ಸಾಗರ, ಭದ್ರಾವತಿ, ಶಿಕಾರಿಪುರ | ಇಂದು ಮತ್ತು ನಾಳೆ ಪವರ್‌ ಕಟ್‌ | ಯಾವೆಲ್ಲಾ ಏರಿಯಾ? ಇಲ್ಲಿದೆ ವಿವರ

Sagar, Bhadravathi, Shikaripura | Power cut today and tomorrow | What are the areas? Here's the details

ಸಾಗರ, ಭದ್ರಾವತಿ, ಶಿಕಾರಿಪುರ | ಇಂದು ಮತ್ತು ನಾಳೆ ಪವರ್‌ ಕಟ್‌ | ಯಾವೆಲ್ಲಾ ಏರಿಯಾ? ಇಲ್ಲಿದೆ ವಿವರ
Sagar, Bhadravathi, Shikaripura , Power cut today

SHIVAMOGGA | MALENADUTODAY NEWS | Jun 19, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆಯ  ಸಾಗರ ಹಾಗೂ ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ವಿವಿದೆಡೆ ಇಂದು ಮತ್ತು ನಾಳೆ ವಿದ್ಯುತ್‌ ವ್ಯತ್ಯಯವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ 

ನಾಳೆ ವಿದ್ಯುತ್ ಪೂರೈಕೆ ಸ್ಥಗಿತ

ಜೂನ್ 20ರ ಗುರುವಾರ ಶಿಕಾರಿಪುರ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಪ್ರಥಮ ತ್ರೈಮಾಸಿಕ ನಿರ್ವಹಣೆ ಕೆಲಸದಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ. ಚನ್ನಕೇಶವ ನಗರ, ವಿನಾಯಕನಗರ, ಶಾಂತಿನಗರ, ವಿದ್ಯಾನಗರ, ಎಸ್‌. ಎಸ್.ರಸ್ತೆ, ಬಸ್‌ ನಿಲ್ದಾಣ, ಗಗ್ಗರಿ, ಗಟ್ಟೂರು, ಕುಮಧ್ವತಿ ಕಾಲೇಜು, ಶಾಹಿ ಗಾರ್ಮೆಂಟ್ಸ್, ಎಂ.ಎಸ್. ಕೇರಿ, ದೊಡ್ಡಕೇರಿ, ದೊಡ್ಡಪೇಟೆ, ರಾಘವೇಂದ್ರ ಬಡಾವಣೆ, ಸೊಸೈಟಿ ಕೇರಿ, ಅರಸ್ ನಗರ, ವಾಟರ್ ಸಪ್ಪೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಸರಸ್ವತಿಪುರ, ಕುಂಬಾರ ಗುಂಡಿ, ಮಾಸೂರು ರಸ್ತೆ, ಎ.ಪಿ.ಎಂ.ಸಿ, ಹುಚ್ಚರಾಯ ಸ್ವಾಮಿ ದೇವಸ್ಥಾನ, ಕೆ.ಎಚ್.ಬಿ.ಲೇಔಟ್, ಜಯನಗರ, ತಾಲೂಕು ಕಛೇರಿ, ಅಂಬೇಡ್ಕರ್‌ನಗರ, ಪುರಸಭೆ ಸಹಿತ ಪಟ್ಟಣದ ಎಲ್ಲಾ ಸ್ಥಳಗಳಲ್ಲಿ ಹಾಗೂ ಬೇಗೂರು, ಬೆಂಡೆಕಟ್ಟೆ, ಹೊನ್ನಾಳಿ ರಸ್ತೆ, ಆಪಿನಕಟ್ಟೆ, ವಡ್ಡಿಗೆರೆ, ದೊಡ್ಡ ತಾಂಡ, ಕೆಂಗಟ್ಟಿ ಐ.ಪಿ,ಇಟ್ಟಿಗೆಹಳ್ಳಿ ತಾಂಡ ಐ.ಪಿ.ಲಿಮಿಟ್, ಚನ್ನಳ್ಳಿ, ತರಲಘಟ್ಟ ಹಾಗೂ ಅಂಬಾರಗೊಪ್ಪ, ಕಪ್ಪನಹಳ್ಳಿ, ನಂದಿ ಹಳ್ಳಿ, ದೂಪದ ಹಳ್ಳಿ, ನೆಲವಾಗಿಲು, ಚುಂಚಿನಕೊಪ್ಪ, ಗಾಂಧೀನಗರ, ಗಾಮ, ಭದ್ರಾಪುರ, ಮಲ್ಲಾಪುರ, ಎರೇಕಟ್ಟೆ, ಬೆಂಡೆಕಟ್ಟೆ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಮೆಸ್ಕಾಂ ಜತೆ ಸಹಕರಿಸಲು ಮೆಸ್ಕಾಂ ಮನವಿ ಮಾಡಿದೆ. 

