ಚಿಲೂರು ಡಬಲ್ ಅಟ್ಯಾಕ್ ಕೇಸ್​ಗೆ ದುಡ್ಡು ಫೀಡ್ ಆಗಿದ್ದು ಎಲ್ಲಿಂದ!? ರೌಡಿಗಳ ಮನಿ ಮ್ಯಾಟರ್​ ಹಿಂದಿದ್ಯಾ ಇಸ್ಪೀಟ್​ ದಂಧೆ?

Where did the money feed for the Chilur double attack case from!? Is the money matter of rowdies behind the card racket?

ಚಿಲೂರು ಡಬಲ್ ಅಟ್ಯಾಕ್ ಕೇಸ್​ಗೆ ದುಡ್ಡು ಫೀಡ್ ಆಗಿದ್ದು ಎಲ್ಲಿಂದ!? ರೌಡಿಗಳ ಮನಿ ಮ್ಯಾಟರ್​ ಹಿಂದಿದ್ಯಾ ಇಸ್ಪೀಟ್​ ದಂಧೆ?
ಚಿಲೂರು ಡಬಲ್ ಅಟ್ಯಾಕ್ ಕೇಸ್​ಗೆ ದುಡ್ಡು ಫೀಡ್ ಆಗಿದ್ದು ಎಲ್ಲಿಂದ!? ರೌಡಿಗಳ ಮನಿ ಮ್ಯಾಟರ್​ ಹಿಂದಿದ್ಯಾ ಇಸ್ಪೀಟ್​ ದಂಧೆ?

MALENADUTODAY.COM  |SHIVAMOGGA| #KANNADANEWSWEB

SHIVAMOGGA CRIME / chiluru dubble attack case / ಇತ್ತಿಚ್ಚಿಗೆ ರೌಡಿ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳು ಶಿವಮೊಗ್ಗದ ಕೋರ್ಟ್ ಮುಗಿಸಿಕೊಂಡು ವಾಪಸ್ಸು ಹೋಗುವ ಸಂದರ್ಭದಲ್ಲಿ  ಹಂದಿ ಅಣ್ಣಿ ಕಡೆ ಹುಡುಗರು ಗೋವಿನ ಕೋವಿ ಬಳಿ ಮಚ್ಚು ಲಾಂಗುಗಳಿಂದ ದಾಳಿ ಮಾಡಿ ಓರ್ವನನ್ನು ಕೊಲೆಗೈದ್ದಿದ್ದರು.ಈ ಘಟನೆ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದ.

ಇದೊಂದು ರೀವೆಂಜ್ ಅಟ್ಯಾಕ್​ ಆಗಿದ್ದರೂ, ಅದರ ಹಿಂದೆ ಇಸ್ಪೀಟ್ ಜೂಜಿನ ಕಮಟು ವಾಸನೆ ಅಂಟಿಕೊಂಡಿದೆ. ರೌಡಿ ಕಾಡಾ ಕಾರ್ತಿಕ್ ಮೈಸೂರು ಜೈಲಿನಲ್ಲಿದ್ದುಕೊಂಡೇ ಶಿವಮೊಗ್ಗದಲ್ಲಿ ಇಸ್ಪೀಟ್ ಆಡಿಸುವವರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾನೆ. ಈವರೆಗೂ ಲಕ್ಷಗಟ್ಟಲೆ ಹಣ ವಸೂಲಿಯಾಗಿದ್ದು, ತನ್ನ ಹುಡುಗರ ಕೋರ್ಟು ಖರ್ಚಿಗೆ ಎಂದೆಲ್ಲಾ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾನೆಂದು ಪಾತಕ ಲೋಕ ಮಾತನಾಡಿಕೊಳ್ಳುತ್ತಿದೆ. ಇತ್ತೀಚೆಗೆ ಹಂದಿ ಅಣ್ಣಿ ಕೊಲೆ ಮಾಡಿ ವಿಜಯಪುರ ಜೈಲಿನಲ್ಲಿದ್ದ  ಅಂಜನೇಯ ಮತ್ತು ಮಧು ಜಾಮೀನಿಗೂ ಈ ಕಾಡ ಕಾರ್ತಿಯೇ ಹಣಕಾಸಿನ ವ್ಯವಸ್ಥೆ ಮಾಡಿದ್ದ, ನಂತರ ಇಬ್ಬರಿಗೂ ಕಾರ್ತಿ ದೊಡ್ಡ ಮೊತ್ತದ ಹಣವನ್ನೇ ಅರೆಂಜ್ ಮಾಡಿದ್ದ ಎನ್ನಲಾಗಿದೆ.  ರೌಡಿ ಸಾಮ್ರಾಜ್ಯಕ್ಕೆ ಇಷ್ಟೊಂದು ಪರಿ ಹಣ ಹರಿದು ಬರುತ್ತಿರುವುದು ಎಲ್ಲಿಂದ ಎಂದು ಆಳಕ್ಕೆ ಇಳಿದ್ರೆ ಅದು ಇಸ್ಪೀಟ್ ಜಗತ್ತನ್ನು ಬೊಟ್ಟು ಮಾಡಿ ತೋರಿಸುತ್ತದೆ. '

