ಹೆಂಡತಿ ಕೊಂದ ಗಂಡನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ? ಭದ್ರಾವತಿ ಕೇಸ್ 0101/2020 ರಲ್ಲಿ ಏನಾಯ್ತು ಓದಿ
Do you know what the court has awarded to a man who killed his wife? Bhadravathi case Read what happened in 0101/2020
![ಹೆಂಡತಿ ಕೊಂದ ಗಂಡನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ? ಭದ್ರಾವತಿ ಕೇಸ್ 0101/2020 ರಲ್ಲಿ ಏನಾಯ್ತು ಓದಿ](https://malenadutoday.com/uploads/images/202307/image_750x_64a0f17842d41.jpg)
KARNATAKA NEWS/ ONLINE / Malenadu today/ Jul 2, 2023 SHIVAMOGGA NEWS
ಶಿವಮೊಗ್ಗ / ಹೆಂಡತಿಯನ್ನು ಕೊಂದ ಆರೋಪಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯಾಗಿದೆ.
ಪ್ರಕರಣವೇನು?
ದಿನಾಂಕಃ 03-05-2020 ರಂದು ಹೊಳೆಹೊನ್ನೂರು ಟೌನ್ ನ ನಿವಾಸಿ ಗಣೇಶ್ ತನ್ನ ಪತ್ನಿ ಗೀತಾ, ತಲೆಗೆ ಹೊಡುದ ಕೊಲೆಮಾಡಿದ್ದ, ಈ ಸಂಬಂಧ ಗೀತಾರ ಸಹೋದರಿ ದೂರು ನೀಡಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0101/2020 ಕಲಂ 302 ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು.
ಈ ಸಂಬಂಧ ಅಂದಿನ ತನಿಖಾಧಿಕಾರಿ ಮಂಜುನಾಥ್ ಇ. ಒ., ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರಿ ಅಭಿಯೋಜಕರು ರತ್ನಮ್ಮ, ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಇದೀಗ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ ನ್ಯಾಯಾಲಯ ತೀರ್ಪು ನೀಡಿದ್ದು ಆರೋಪಿ ಗಣೇಶ್ಗೆ ಜಿವಾವಧಿ ಶಿಕ್ಷೆ ಮತ್ತು 50,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 03 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ತಿರುಪತಿ-ಚೆನ್ನೈಗೆ ಹೋಗಲು ಇನ್ನಷ್ಟು ಅನುಕೂಲ! ಶಿವಮೊಗ್ಗ- ಎಂಜಿಆರ್ ಚನ್ನೈ ಸೆಂಟ್ರಲ್ ಟ್ರೈನ್ಗೆ ಮತ್ತಷ್ಟು ಅವಕಾಶ! ಡಿಟೇಲ್ಸ್
ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station (SMET))ದಿಂದ ಸಂಚರಿಸುವ 06223/Shivamogga Town - MGR Chennai Central Special ರೈಲು ಹಾಗೂ 06224/MGR Chennai Central - Shivamogga Town Special ಟ್ರೈನ್ ಓಡಾಟವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.
ಕಳೆದ ಜೂನ್ 27 ಕ್ಕೆ ಈ ರೈಲು ಓಡಾಟದ ಅವಧಿ ಮುಕ್ತಾಯಗೊಂಡಿತ್ತು. ಇದೀಗ ರೈಲು ಸಂಚಾರದ ಅವಧಿಯನ್ನು ಮುಂದಿನ ಸೆಪ್ಟೆಂಬರ್ 26 ರವರೆಗೂ ಮುಂದುವರಿಸಲಾಗಿದೆ. ಆಂಧ್ರ ಹಾಗೂ ತಮಿಳುನಾಡಿನ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಟ್ರೈನ್ MGR Chennai Ctrl ,ಅರಕ್ಕೋಣಂ ಜೆಎನ್, ರೇಣಿಗುಂಟಾ ಜೆಎನ್, ರಜಂಪೇಟಾ, ಕಡಪ, ಯೆರ್ರಗುಂಟಾ ಜೆಎನ್,ತಾಡಿಪತ್ರಿ,ಗೂಟಿ ಜಂಕ್ಷನ್, ಗುಂತಕಲ್ ಜಂಕ್ಷನ್, ಬಳ್ಳಾರಿ ಜಂಕ್ಷನ್, ರಾಯದುರ್ಗ ಜಂಕ್ಷನ್, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು ಜಂಕ್ಷನ್, ಹೊಸದುರ್ಗ ರಸ್ತೆ, ಅಜ್ಜಂಪುರ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ ಮೂಲಕ ಶಿವಮೊಗ್ಗ ನಗರ ತಲುಪುತ್ತೆ. ಇದೇ ರೀತಿಯಲ್ಲಿ ಶಿವಮೊಗ್ಗದಿಂಧ ಎಂಜಿಆರ್ ಚೆನ್ನೈ ಸೆಂಟ್ರಲ್ಗೆ ತೆರಳುತ್ತದೆ.