ಭದ್ರಾವತಿ ವಿಐಎಸ್​ಎಲ್​ ಗಾಗಿ ಕೇಂದ್ರ ಸರ್ಕಾರದ ಮುಂದೆ ಡಿಮ್ಯಾಂಡ್ ಇಟ್ಟ ಸಂಸದ​ ಬಿ.ವೈ. ರಾಘವೇಂದ್ರ​

ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಿದ ಅವರು, ನಂತರ ಭದ್ರಾವತಿ ವಿಐಎಸ್​ಎಲ್​ ಅಭಿವೃದ್ಧಿಗಾಗಿ ಮನವಿ ಪತ್ರ ಹಿಡಿದು ಸಂಸತ್ ಆವರಣದಲ್ಲಿ ಓಡಾಡಿದ್ದಾರೆ.

ಭದ್ರಾವತಿ ವಿಐಎಸ್​ಎಲ್​ ಗಾಗಿ ಕೇಂದ್ರ ಸರ್ಕಾರದ ಮುಂದೆ ಡಿಮ್ಯಾಂಡ್ ಇಟ್ಟ ಸಂಸದ​ ಬಿ.ವೈ. ರಾಘವೇಂದ್ರ​

ಸಂಸದ ಬಿ.ವೈ ರಾಘವೇಂದ್ರ  (@BYRBJP) ಸಂಸತ್​ ಅಧಿವೇಶನದಲ್ಲಿ ಪಾಲ್ಗೊಂಡಿದ್ಧಾರೆ. ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಿದ ಅವರು, ನಂತರ ಭದ್ರಾವತಿ ವಿಐಎಸ್​ಎಲ್​ ಅಭಿವೃದ್ಧಿಗಾಗಿ ಮನವಿ ಪತ್ರ ಹಿಡಿದು ಸಂಸತ್ ಆವರಣದಲ್ಲಿ ಓಡಾಡಿದ್ದಾರೆ.

ಇದನ್ನು ಸಹ ಓದಿ ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಈ ಸಂಬಂಧ ವಿತ್ತ ಸಚಿವೆ (@FinMinIndia) ನಿರ್ಮಲಾ ಸೀತಾರಾಮನ್​ರವರನ್ನು (@nsitharaman) ಭೇಟಿಯಾದ ಬಿವೈ ರಾಘವೇಂದ್ರರವರು. ಎಸ್​ಎಐಎಲ್​ ಮೂಲಕ ಭದ್ರಾವತಿಯ ಹೆಮ್ಮೆಯ ಕಾರ್ಖಾನೆ, ವಿಐಎಸ್​ಎಲ್​ಗೆ (VISL)ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಬೇಕು.  ಹಾಗೂ  ಶಿವಮೊಗ್ಗದ ಆರ್ಥಿಕತೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿಬೇಕು ಎಂದು ಮನವಿ ಮಾಡಿದ್ಧಾರೆ. 

ಇದನ್ನು ಸಹ ಓದಿ :First news / ಶಿವಮೊಗ್ಗಕ್ಕೆ ಜಾರಿಯಾಯ್ತು ಮತ್ತೊಂದು ಪೊಲೀಸ್ ಉಪವಿಭಾಗ

ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಸಂಸತ್​ ಭವನದದಲ್ಲಿರುವ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮ್​ನರವರ ಕಚೇರಿಗೆ ಭೇಟಿ ನೀಡಿ, SAIL ಮೂಲಕ VISL ಅಭಿವೃದ್ಧಿಗೆ ಮನವಿ ಮಾಡಿದ್ದೇನೆ, ಶಿವಮೊಗ್ಗದ ಆರ್ಥಿಕತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ಇದನ್ನು ಸಹ ಓದಿ :ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