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

ಹೌದು ಶಿವಮೊಗ್ಗದ ಫ್ರಂಟ್ ಲೈನ್ ರೌಡಿಗಳು ದಂಧೆ ನಡೆಯುವ ದಿನ ದಿನಕ್ಕೆ ಕನಿಷ್ಠ ಎಂದರೂ ಇಪ್ಪತ್ತು ಸಾವಿರ ಹಣವನ್ನು ಹಫ್ತಾ ರೀತಿಯಲ್ಲಿ ವಸೂಲಿ ಮಾಡುತ್ತಾರೆ. ಇಸ್ಪೀಟ್ ಆಡುವ ಜಾಗದಲ್ಲಿ ಗಂಟೆಗೆ ಹತ್ತು ಪರ್ಸೆಂಟ್ ನಂತೆ ಬಡ್ಡಿ ಬಿಡುತ್ತಾರೆ. ಹೈಸ್ಟ್ರೋಕ್ ಇಸ್ಪೀಟ್ ಗಳು ನಡೆದ್ರೆ ರೌಡಿಗಳಿಗೂ ಬಾಡೂಟವಿದ್ದಂತೆ. ಹೊರ ಊರುಗಳಲ್ಲಿ ಹಾಗು ಕಾಡಿನ ಪರಿಸರದಲ್ಲಿ ಇಸ್ಪೀಟ್ ಅಕ್ರಮ ಕೂಟ ನಡೆಸುವವರೇ..ಪಾತಕ ಲೋಕವನ್ನು ಸಾಕುತ್ತಿದ್ದಾರೆ. ಇನ್ನು ಈ ದಂಧೆಯಿಂದ ಹಫ್ತಾ ಬರಬೇಕೆಂದರೆ ಸಾಮಾನ್ಯ ಸಂಗತಿಯೇನಲ್ಲ. ಮಾರ್ಕೇಟ್ ನಲ್ಲಿ ರೌಡಿ ಹೆಸರು ಚಲಾವಣೆಯಲ್ಲಿದ್ರೆ ಮಾತ್ರ..ಹಣ ವಸೂಲಿಯಾಗುತ್ತೆ. ಇಲ್ಲ ಅಂದ್ರೆ ದಂಧೆ ನಡೆಸುವವರು ಕ್ಯಾರೆ ಕುತ್ತಾ ಅನ್ನೋದಿಲ್ಲ. ಹೀಗಾಗಿ ತಮ್ಮ ಮಾರ್ಕೇಟ್ ಬಿಲ್ಡ್ ಆಗುತ್ತಿದ್ದಂತೆ ರೌಡಿಗಳಿಗೆ ಮೊದಲ ಕಣ್ಣು ಬೀಳುವುದೇ ಇಸ್ಪೀಟ್ ತೂರೆ ಬಿಲ್ಲೆ ಆಡಿಸುವವರ ಮೇಲೆ. ಇನ್ನು ಮಾರ್ಕೇಟ್ ನಲ್ಲಿರುವ ರೌಡಿಗಳನ್ನು ಒಳಗೆ ಹಾಕೊಂಡ್ರೆ, ಪುಡಿ ರೌಡಿಗಳನ್ನು ಮಟ್ಟ ಹಾಕಬಹುದು ಎಂಬ ಲೆಕ್ಕಚಾರದಲ್ಲಿ ಇಸ್ಪೀಟ್ ದಂಧೆ ನಡೆಸುವವರು ಇಂತಹ ರೌಡಿಗಳಿಗೆ ಮಾಮೂಲಿ ಕೊಡುತ್ತಾರೆ. ಹೀಗಾಗಿ ಈ ದಂಧೆಯ ಮೇಲೆ ನಿಯಂತ್ರಣ ಸಾಧಿಸೋಕ್ಕೆ ಯಾವಾಗ್ಲೂ ಗ್ಯಾಂಗ್ ವಾರ್ ಗಳು ನಡೆಯುತ್ತವೆ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಬಂಕ್ ಬಾಲು ವರ್ಸಸ್ ಮತ್ತು ಮಾಜಿ ರೌಡಿ

