ಸಾರ್ವಜನಿಕರ ಗಮನಕ್ಕೆ ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಇರೋದಿಲ್ಲ ವಿದ್ಯುತ್​

There will be no electricity in these areas of Shivamogga tomorrow ಸಾರ್ವಜನಿಕರ ಗಮನಕ್ಕೆ ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಇರೋದಿಲ್ಲ ವಿದ್ಯುತ್​

ಸಾರ್ವಜನಿಕರ ಗಮನಕ್ಕೆ ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಇರೋದಿಲ್ಲ ವಿದ್ಯುತ್​

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS 

ಶಿವಮೊಗ್ಗ ಉಪ ವಿಭಾಗ - 02 ರ ಘಟಕ - 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಆ.08 ರ ಬೆಳಗ್ಗೆ 09:00 ರಿಂದ ಸಂಜೆ 06:00 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇಲಿಯಾಜ್ ನಗರ 01 ನೇ ಕ್ರಾಸ್ ನಿಂದ 19 ನೇ ಕ್ರಾಸ್ ವರೆಗೆ, ಕೆ.ಇ.ಬಿ ವಸತಿ ಗೃಹಗಳು, ತುಂಗಾ ನಗರ ಚಾನಲ್, ಕಾಮತ್ ಲೇಔಟ್, ನ್ಯೂ ಮಂಡ್ಲಿ, ಮಂಡ್ಲಿ ವೃತ್ತ, ಇಲಿಯಾಜ್ ನಗರ 100 ಅಡಿ ರಸ್ತೆ, ಫಾರೂಕ್ಯ ಶಾದಿಮಹಲ್, ಕೆಎ 14 ಕಾರ್ ವಾಷ್, ಆಯುಷ್ ಇಂಜಿನೀರಿಂಗ್ ವರ್ಕ್ಸ್ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.


ಪತ್ರಕರ್ತ ಮತ್ತು ಆತನ ಮಗನ ಮೇಲೆ ಹಲ್ಲೆ ! ಪೋಕ್ಸೋ ಸೇರಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಕೇಸ್! ಸ್ಟೇಷನ್​ ಬಳಿ ಪೊಲೀಸರಿಗೂ ತೋರಿದ್ರಾ ಅಗೌರವ ?

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ನಿನ್ನೆ ಪತ್ರಕರ್ತ ಹಾಗೂ ಅವರ ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ  IPC 1860 (U/s-143,147,323,324,504,506,149), PROTECTION OF CHILDREN FROM SEXUAL OFFENCES ACT 2012 (U/s-12) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯು ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ. 

ನಿನ್ನೆ ಸಂಜೆ ಪತ್ರಕರ್ತ ಮುದಾಸಿರ್​ ಎಂಬವರ ಮಗ ಸ್ಥಳೀಯ ಮಸೀದಿಯೊಂದರ ಬಳಿ ಇರುವ ಅಂಗಡಿಯೊಂದಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿದ್ದ ಆರೋಪಿಗಳು ಬಾಲಕನನ್ನ ಚುಡಾಯಿಸಿ ಆತನಿಗೆ ಲೈಂಗಿಕ ಶೋಷಣೆ ನೀಡಿದ್ದಾರೆ. ಈ ವೇಳೆ ಬಾಲಕ ಕಿರುಚಿಕೊಂಡಿದ್ದಾನೆ. ತಕ್ಷಣವೇ ವಿಚಾರ ತಿಳಿದು ತಂದೆಯಾಗಿ ಮುದಾಸಿರ್ ಅಲ್ಲಿಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ, ಮುದಾಸಿರ್ ರವರ ಸ್ನೇಹಿತರು ತಂದೆ ಹಾಗೂ ಮಗನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಮಧ್ಯೆ ಪುನಃ ಮುದಾಸಿರ್​ರವರನ್ನ ಕರೆಮಾಡಿ ಮಾತನಾಡಬೇಕು ಎಂದು ಕರೆಸಿಕೊಂಡ ದುಷ್ಕರ್ಮಿಗಳು, ಅವರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ಇದೇ ವಿಚಾರವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಕಾಂಪೌಂಡ್​ನೊಳಗೆ ಆರೋಪಿಗಳು ಮತ್ತವರ ಕಡೆಯವರು ಪೊಲೀಸರಿಗೂ ಗೌರವ ತೋರದೆ ಕಿರುಚಾಡಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಡೆದ ಘಟನೆಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.   


ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು