ಕೆಎಸ್ ಈಶ್ವರಪ್ಪ ದೆಹಲಿಗೆ ಹೋದರೂ ಅಮಿತ್ ಶಾ ಭೇಟಿಯಾಗಿಲ್ಲವೇಕೆ? ಸಂಸದ ಬಿವೈ ರಾಘವೇಂದ್ರ ನೀಡಿದ್ರು ಕಾರಣ
Why did KS Eshwarappa go to Delhi but not meet Amit Shah? Mp BY Raghavendra gave the reason
![ಕೆಎಸ್ ಈಶ್ವರಪ್ಪ ದೆಹಲಿಗೆ ಹೋದರೂ ಅಮಿತ್ ಶಾ ಭೇಟಿಯಾಗಿಲ್ಲವೇಕೆ? ಸಂಸದ ಬಿವೈ ರಾಘವೇಂದ್ರ ನೀಡಿದ್ರು ಕಾರಣ](https://malenadutoday.com/uploads/images/202403/image_870x_66056d77c8880.webp)
Shivamogga Apr 5, 2024 ಕೆಎಸ್ ಈಶ್ವರಪ್ಪರವರ ಅಪೂರ್ಣ ದೆಹಲಿ ಪ್ರವಾಸದ ಬಗ್ಗೆ ಬಿಜೆಪಿ ಅಭ್ಯರ್ಥಿ ಸಂಸದ ಬಿವೈ ರಾಘವೇಂದ್ರ ಮಾತನಾಡಿದ್ದಾರೆ. ಇದಕ್ಕೂ ಮೊದಲು ಕೆಎಸ್ ಈಶ್ವರಪ್ಪ ಅಮಿತ್ ಶಾರವರು ಮತ್ತೆ ದೆಹಲಿಗೆ ಕರೆದರೇ ಹೋಗುವೆ ಎಂದು ಹೇಳಿದ್ದರು. ತದನಂತರ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ರಾಘವೇಂದ್ರ ಅಮಿತ್ ಶಾ ಅವರ ಮನಸಿಗೆ ನೋವಾಗಿರಬಹುದು. ಹೀಗಾಗಿ ಈಶ್ವರಪ್ಪ ಅವರನ್ನು ಭೇಟಿಯಾಗದೆ ವಾಪಸ್ ಕಳುಹಿಸಿರಬಹುದು ಎಂದಿದ್ದಾರೆ.
ಅಮಿತ್ ಶಾ ನೇತತ್ವದಲ್ಲಿ ರಾಷ್ಟ್ರೀಯತೆ ದೃಷ್ಠಿಯಿಂದ ತೆಗೆದುಕೊಂಡ ನಿಲುವುಗಳು, ಪಕ್ಷದ ಚೌಕಟ್ಟಿನಲ್ಲಿ ತೆಗೆದುಕೊಂಡ ನಿಲುವುಗಳು ಎಲ್ಲವೂ ಸ್ಪಷ್ಟವಾಗಿವೆ. ಅಂತವರು ನಮ್ಮ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರನ್ನು ಕರೆಸಿಕೊಂಡಿದ್ದಾರೆ ಎಂಬುದೇ ಸಮಾಧಾನ ತಂದಿತ್ತು ಎಂದರು. ಈಶ್ವರಪ್ಪರನ್ನು ಬರಲು ಹೇಳಿ ವಾಪಸ್ ಕಳುಹಿಸಿರುವುದು ನೋಡಿದರೆ ಅಮಿತ್ ಶಾ ಮನಸಿಗೂ ನೋವಾಗಿದೆ ಅನ್ನಿಸುತ್ತದೆ. ಅಮಿತ್ ಶಾ ಫೋನ್ ಮೂಲಕ ಮಾಡನಾಡಿದ್ದಾರೆ ಎಂದು ಈಶ್ವರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು. ಜೊತೆಗೆ ಕಂಡಿಷನ್ ಹಾಕಿ ಹೋಗಿದ್ದು ಅವರ ಮನಸಿಗೆ ನೋವಾಗಿರುವ ಸಾಧ್ಯತೆ ಇದೆ.. ಹೀಗಾಗಿ ಅವರು ಈಶ್ವರಪ್ಪರನ್ನು ಭೇಟಿಯಾಗಿಲ್ಲ ಎಂದು ಅನ್ನಿಸುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಇದೆ. ಬೈಂದೂರಿನಲ್ಲಿ ಕಾರ್ಯಕರ್ತರು ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳ ಲೀಡ್ ಕೊಡುತ್ತೇವೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದಾರೆ. ಪ್ರಧಾನಿಮಂತ್ರಿಗಳು ಬೈಂದೂರಿಗೆ ಬಂದು ಹೋಗಬೇಕು ಎಂದು ಅಲ್ಲಿನ ಜನ ಅಪೇಕ್ಷೆ ಇದೆ. ಹೀಗಾಗಿ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.