ್​ ನಿಗೂಢ ಸಾವು!

The station master of Anandpur railway station died after being hit by a train near Kumsi. Shivamogga railway police have registered a case.

ಕುಂಸಿ ಬಳಿ ಟ್ರೈನ್​ಗೆ ಸಿಲುಕಿ ರೈಲ್ವೆ ಸ್ಟೇಷನ್​ ಮಾಸ್ಟರ್​ ನಿಗೂಢ ಸಾವು!

SHIVAMOGGA NEWS / ONLINE / Malenadu today/ Nov 22, 2023 NEWS KANNADA

Shivamogga|  Malnenadutoday.com |   ರೈಲ್ವೆ ಹಳಿ ಮೇಲೆ, ರೈಲಿಗೆ ತಲೆಕೊಟ್ಟು ಮೃತಪಟ್ಟ ರೀತಿಯಲ್ಲಿ ರೈಲ್ವೆ  ಸ್ಟೇಷನ್​ ಮಾಸ್ಟರ್ (railway station master ) ಒಬ್ಬರ ಮೃತದೇಹ ಪತ್ತೆಯಾಗಿದೆ. ಇವತ್ತು ಈ ಘಟನೆ ನಡೆದಿದ್ದು, ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಸಂಬಂಧ ರೈಲ್ವೆ ಇಲಾಖೆಗೆ ತನಿಖೆಗೆ ಮುಂದಾಗಿದೆ. 

READ : ಮೆಡಿಕಲ್ ಕಾಲೇಜ್ ಬಳಿ ಪುಟ್​ಪಾತ್ ಮೇಲೆ ಮಲಗಿದ್ದ ಅಪರಿಚಿತ ಸಾವು!

ಏಲ್ಲಿ ? ಹೇಗೆ? ಏನಾಯ್ತು?

‌ಆನಂದಪುರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್‌ ಅರುಣ್‌ ಕುಮಾರ್‌ ಅವರು ಕುಂಸಿಯಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇವತ್ತು  ಬೆಳಗ್ಗೆ ಈ ಘಟನೆ ಸಂಭವಿಸಿದೆ.

ಬೆಂಗಳೂರಿನಿಂದ ಅವರು ಬೆಳಗ್ಗೆ ರೈಲಿನಲ್ಲಿ ಆಗಮಿಸಿದ್ದರು, ಕುಂಸಿ ನಿಲ್ದಾಣದಲ್ಲಿ ಇಳಿದಿದ್ದಾರೆ. ತಾವು ಬಂದಿದ್ದ ರೈಲಿಗೆ ಸಿಲುಕಿಯೇ ಅವರು ಸಾವನ್ನಪ್ಪಿದ್ದಾರೆ.

ಘಟನೆ ಹೇಗಾಯ್ತು ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ. ಈ ಸಂಬಂಧ  ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರುಣ್‌ ಕುಮಾರ್‌ ಅವರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.