ಸಾತನೂರು ಕೊಲೆ ಕೇಸ್/ ಪುನೀತ್ ಕೆರೆಹಳ್ಳಿ ಜೊತೆ ತೀರ್ಥಹಳ್ಳಿಯ ಯುವಕನ ಬಂಧನ!
Idris Pasha murder case: Youth from Thirthahalli arrested along with Puneeth Kerehalli
ಸಾತನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಇದ್ರಿಸ್ ಪಾಷಾರ ಅನುಮಾನಸ್ಪದ ಸಾವಿನ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಪುನೀತ್ ಕೆರೆಹಳ್ಳಿ ಹಾಗೂ ಉಳಿದ ನಾಲ್ವರು ಆರೋಪಿಗಳ ಪೈಕಿ ಓರ್ವ ತೀರ್ಥಹಳ್ಳಿಯ ಮೂಲಕ ಯುವಕ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ನಿನ್ನೆ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ್ದ ಅವರು, ಆರೋಪಿಗಳನ್ನು ರಾಜಸ್ಥಾನದ ಬಾರ್ಡ್ರ್ನಲ್ಲಿ ಬಂಧಿಸಲಾಗಿದ್ದು, ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಟೀಂಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ನಡೆದಿದ್ದೇನು?
ಕಳೆದ ಮಾರ್ಚ್ 31 ರಂದು ಮಂಡ್ಯದಿಂದ ಗೋವುಗಳನ್ನು ಸಾಗಿಸ್ತಿದ್ದ ಕ್ಯಾಂಟರ್ ವೆಹಿಕಲ್ನ್ನು ಸಾತನೂರು ಬಳಿ ತಡೆದಿದ್ದ ಪುನೀತ್ ಕೆರೆಹಳ್ಳಿ ಮತ್ತವನ ಟೀಂ, ಆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿತ್ತು. ಆನಂತರ ಕ್ಯಾಂಟರ್ನಲ್ಲಿದ್ದ ಇದ್ರಿಸ್ ಪಾಷಾ ರವರ ಮೃತದೇಹ ಅಲ್ಲಿಯೇ ಸಮೀಪದಲ್ಲಿ ಪತ್ತೆಯಾಗಿತ್ತು. ಈತನ ಸಾವಿಗೆ ಪುನೀತ್ ಕೆರೆಹಳ್ಳಿ ಮತ್ತವನ ಟೀಂ ಕಾರಣ ಎಂದು ಆರೋಪಿಸಲಾಗಿದೆ. ನೈತಿಕ ಪೊಲೀಸ್ ಗಿರಿಯಿಂದಲೇ ಆತ ಸಾವನ್ನಪ್ಪಿದ್ದ ಎಂದು ದೂರಲಾಗಿತ್ತು. ಈ ಸಂಬಂಧ 3 ಎಫ್ಐಆರ್ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆ 41, 504, 506, 324, 302, 34 ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಇನ್ನೂ ಘಟನೆ ಬೆನ್ನಲ್ಲೆ ಎಸ್ಕೇಪ್ ಆಗಿದ್ದ ಪುನೀತ್ ಹಾಗೂ ಆತನ ತಂಡ ರಾಜಸ್ಥಾನದ ಗಡಿ ಭಾಗದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದೆ. ಅಲ್ಲಿಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ರಾಜಸ್ಥಾನದ ಪೊಲೀಸ್ ಸ್ಟೇಷನ್ನಿಂದಲೇ ತೆಗೆದ ಫೋಟೋ ಹೊರಬಿದ್ದಿದೆ.
ವಿಶೇಷ ಅಂದರೆ, ಪುನೀತ್ ಜೊತೆ ಬಂಧನವಾಗಿರುವ ಆರೋಪಿಗಳ ಪೈಕಿ ಓರ್ವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವನು. ನೊಣಬೂರಿನ ನಿವಾಸಿ, 22 ವರ್ಷದ ಪವನ್ ಕುಮಾರ್ ಕೂಡ ಓರ್ವ ಆರೋಪಿ. ಉಳಿದಂತೆ ರಾಮನಗರದ ಗೋಪಿ, ಬಸವನಗುಡಿಯ ಪಿಲ್ಲಿಂಗ ಅಂಬಿಗಾರ್ ಮತ್ತು ರಾಯಚೂರಿನ ಸುರೇಶ್ ಕುಮಾರ್ ಉಳಿದ ಆರೋಪಿಗಳಾಗಿದ್ದಾರೆ.
Read /ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್ ಲೆಟರ್ನಲ್ಲಿ ಏನಿದೆ ಗೊತ್ತಾ
Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !
Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ 1 ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ
Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್
Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್!
Read / Bhadravati/ ಪರ್ಮಿಶನ್ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್ಗೆ ಸೇರಿದ ವಾಹನ ಜಪ್ತಿ
Read / ತೀರ್ಥಹಳ್ಳಿಯಲ್ಲಿ ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ
Read / ಆಯನೂರು ಮಂಜುನಾಥ್ ಕಾಂಗ್ರೆಸ್ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್!
Read/ ಸಾಗರಕ್ಕೆ ಬರುತ್ತಿದ್ದ ಬಸ್ ಅಪಘಾತ/ ಸ್ಟೇರಿಂಗ್ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS
HASTAGS/ Idris Pasha murder case, Kanakapura, Ramanagagara Sathanur police, Karthik Reddy, Puneeth Kerehalli, Shivamogga Thirthahalli youth, Pavan Kumar, youth from Nonaburu, youth from Theerthahalli, arrested, illegal cow smuggling, moral policing, Mandya, cattle smuggling, arrest in Rajasthan. ಇದ್ರಿಸ್ ಪಾಷಾ ಕೊಲೆ ಕೇಸ್, ಕನಕಪುರ, ರಾಮನಗಗರ ಸಾತನೂರು ಪೊಲೀಸ್ , ಕಾರ್ತಿಕ್ ರೆಡ್ಡಿ, ಪುನೀತ್ ಕೆರೆಹಳ್ಳಿ, ಶಿವಮೊಗ್ಗ ತೀರ್ಥಹಳ್ಳಿ ಯುವಕ, ಪವನ್ ಕುಮಾರ್, ನೊಣಬೂರಿನ ಯುವಕ, ತೀರ್ಥಹಳ್ಳಿಯ ಯುವಕ ಅರೆಸ್ಟ್, ಅಕ್ರಮ ಗೋವುಗಳ ಸಾಗಾಟ, ನೈತಿಕ ಪೊಲೀಸ್ ಗಿರಿ, ಮಂಡ್ಯ, ಗೋವುಗಳ ಸಾಗಾಟ, ರಾಜಾಸ್ಥಾನದಲ್ಲಿ ಅರೆಸ್ಟ್ , Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada