BSY ವಿರುದ್ದ ಪ್ರಶ್ನೆ | ಬಂಗಾರಪ್ಪರವರ ವಿರುದ್ಧ ಸ್ಪರ್ಧೆ | SAVE BJP ನಾಯಕನ ಬಗ್ಗೆ ಇಲ್ಲಿದೆ ಗೊತ್ತಿರದ ವಿಚಾರ
Bhanuprakash, a dedicated member of the RSS and BJP from Shivamogga, BS Yediyurappa Eshwarappa rebellion. BJP Vice President
![BSY ವಿರುದ್ದ ಪ್ರಶ್ನೆ | ಬಂಗಾರಪ್ಪರವರ ವಿರುದ್ಧ ಸ್ಪರ್ಧೆ | SAVE BJP ನಾಯಕನ ಬಗ್ಗೆ ಇಲ್ಲಿದೆ ಗೊತ್ತಿರದ ವಿಚಾರ](https://malenadutoday.com/uploads/images/202406/image_870x_666fe96948a03.webp)
SHIVAMOGGA | MALENADUTODAY NEWS | Jun 17, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ರಾಜಕೀಯ ಪವರ್ ಸೆಂಟರ್, ಇಲ್ಲಿರೋದು ಹೋರಾಟದ ಮನ. ಅದಕ್ಕೆ ಸಾಕ್ಷಿಯಂತಿದ್ದವರ ಪೈಕಿ ಭಾನುಪ್ರಕಾಶ್ ಕೂಡ ಒಬ್ಬರು ಆರ್ಎಸ್ಎಸ್ ಹಾಗೂ ಬಿಜೆಪಿ ನಿಷ್ಟರಾಗಿದ್ದ ಅವರು ನಾಯಕರ ತಪ್ಪುಗಳನ್ನ ಸಹ ನೇರಾನೇರ ಹೇಳಿದವರು. ಪಕ್ಷದ ನಡೆಯಲ್ಲಿ ತಪ್ಪು ಹಾದಿ ಕಾಣಿಸಿದ ತಕ್ಷಣವೇ ಎಚ್ಚರಿಸಿ ವಿರೋಧಿಸಿದವರು. ಬಿಎಸ್ ಯಡಿಯೂರಪ್ಪನವರ ನಡೆಯನ್ನೆ ಹಿಂದೊಮ್ಮೆ ವಿರೋಧಿಸಿದ್ದ ಅವರು ಇತ್ತೀಚೆಗೆ ಈಶ್ವರಪ್ಪನವರ ಬಂಡಾಯದ ಸಂದರ್ಭದಲ್ಲಿ ಫೇಸ್ಬುಕ್ ಪೋಸ್ಟ್ವೊಂದನ್ನ ಹಾಕಿದ್ದರು. ಆ ಮೂಲಕ ಪಕ್ಷದ ಬೆಳವಣಿಗೆಯನ್ನು ವಿಭಿನ್ನವಾಗಿ ಅರ್ಥವಾಗಿಸಿದ್ದರು. ಇವತ್ತು ಅವರನ್ನ ಕಳೆದುಕೊಂಡ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಆಘಾತವಾಗಿದೆ.
ಶಿವಮೊಗ್ಗ ಜಿಲ್ಲೆಯ ಮತ್ತೂರಿನವರಾದ ಭಾನುಪ್ರಕಾಶ್ ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.2013-19 ರವರೆಗೆ ಎಂಎಲ್ ಸಿಯಾಗಿದ್ದರು. ವಿಶೇಷ ಅಂದರೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ, ಅವರ ವಿರುದ್ಧ ಭಾನುಪ್ರಕಾಶ್ ಸ್ಪರ್ಧೆ ಮಾಡಿದ್ದರು.
ಸೇವ್ ಬಿಜೆಪಿಯ ಅಭಿಯಾನದಲ್ಲಿ ಪಾಲ್ಗೊಂಡು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದ ಭಾನುಪ್ರಕಾಶ್ರನ್ನ ಬಿಜೆಪಿಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಅವರಿಗೆ ವಹಿಸಿದ್ದ ಜವಾಬ್ದಾರಿಗಳಿಂದ ಅವರನ್ನ ಮುಕ್ತಗೊಳಿಸಿದರು, ಅವರು ಪಕ್ಷನಿಷ್ಟ ಕಾರ್ಯಕರ್ತನಾಗಿ ತಮ್ಮ ಅಸಮಾಧಾನವನ್ನು ನೇರವಾಗಿಯೇ ವ್ಯಕ್ತಪಡಿಸಿದ್ದರು.
Bhanuprakash, a dedicated member of the RSS and BJP from Shivamogga, BS Yediyurappa Eshwarappa rebellion. BJP Vice President