ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಇರಲಿ ಮುನ್ನೆಚ್ಚರಿಕೆ | ವಿಧಿಯ ಅನ್ಯಾಯಕ್ಕೆ 2 ಜೀವ ಬಲಿ

Two killed after falling into krashihonda under Kumsi police station limits

ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಇರಲಿ ಮುನ್ನೆಚ್ಚರಿಕೆ | ವಿಧಿಯ ಅನ್ಯಾಯಕ್ಕೆ  2 ಜೀವ ಬಲಿ
Kumsi police station limit, krashihonda

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಕಾಲು ತೊಳೆದುಕೊಳ್ಳುವ ಸಂದರ್ಭದಲ್ಲಿ ಜಾರಿಬಿದ್ದ ಅಪ್ರಾಪ್ತನ್ನ ಉಳಿಸಲು ಹೋದ ಯುವಕನು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ  ಸ್ಥಳೀಯವಾಗಿ ದುಃಖ ಮಡುಗಟ್ಟುವಂತೆ ಮಾಡಿದೆ. ಮೃತರನ್ನ  ಮಾಲತೇಶ್(28) ಹಾಗೂ  ಅಭಯ್ (16)  ಎಂದು ಗುರುತಿಸಲಾಗಿದೆ. 

ಶಿವಮೊಗ್ಗದಿಂದ ಚೆನ್ನಹಳ್ಳಿಗೆ ಅಭಯ್‌ ಎಂಬಾತ ಟ್ರ್ಯಾಕ್ಟರ್‌ ಹೊಡೆಯಲು ಮಾಲತೇಶ್‌ ಜೊತೆಗೆ ತೆರಳಿದ್ದ, ಕೆಲಸ ಮುಗಿಸಿ ಕೃಷಿಹೊಂಡದ ನೀರಿನಲ್ಲಿ ಅಪ್ರಾಪ್ತ ಮುಳುಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಮಾಲತೇಶ ನೀರಿಗೆ ಇಳಿದಿದ್ದಾನೆ. ಇಬ್ಬರು ಸಹ ಮೇಲೆಕ್ಕೆ ಬರಲಾಗದೇ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಮಾಲ್ತೇಶ್‌ ಇತ್ತೀಚೆಗಷ್ಟೆ ಮದುವೆಯಾಗಿದ್ದು, ಆತನ ಸಾವು ಕುಟುಂಬಕ್ಕೆ ದೊಡ್ಡ ಶಾಕ್‌ ನೀಡಿದೆ.