ಸಿದ್ದರಾಮಯ್ಯ ವಿರೋಧಿ ಹೇಳಿಕೆ ನೆನಪಿಸಿದ ಮಲೆನಾಡ ಕುರುಬರ ಯುವ ವೇದಿಕೆ!
Malnad Kuruba Yuva Vedike reminds anti-Siddaramaiah remarks
![ಸಿದ್ದರಾಮಯ್ಯ ವಿರೋಧಿ ಹೇಳಿಕೆ ನೆನಪಿಸಿದ ಮಲೆನಾಡ ಕುರುಬರ ಯುವ ವೇದಿಕೆ!](https://malenadutoday.com/uploads/images/202304/image_750x_6442439a0cd5d.jpg)
KARNATAKA NEWS/ ONLINE / Malenadu today/ SHIVAMOGGA / Apr 21, 2023
ಶಿವಮೊಗ್ಗ/ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರಿಗೆ ಮಲೆನಾಡು ಕುರುಬರ ಯುವ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಮಲೆನಾಡು ಯುವ ಕುರುಬರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್ ಶಿವಮೊಗ್ಗದ ಜನರಲ್ಲಿ ದ್ವೇಷಭಾವನೆ ಬಿತ್ತುವಂತಹ ಮನೋಪ್ರವೃತ್ತಿಯ ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ ಅವರಿಗೆ ಕುರುಬ ಸಮಾಜದ ಬಂಧುಗಳು ಮತ ಚಲಾಯಿಸಬಾರದು ಎಂದಿದ್ದಾರೆ.
Read/ BREAKING NEWS / ಕೆ.ಎಸ್.ಈಶ್ವರಪ್ಪನವರಿಗೆ ಬೆಳಗ್ಗೆ ಬೆಳಗ್ಗೆ ನರೇಂದ್ರ ಮೋದಿ ಕರೆ/ ಏನು ಹೇಳಿದ್ರು ಪ್ರಧಾನಿ
ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಎಸ್.ಎನ್.ಚನ್ನಬಸಪ್ಪ ಅವರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ , ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ತಲೆ ಕಡಿಯಿರಿ ಎಂದು ಉದ್ರೇಕಕಾರಿ ಭಾಷಣ ಮಾಡಿದ್ದರು. ಅಲ್ಲದೆ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿದ್ದಾರೆ.
Read/ Theft case / ಅಡ್ರೆಸ್ ವಿಚಾರಿಸುತ್ತಾ ಚಿನ್ನದ ಸರ ಕದ್ದುಕೊಂಡು ಹೋದ ಹಿಂದಿ ಗ್ಯಾಂಗ್
ಶಿವಮೊಗ್ಗದಲ್ಲಿ ಜನ ಶಾಂತಿಯ ವಾತಾವರಣ ಬಯಸುತ್ತಿದ್ದಾರೆ. ಆದರೆ, ಸಂಘ ಪರಿವಾರದಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಪ್ರಚೋದನೆ ನೀಡುವಂತಹ ಮನೋವೃತ್ತಿಯ ವ್ಯಕ್ತಿಗಳು ಶಾಸಕರಾಗುವುದಕ್ಕೆ ಅನರ್ಹರು ಎಂದಿರುವ ಮಧುಸೂದನ್,
ಹಿಂದುತ್ವದ ಮೇಲೆಯೇ ರಾಜಕಾರಣ ಮಾಡುತ್ತಿರುವ ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್ ನೀಡಿರುವುದು ಶಿವಮೊಗ್ಗದ ಜನತೆಯ ದುರಂತ ಎಂದಿದ್ದಾರೆ
Malenadutoday.com Social media
Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #karnatakaassemblyelection2023,