ರೌಡಿಸಂ ಬಿಟ್ಟು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂದು ರಾಜಕೀಯ ಜೀವನಕ್ಕೆ ಕಾಲಿಟ್ಟ ಮಾಜಿ ರೌಡಿ ಒಬ್ಬ ಒಂದು ಕ್ಲಬ್ ನಡೆಸುತ್ತಿದ್ದ ಸಂದರ್ಭದಲ್ಲಿ ರೌಡಿ ಬಂಕ್ ಬಾಲು ಹಫ್ತಾ ವಸೂಲಿಗೆ ಮುಂದಾದ ಸಂದರ್ಭದಲ್ಲಿ ಸಂಘರ್ಷಗಳಾಗಿರುತ್ತೆ. ಹಫ್ತಾ ಹೆಚ್ಚಿನ ಪ್ರಮಾಣದಲ್ಲಿ ಬಂಕ್ ಬಾಲು ಕೇಳಿದಾಗ  ಆ ಮಾಜಿ ರೌಡಿ, ನಿರಾಕರಿಸುತ್ತಾರೆ. ಈ ಘಟನೆಯ ನಂತರ ಮುಂದೆ ಬಂಕ್ ಬಾಲು ಮರ್ಡರ್ ಹೇಗಾಯ್ತು ಅನ್ನೋದು ಶಿವಮೊಗ್ಗದ ಜನತೆಗೆ ಗೊತ್ತಾಗುತ್ತೆ. ಇನ್ನು ಹಂದಿ ಅಣ್ಣಿ ಮರ್ಡರ್ ಕೇಸ್ ನಲ್ಲೂ ಜೂಜಿನ ವ್ಯವಹಾರವೇ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದೆ. ಕಾಡಾ ಕಾರ್ತಿಕ್ ಅಂಡ್ ಟೀಂ ಗೆ ಇಸ್ಪೀಟ್ ಲೋಕದ ದುಡ್ಡು ದೊಡ್ಡ ಮಟ್ಟದಲ್ಲಿ ಸರಬರಾಜು ಆಗಿದೆ. ಅದೇ ರೀತಿ ಅಂಜನೇಯ ಮತ್ತು ಮಧು ಕೊಲೆ ಮಾಡಬೇಕೆಂದು ತಮಿಳು ರಮೇಶ್ ಟೀಂಗೂ ಕೂಡ ಇಸ್ಪೀಟ್ ದಂಧೆಯ ಹಣವೇ ಫೀಡ್ ಆಗಿದೆ ಎನ್ನಲಾಗಿದೆ. ಹಂದಿ ಅಣ್ಣಿಯ ಟೀಂ ನಲ್ಲಿರುವವರೆಲ್ಲಾ ಆರ್ಥಿಕವಾಗಿ ಗಟ್ಟಿಯಾಗಿದ್ದಾರೆ. ಹೊಳೆಹೊನ್ನೂರು ಭದ್ರಾವತಿ ಉಂಬ್ಳೆಬೈಲು  ಇಸ್ಪೀಟ್ ಟೀಂ ತಮೀಳು ರಮೇಶ್ ನಿಗೆ ಆರ್ಥಿಕ ಸಹಾಯ ಮಾಡಿದೆ ಎನ್ನಲಾಗಿದೆ. ಕಾಡಾ ಕಾರ್ತಿಕ್ ಮತ್ತು ಮಾರ್ಕೇಟ್ ಲೋಕಿ ಜೈಲಿನಲ್ಲಿದ್ದುಕೊಂಡೇ ಹವಾ ಮೆಂಟೇನ್ ಮಾಡ್ತಿದ್ದಾರೆ. ಶಿವಮೊಗ್ಗ ಭದ್ರಾವತಿಯಲ್ಲಿ ಇಸ್ಪೀಟ್ ದಂಧೆ ನಿಂತಿದ್ದರೂ, ಉಂಬ್ಳೆಬೈಲು ಕಾಡಿನ ಪರಿಸರದಲ್ಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಮಾಹಿತಿ ಟುಡೆಗೆ ಲಭ್ಯವಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news ಹಂದಿ ಅಣ್ಣಿ ಕೊಲೆ,  ಮಧು , ಆಂಜನೇಯ handi anni murder,handi anni news,handi anni,handi anni murderers,handi anni murder case,handi anni murder acuused arrest,handi anni case,handi quilter,handi anni accused of murder,handhi anni is no more,anni dewani,rowdy sheeter handhi anni,anni dewani story in hindi,case of anni dewani in hindi,anni,chicken shahi handi,hindi cartoon,anni dewani murder,anni dewani wedding video,who killed anni dewani,anni dewani documentary