ಬಿಜೆಪಿ ಸೇರಲು, ನನಗೆ ಬಿ.ವೈವಿಜಯೇಂದ್ರ ಹಣ ಕೊಡಲು ಬಂದಿದ್ದರು/ ಬಾಂಬೆ ಡೇ ಸ್​ನ ‘ವಿಶ್ವ’ ​ ರಹಸ್ಯ

ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದು ಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್,ವಿಜಯೇಂದ್ರನ ಮನೆಯಲ್ಲಿ ಮಾತುಕತೆ ನಡೆದಿತ್ತು.

ಬಿಜೆಪಿ ಸೇರಲು,  ನನಗೆ ಬಿ.ವೈವಿಜಯೇಂದ್ರ ಹಣ ಕೊಡಲು ಬಂದಿದ್ದರು/ ಬಾಂಬೆ ಡೇ ಸ್​ನ ‘ವಿಶ್ವ’ ​ ರಹಸ್ಯ
ಬಿಜೆಪಿ ಸೇರಲು, ನನಗೆ ಬಿ.ವೈವಿಜಯೇಂದ್ರ ಹಣ ಕೊಡಲು ಬಂದಿದ್ದರು/ ಬಾಂಬೆ ಡೇ ಸ್​ನ ‘ವಿಶ್ವ’ ​ ರಹಸ್ಯ

ವಿಧಾನಪರಿಷತ್ ಸದಸ್ಯ ಹೆಚ್​.ವಿಶ್ವನಾಥ್​ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ನಿನ್ನೆ ಮೈಸೂರಿನಲ್ಲಿ ಪ್ರೆಸ್​ಮೀಟ್​ನಲ್ಲಿ ಮಾತನಾಡಿರೋ ಅವರು, ನನಗೆ ಬಿಜೆಪಿ ಸೇರಲು ದುಡ್ಡುಕೊಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ಅಷ್ಟೆಅಲ್ಲದೆ ಹೀಗೆ ದುಡ್ಡು ಕೊಡಲು ಬಂದವರು ಬಿ.ವೈವಿಜಯೆಂದ್ರ ಎಂದು ದೂರಿದ್ದಾರೆ. 

ಇದನ್ನು ಸಹ ಓದಿ ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನಾನು ಬಿಜೆಪಿ ಸೇರುವುದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದರು. ಅವರ ಅಪಾರ್ಟೆಂಟ್ನಲ್ಲೇ ಮಾತುಕತೆ ನಡೆದಿತ್ತು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್‌.ವಿಶ್ವನಾಥ್  ಹೇಳಿದ್ದಾರೆ. 

ಬಾಂಬೇ ಡೇಸ್​ನಲ್ಲಿ ಇದೆ ಹೊಸಸತ್ಯ

ಶೀಘ್ರದಲ್ಲೇ ಹೊರಬರಲಿರುವ ನನ್ನ 'ಬಾಂಬೆ ಡೇಸ್' ಪುಸ್ತಕದ ಮೊದಲ ಅಧ್ಯಾಯದಲ್ಲೇ ಇದೆಲ್ಲ ಅಂಶಗಳೂ ಇರಲಿವೆ. ವಿವರಗಳೆಲ್ಲ ಅದರಲ್ಲೇ ಇರಲಿವೆ ಎಂದ ವಿಶ್ವನಾಥ್​ ನೀವು ದುಡ್ಡು ತಗೆದುಕೊಂಡಿದ್ರಾ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿಲ್ಲ.  

ಇದನ್ನು ಸಹ ಓದಿ :First news / ಶಿವಮೊಗ್ಗಕ್ಕೆ ಜಾರಿಯಾಯ್ತು ಮತ್ತೊಂದು ಪೊಲೀಸ್ ಉಪವಿಭಾಗ

ವಿಶ್ವನಾಥ್ ಹೇಳಿದ್ದೇನು? 

ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದು ಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್,ವಿಜಯೇಂದ್ರನ ಮನೆಯಲ್ಲಿ ಮಾತುಕತೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ ರಮೇಶ ಜಾರಕಿಹೊಳಿ, ವಿಜಯೇಂದ್ರ ಇದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ನೀವು ಪ್ರಬಿಜೆಪಿಗೆ ಬರಬೇಕು ಎಂದು ನನ್ನನ್ನು ಕರೆದಿದ್ದರು. ಆ ಸ್ನೇಹಕ್ಕೆ ಕಟ್ಟುಬಿದ್ದು ಬಂದೆ ಎಂದು ಹೇಳಿದರು.

ಇದನ್ನು ಸಹ ಓದಿ :ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ

ಶ್ರೀನಿವಾಸಪ್ರಸಾದ್ ಹಾಗೂ ಯಡಿಯೂರಪ್ಪ ನನ್ನ ಕೈಬಿಟ್ಟರು. ನಾನು ಸಚಿವನಾಗಲು ಯಾರೂ ಸಹಕಾರ ಕೊಡಲಿಲ್ಲ. ವಿಧಾನಪರಿಷತ್ ಸದಸ್ಯ ಸ್ಥಾನ ಸಿಗುವುದಕ್ಕೂ ಅವರಾರೂ ಕಾರಣ ವಾಗಲಿಲ್ಲ. ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದವರು ಆರ್‌ಎಸ್ಎಸ್ ರಾಜ್ಯ ಪ್ರಮುಖ ಮುಕುಂದ, ಅವರಿಲ್ಲದಿದ್ದರೆ ನನಗೆ ಮೋಸವಾಗುತ್ತಿತ್ತು ಎಂದಿದ್ದಾರೆ. 

ಬ್ಯಾರಿ ಮಾಲ್​ಗೆ 99 ವರ್ಷ ಲೀಜ್​ ಗ್ಯಾರಂಟಿನೆ? ನಡೆಯಿತೇ ಕಾಣದ ಕೈಗಳ ಡೀಲ್​?