ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?

Malenadu Today

KARNATAKA NEWS/ ONLINE / Malenadu today/ Aug 13, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು.  ಭಾರತೀ ಪುರದಲ್ಲಿರುವಹೋಮ್​ ಸ್ಟೇ​ವೊಂದರ ಮೇಲೆ ತೀರ್ಥಹಳ್ಳಿ ಪೊಲೀಸರು ರೇಡ್ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಅಂದಾಜು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ದೇಶಿ ಹಾಗೂ ವಿದೇಶಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಫಾರ್ಚೂನರ್ ಕಾರಿನಲ್ಲಿ ಗಾಂಜಾ ಸಾಗಾಟ ! ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸರಿಂದ ಮೂವರು ವಶಕ್ಕೆ

ತೀರ್ಥಹಳ್ಳಿ ಹೋಮ್​ ಸ್ಟೇ ಮೇಲೆ ಪೊಲೀಸರ ದಾಳಿ

ವಿಹಂಗಮದ ಧಾಮ ಹೋಮ್​ ಸ್ಟೇ​ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ನಡೆಸಿದ ರೇಡ್​ನಲ್ಲಿ ವಿದೇಶಿ ಮದ್ಯಗಳು ಸೇರಿದಂತೆ ವಿವಿಧ ಕಂಪನಿಗಳ ಡ್ರಿಂಕ್ಸ್​ಗಳು ಪತ್ತೆಯಾಗಿವೆ. ಅಲ್ಲದೆ ದಾಳಿಯ ವೇಳೆಯಲ್ಲಿ ಪತ್ತೆಯಾದ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳು, ಕೊಂಬುಗಳು ಹಾಗೂ ಕೋವಿಯೊಂದನ್ನ ವಶಕ್ಕೆ ಪಡೆದಿದ್ದಾರೆ ಎಂಬುದು  ಪಂಚನಾಮೆ ವೇಳೆಯಲ್ಲಿ ಚೀತ್ರಿಕರಿಸಿದ ಫೋಟೋದಿಂದ ಸ್ಪಷ್ಟವಾಗಿದೆ. ಇನ್ನೂ ವಸ್ತುಗಳ ಬಗ್ಗೆ ನಿಖರ ಮಾಹಿತಿಯು ಪೊಲೀಸ್ ಪ್ರಕಟಣೆಯಲ್ಲಿ ತಿಳಿದುಬರಲಿದೆ. 

ಇದನ್ನೂ ಓದಿ: 2 ಕೆಜಿ ಗಾಂಜಾ ಜೊತೆ ಹೊಸಮನೆ, ಗಾಡಿಕೊಪ್ಪ, ಸವಾರ್ ಲೈನ್ ರಸ್ತೆ , ತುಮಕೂರಿನ ಆರೋಪಿ ಅರೆಸ್ಟ್! ಗಡಿಪಾರಾದವನು ಮಾರುತ್ತಿದ್ದನಾ ಆಂಧ್ರ ಗಾಂಜಾ?

24 ಗಂಟೆಯಲ್ಲಿ ಡಬ್ಬಲ್ ರೇಡ್ 

ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ ವಾಮನ ಸುತಾರರವರ ನೇತೃತ್ವದಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಯು ಸೇರಿದಂತೆ 15 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತಂಡ ಈ ದಾಳಿಯಲ್ಲಿ ಪಾಲ್ಗೊಂಡಿತ್ತು. ಇದಕ್ಕೂ ಮೊದಲು ನಿನ್ನೆ ರಾತ್ರಿ  ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ಫಾರ್ಚೂನರ್ ಕಾರೊಂದರಲ್ಲಿ ಸಾಗಿಸ್ತಿದ್ದ ಗಾಂಜಾ ಸೀಜ್ ಮಾಡಿದ್ದರು. 

ಇದನ್ನೂ ಸಹ ಓದಿ : ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?

ಜಿಲ್ಲಾ ಪೊಲೀಸ್ ಇಲಾಖೆಯ ಖಡಕ್ ಸಂದೇಶ

ಶಿವಮೊಗ್ಗ ಪೊಲೀಸ್​ ಇಲಾಖೆ ಮಾದಕವ್ಯಸನಕ್ಕೆ ಕಾರಣವಾಗುವ ಅಕ್ರಮಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಿದ್ದು, ತೀರ್ಥಹಳ್ಳಿಯ ಪೊಲೀಸರು ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದರೆ, ಇತ್ತ ಮಾಳೂರು ಪೊಲೀಸರು ಶನಿವಾರದಂದು ಖಚಿತ ಮಾಹಿತಿ ಮೇರೆಗೆ ಫಾರ್ಚೂನರ್ ವೆಹಿಕಲ್​ನಲ್ಲಿ ಸಾಗಿಸಲಾಗ್ತಿದ್ದ ಗಾಂಜಾವನ್ನು ಸೀಜ್ ಮಾಡಿದ್ದರು. ಇದರ ಬೆನ್ನಲ್ಲೆ ಶನಿವಾರ ರಾತ್ರಿ ಹೋಮ್​ ಸ್ಟೇ ಮೇಲೆ ಪೊಲೀಸರ ದಾಳಿ ನಡೆದಿದೆ. 

ಚರ್ಚೆ..ಚರ್ಚೆ.,..ಚರ್ಚೆ

ಸದ್ಯ ನಡೆದಿರುವ ಪೊಲೀಸರ ದಾಳಿ ಸಂಬಂಧ ಈಗಾಗಲೇ ಚರ್ಚೆ ಆರಂಭವಾಗಿದ್ದು ಪರ ಹಾಗೂ ವಿರೋಧದ ಮಾತುಗಳು ಕೇಳಿಬರಲಾರಂಭಿಸಿವೆ. ಹೋಮ್​ ಸ್ಟೇ​ನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆಯು ಚರ್ಚೆಯಾರಂಭವಾಗಿದೆ. 

ಇದನ್ನು ಸಹ ಓದಿ :ದಾವಣಗೆರೆಯಲ್ಲಿ ದಾಳಿಮಾಡಿದ್ದ ಆನೆ ಇರುವ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ ಡಾ.ವಿನಯ್​! ಆನೆ ದಿನಾಚರಣೆಯಲ್ಲಿ ಮಿಸ್ಸಿಂಗ್ ಆಗಿದ್ದೇನು ಗೊತ್ತಾ? ಖುಷಿಕೊಟ್ಟವನು ಯಾರು ಗೊತ್ತಾ?

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article