 

ಸಾಗರದಲ್ಲಿಂದು ಕರೆಂಟ್‌ ಇರಲ್ಲ

 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೆಸ್ಕಾಂ ವಿಭಾಗ ದಿನಾಂಕ  19.06.2024 ರ ಬುಧವಾರದಂದು ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅದರ ವಿವರ ಹೀಗಿದೆ. ತುರ್ತಾಗಿ ಎ.ಬಿ ಕೇಬಲ್‌ ಬದಲಾವಣೆ ಕಾರ್ಯ ನಿಮಿತ್ತ ಸಾಗರ ನಗರ ಉಪವಿಭಾಗ ವ್ಯಾಪ್ತಿಯಲ್ಲಿರುವ ಎಫ್-1 ಸಾಗರ ಟೌನ್ ಮತ್ತು ಎಫ್-17 ಎಸ್.ಎನ್ ನಗರ ಮಾರ್ಗದಲ್ಲಿ ಬೆಳಗ್ಗೆ 10:00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವುದುವಿನೋಬನಗರ, ಕುಗ್ವೆ, ಲೋಹಿಯನಗರ, ಪ್ರಗತಿನಗರ, ವರದಹಳ್ಳಿ ರಸ್ತೆ, ಎಲ್.ಬಿ ನಗರ, ಜನ್ನತ್‌ಗಲ್ಲಿ, ಬಿ.ಹೆಚ್ ರಸ್ತೆ, ಕೃಷ್ಣ ಗ್ಯಾರೇಜ್ ರಸ್ತೆ, 'ಫಿಶ್ ಮಾರ್ಕೆಟ್, ನೆಹರು ನಗರ, ಅಶೋಕ ರಸ್ತೆ, ಜಿ.ಪಿ ರಸ್ತೆ, ಅರಳಿಕೊಪ್ಪ, ಎಸ್.ಎನ್ ‌ ನಗರ, ಆವಿನಹಳ್ಳಿ ರಸ್ತೆ, ಗಾಂಧೀನಗರ, ವಿಜಯನಗರ ಮತ್ತು ರಾಮನಗರ

 

ಭದ್ರಾವತಿಯಲ್ಲಿಂದ ಪವರ್‌ ಕಟ್‌ 

ಭದ್ರಾವತಿ ನಗರ ಮೆಸ್ಕಾಂ ಉಪ ವಿಭಾಗದ ಭದ್ರಾವತಿ ಘಟಕ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವ ಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.19ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೊಸಮನೆ, ಎನ್ ಎಂಸಿ, ಭೋವಿ ಕಾಲೊನಿ, ಸಂತೆ ಮೈದಾನ, ಕೇಶವಪುರ, ತಮ್ಮಣ್ಣ ಕಾಲೊನಿ, ಸುಭಾಷ್ ನಗರ, ವಿಜಯನಗರ, ಕುವೆಂಪು ನಗರ, ಹನುಮಂತ ನಗರ, ಶಿವಾಜಿ ವೃತ್ತ, ನೃಪತುಂಗ ನಗರ, ಸೀಗೇಬಾಗಿ, ಅಶ್ವಥ ನಗರ, ಕಬಳೀಕಟ್ಟೆ, ಭದ್ರಾಕಾಲೊನಿ, ಕಣಕಟ್ಟೆ, ಚೆನ್ನಗಿರಿ ರಸ್ತೆ, ಎಪಿಎಂಸಿ ಸುತ್ತಮುತ್ತಲಿನ ಪ್ರದೇಶ, ವೀರಾಪುರ, ಶ್ರೀರಾಮನಗರ ಮುಂತಾದ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

 

power outages in the Shivamogga district of Karnataka, India.