ಮುಂದಿನ ಸಲ ಕುಮಾರಸ್ವಾಮಿಯೇ ಸಿಎಂ?/ಶಿವಮೊಗ್ಗದ ಈ ದೇವಾಲಯದಲ್ಲಿ ಸಿಕ್ಕಿತು ಹೂವಿನ ಪ್ರಸಾದ? ಏನಿದು ವಿಶೇಷ ಇಲ್ಲಿದೆ ನೋಡಿ
ಪೂಜೆ ತೆಗೆದುಕೊಂಡ ಅರ್ಚಕರು, ಅರ್ಚನೆಯ ಮಂತ್ರವನ್ನು ಹೇಳುತ್ತಿದ್ದರು, ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಕುಮಾರಣ್ಣನಿಗೆ ಒಳ್ಳೆಯದಾಗಲಿ ಎಂದು ಕೈ ಮುಗಿದು ಬೇಡಿಕೊಳ್ತಿದ್ರು.
ಮಾಜಿ ಸಿಎಂ ಜೆಡಿಎಸ್ ವರಿಷ್ಟ ಹೆಚ್.ಡಿ.ಕುಮಾರಸ್ವಾಮಿ (HD Kumaraswamy,) ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೂ ಮೊದಲೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಂಡು ಚುನಾವಣಾ ರಥಯಾತ್ರೆ ನಡೆಸ್ತಿದ್ದಾರೆ. ಇದರ ಮಧ್ಯೆ ಅವರ ಹುಟ್ಟುಹಬ್ಬವನ್ನು ಜೆಡಿಎಸ್ನ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸ್ತಿದ್ದಾರೆ.
ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ
ಇದಕ್ಕೆ ಪೂರಕವಾಗಿ ಶಿವಮೊಗ್ಗದ ಪಿಳ್ಳಂಗೆರೆಯಲ್ಲಿಯು ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ (Sharada Puryanaik,) ಹಾಗೂ ಜೆಡಿಎಸ್ ಕಾರ್ಯಕರ್ತರು ಪಿಳ್ಳಂಗೆರೆಯ ಲಕ್ಷ್ಮೀವೆಂಕಟರಮಣ ದೇವಾಲಯದಲ್ಲಿ ವಿಶೇಷ ಅರ್ಚನೆ ಕೊಟ್ಟಿದ್ದರು. ಈ ವೇಳೇ ದೇವರಿಂದ ಹೂವಿನ ಪ್ರಸಾದವಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್ ಕಾರು ಡಿಕ್ಕಿ/ ಸವಾರನ ಕಾಲು ಕಟ್
ಪೂಜೆ ತೆಗೆದುಕೊಂಡ ಅರ್ಚಕರು, ಅರ್ಚನೆಯ ಮಂತ್ರವನ್ನು ಹೇಳುತ್ತಿದ್ದರು, ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಕುಮಾರಣ್ಣನಿಗೆ ಒಳ್ಳೆಯದಾಗಲಿ ಎಂದು ಕೈ ಮುಗಿದು ಬೇಡಿಕೊಳ್ತಿದ್ರು. ಈ ವೇಳೆ ಏರಡು ಭಾರಿ ವೆಂಕರಮಣ ಸ್ವಾಮಿಯ ಬಲಭಾಗದಿಂದ ಹೂವಿನ ಪ್ರಸಾಧವಾಗಿದೆ. ಇದು ಶುಭ ಸಂಕೇತ, ಹೀಗಾಗಿ ಮುಂದಿನ ಸಲ ಕುಮಾರಸ್ವಾಮಿ ಸಿಎಂ ಆಗೋದು ಗ್ಯಾರಂಟಿ ಅಂತಿದ್ದಾರೆ ಕಾರ್ಯಕರ್ತರು ಹಾಗೂ ಮುಖಂಡರು.
ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್ - ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್ ಟ್ರೈನ್ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ
ಪಿಳ್ಳಂಗೆರೆ ಲಕ್ಷ್ಮೀ ವೆಂಕಟರಮಣ ದೇವಾಲಯ ಪುರಾತನವಾಗಿದ್ದು, ಅದರದ್ದೇ ವೈಶಿಷ್ಟ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹೂವಿನ ಪ್ರಸಾದವನ್ನು ಜೆಡಿಎಸ್ ಮುಖಂಡರು ಮುನ್ಸೂಚನೆಯೇಂದೇ ಭಾವಿಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link