ಸಿದ್ದರಾಮಯ್ಯ ವಿರೋಧಿ ಹೇಳಿಕೆ ನೆನಪಿಸಿದ ಮಲೆನಾಡ ಕುರುಬರ ಯುವ ವೇದಿಕೆ!

Malnad Kuruba Yuva Vedike reminds anti-Siddaramaiah remarks

ಸಿದ್ದರಾಮಯ್ಯ ವಿರೋಧಿ ಹೇಳಿಕೆ ನೆನಪಿಸಿದ ಮಲೆನಾಡ ಕುರುಬರ ಯುವ ವೇದಿಕೆ!

KARNATAKA NEWS/ ONLINE / Malenadu today/ SHIVAMOGGA / Apr 21, 2023


ಶಿವಮೊಗ್ಗ/  ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರಿಗೆ  ಮಲೆನಾಡು ಕುರುಬರ ಯುವ  ವೇದಿಕೆ ವಿರೋಧ ವ್ಯಕ್ತಪಡಿಸಿದೆ. 

ಈ ಸಂಬಂಧ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ  ಮಲೆನಾಡು ಯುವ ಕುರುಬರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್   ಶಿವಮೊಗ್ಗದ ಜನರಲ್ಲಿ ದ್ವೇಷಭಾವನೆ ಬಿತ್ತುವಂತಹ ಮನೋಪ್ರವೃತ್ತಿಯ ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ ಅವರಿಗೆ ಕುರುಬ ಸಮಾಜದ ಬಂಧುಗಳು ಮತ ಚಲಾಯಿಸಬಾರದು ಎಂದಿದ್ದಾರೆ. 

Read/ BREAKING NEWS /  ಕೆ.ಎಸ್​.ಈಶ್ವರಪ್ಪನವರಿಗೆ ಬೆಳಗ್ಗೆ ಬೆಳಗ್ಗೆ  ನರೇಂದ್ರ ಮೋದಿ ಕರೆ/ ಏನು ಹೇಳಿದ್ರು ಪ್ರಧಾನಿ 

ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಎಸ್.ಎನ್.ಚನ್ನಬಸಪ್ಪ ಅವರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ , ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ತಲೆ ಕಡಿಯಿರಿ ಎಂದು ಉದ್ರೇಕಕಾರಿ ಭಾಷಣ ಮಾಡಿದ್ದರು. ಅಲ್ಲದೆ ತಮ್ಮ  ಮಾತನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

Read/ Theft case / ಅಡ್ರೆಸ್ ವಿಚಾರಿಸುತ್ತಾ ಚಿನ್ನದ ಸರ ಕದ್ದುಕೊಂಡು ಹೋದ ಹಿಂದಿ ಗ್ಯಾಂಗ್ 

ಶಿವಮೊಗ್ಗದಲ್ಲಿ ಜನ ಶಾಂತಿಯ ವಾತಾವರಣ ಬಯಸುತ್ತಿದ್ದಾರೆ. ಆದರೆ, ಸಂಘ ಪರಿವಾರದಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಪ್ರಚೋದನೆ ನೀಡುವಂತಹ ಮನೋವೃತ್ತಿಯ ವ್ಯಕ್ತಿಗಳು ಶಾಸಕರಾಗುವುದಕ್ಕೆ ಅನರ್ಹರು ಎಂದಿರುವ ಮಧುಸೂದನ್​, 

ಹಿಂದುತ್ವದ ಮೇಲೆಯೇ ರಾಜಕಾರಣ ಮಾಡುತ್ತಿರುವ ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್ ನೀಡಿರುವುದು ಶಿವಮೊಗ್ಗದ ಜನತೆಯ ದುರಂತ ಎಂದಿದ್ದಾರೆ

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,