ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?

T-55 tanker and fighter aircraft to be remembered as war memorial in Shivamogga ಶಿವಮೊಗ್ಗ ನಗರದಲ್ಲಿ ಯುದ್ದ ಸ್ಮಾರಕದ ನೆನಪಾಗಿ ಉಳಿಯಲಿದೆ ಟಿ55 ಟ್ಯಾಂಕರ್ ಹಾಗೂ ಯುದ್ಧ ವಿಮಾನ

ಟ್ಯಾಂಕರ್ ಬಂತು! ಬರಲಿದೆ ಯುದ್ದ ವಿಮಾನ! ಶಿವಮೊಗ್ಗದಲ್ಲಿ ಎಲ್ಲಿ ಸ್ಥಾಪನೆಯಾಗಲಿದೆ ಸ್ಮಾರಕ?

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಶಿವಮೊಗ್ಗದಲ್ಲಿ ಒಂದು ಸೇನಾ ಸ್ಮಾರಕದಂತಹ ಮಾದರಿ ಇದ್ದರೇ ಹೇಗೆ ಎಂಬ ಆಲೋಚನೆ ಹೇಗೆ ಬಂತು? ಎಲ್ಲಿಂದ , ಯಾರಿಂದ ಬಂತೋ ಗೊತ್ತಿಲ್ಲ. ಆದರೆ ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ  ಸೇನಾ ಯುದ್ದ ಟ್ಯಾಂಕರ್​ನ ಸ್ಮಾರಕ ನಿರ್ಮಾಣವಾಗಲಿದೆ. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬಳಸಲಾಗಿದ್ದ, ಟಿ55 ಮಾಡಲ್​ನ ಟ್ಯಾಂಕರ್​ನ್ನ ಶಿವಮೊಗ್ಗಕ್ಕೆ ತರಿಸಿಕೊಳ್ಳಲಾಗಿದೆ. ನಿಷ್ಕ್ರೀಯವಾಗಿದ್ದ ಈ ಟ್ಯಾಂಕರ್​ನ್ನ ಸೇನೆಯಿಂದ ಪಡೆಯಲಾಗಿದ್ದು, ವಿಶೇಷ ಲಾರಿಯಲ್ಲಿ ಟ್ಯಾಂಕರ್​ನ್ನ ತರಿಸಿಕೊಳ್ಳಳಾಗಿದೆ. 

ಎಲ್ಲಿ ಸ್ಥಾಪನೆ ?

ಸದ್ಯ ಇದುವರೆಗೂ ಎಂಆರ್​ಎಸ್​ ಸರ್ಕಲ್​ನಲ್ಲಿ  ಇದನ್ನು ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಶಿವಮೊಗ್ಗ ನಗರ ಶಾಸಕರು ಹೇಳುವಂತೆ, ಯುದ್ದ ಟ್ಯಾಂಕರ್​ನ್ನ ಎಲ್ಲಿ ಸ್ಥಾಪಿಸುವುದು ಎಂದು ಇನ್ನೂ ನಿಶ್ಚಯವಾಗಿಲ್ಲ ಎಂಆರ್​ಎಸ್ ಸರ್ಕಲ್​ ಅಥವಾ ಐಬಿ ಸರ್ಕಲ್​ ನ ಬಳಿಯಲ್ಲಿ ಅಥವಾ ಫ್ರೀಡಂಪಾರ್ಕ್​ ಬಳಿಯಲ್ಲಿ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇನ್ನೂ ಈ ಸಂಬಂಧ ಮಾತನಾಡಿರುವ ಆಗಸ್ಟ್ 15 ರೊಳಗೆ ಯುದ್ದ ಟ್ಯಾಂಕರ್​ನ್ನ ಪಡೆಯುವ ನಿರೀಕ್ಷೆಯಲ್ಲಿ ಗುರಿ ಸಾಧಿಸಿದ್ದೇವೆ. ವಾರದೊಳಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿಯವರ ಜೊತೆ ಸಭೆ ನಡೆಸಿ ಟ್ಯಾಂಕರ್​ನ್ನ ಎಲ್ಲಿ ಸ್ಥಾಪಿಸುವುದು ಎಂದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. 

ಬರಲಿದೆ ಯುದ್ದ ವಿಮಾನ?

ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದ ಸದಸ್ಯರು ಟ್ಯಾಂಕರ್​ನ್ನ ಹೂವು ಹಾರ ಅಲಂಕಾರ ಹಾಗೂ ತಾಳಮೇಳಗಳೊಂದಿಗೆ ಬರಮಾಡಿಕೊಂಡರು. ಬಳಿಕ ಮಾತನಾಡಿದ  ಶಾಸಕ ಎಸ್‌.ಎನ್. ಚನ್ನಬಸಪ್ಪ (MLA S.N. Channabasappa), 2020 ರಲ್ಲಿಯೇ ರಕ್ಷಣಾ ಇಲಾಖೆಗೆ ನಿಷ್ಕ್ರಿಯ ಯುದ್ಧ ಟ್ಯಾಂಕರ್​ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಪೂನಾದ ರಕ್ಷಣಾ ಕಾರ್ಯಾಲಯದಿಂದ ಈ   ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ಬಂದಿದೆ. ಬರೋಬ್ಬರಿ ಮೂರು ದಿನ ಪ್ರಯಾಣ ಮಾಡಿದೆ. ಸದ್ಯದಲ್ಲೇ ಇನ್ನೊಂದು ನಿಷ್ಕ್ರಿಯ ವಿಮಾನ ಕೂಡ ಬರಲಿದೆ ಎಂದು ತಿಳಿಸಿದ್ದಾರೆ. 

ಎಲ್ಲಿದೆ ಈಗ ಟ್ಯಾಂಕರ್

ಎಂ.ಆರ್.ಎಸ್.ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೃತ್ತದ ಬಳಿ ಇರುವ ಜಾಗದಲ್ಲಿ ಸೂಕ್ತ ಭದ್ರತೆಯೊಂದಿಗೆ ಟ್ಯಾಂಕರ್​ನ್ನ ಇರಿಸಲಾಗಿದೆ.  ಸೂಕ್ತ ಕಟ್ಟೆ ಕಟ್ಟಿದ ಬಳಿಕ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಪಾಲಿಕೆ  ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು