ಶಿವಮೊಗ್ಗ ಫ್ರೀಡಂಪಾರ್ಕ್ಗೆ ಹೆಸರು! ಶಾಸಕ & ಸಚಿವರ ಭಿನ್ನ ಅಭಿಪ್ರಾಯ! ಸಿದ್ದರಾಮಯ್ಯರಿಂದ ಅಂತಿಮ ತೀರ್ಮಾನ ಏನದು?
Shimoga Freedom Park to be renamed, MLA and Minister differ at Yuvanidhi event
![ಶಿವಮೊಗ್ಗ ಫ್ರೀಡಂಪಾರ್ಕ್ಗೆ ಹೆಸರು! ಶಾಸಕ & ಸಚಿವರ ಭಿನ್ನ ಅಭಿಪ್ರಾಯ! ಸಿದ್ದರಾಮಯ್ಯರಿಂದ ಅಂತಿಮ ತೀರ್ಮಾನ ಏನದು?](https://malenadutoday.com/uploads/images/202401/image_870x_65a10734b0dba.webp)
SHIVAMOGGA | Jan 12, 2024 | ಶಿವಮೊಗ್ಗದ ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಯುವನಿಧಿ ಕಾರ್ಯಕ್ರಮದಲ್ಲಿ ಫ್ರೀಡಂಪಾರ್ಕ್ ಗೆ ಹೆಸರಿಡುವ ವಿಚಾರ ಸಹ ಚರ್ಚೆಯಾಯ್ತು. ಅಷ್ಟೆ ಅಲ್ಲದೆ, ಈ ಸಂಬಂಧ ಶಿವಮೊಗ್ಗ ನಗರ ಶಾಸಕ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದ ಆರಂಭದಲ್ಲಿಯೇ ಮಾತನಾಡಿದ ಉಸ್ತುವಾರಿ ಸಚಿವರು ಮಲೆನಾಡಿನ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯರ ಮುಂದೆ ಇಡುತ್ತಾ, ಶಿವಮೊಗ್ಗದ ಫ್ರೀಡಂಪಾರ್ಕ್ ಗೆ ಅಲ್ಲಮಪ್ರಭುರವರ ಹೆಸರು ಇಡಬೇಕು ಎಂದು ವಿನಂತಿಸಿದರು. ಈ ಸಂಬಂಧ ಮಲೆನಾಡಿಗರ ಪರವಾಗಿ ಕೇಳುತ್ತೇವೆ ಎಂದು ಮನವಿ ಸಲ್ಲಿಸಿದರು.
ಈ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪರವರು ಅಲ್ಲಮಪ್ರಭುರವರನ್ನು ನಾವು ಎಲ್ಲಾ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದೇವೆ. ಆದರೆ ಈಗಾಗಲೇ ಹೆಸರನ್ನು ಇಟ್ಟಿರುವ ಫ್ರೀಡಂಪಾರ್ಕ್ಗೆ ಮತ್ತೊಮ್ಮೆ ಹೆಸರನ್ನ ಇಡಬೇಕೆ, ಅದರ ಅಗತ್ಯವಿದೆಯೇ ಎಂದು ಸಿಎಂ ಸಿದ್ದರಾಮಯ್ಯರವರ ಸರ್ಕಾರ ಪರಿಶೀಲಿಸಿ ತೀರ್ಮಾನಿಸಲಿ ಎಂದು ತಿಳಿಸಿದರು.
ಈ ಅಭಿಪ್ರಾಯಗಳು ಕಾರ್ಯಕ್ರಮದಲ್ಲಿ ಚೂರು ಗಮನಸೆಳೆಯತಷ್ಟೆ ಅಲ್ಲದೆ ಕಾರ್ಯಕರ್ತರ ಹೂ …ಹಾ …ಹೋ ..ಹೇ ಎಂಬ ಹೂಂಕಾರಗಳಿಗೆ ಸಾಕ್ಷಿಯಾಯ್ತು.
ಬಳಿಕ ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ರವರು ಹಳೇ ಜೈಲ್ನ್ನ ಫ್ರೀಡಂಪಾರ್ಕ್ ಆಗಿ ಶಿಫ್ಟ್ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಮಧು ಬಂಗಾರಪ್ಪನವರು ಹೇಳಿದ್ದಾರೆ. ಫ್ರೀಡಂಪಾರ್ಕ್ಗೆ ಅಲ್ಲಮಪ್ರಭುರವರ ಹೆಸರು ಇಡಬೇಕು ಎಂದಿದ್ದಾರೆ.
ಚನ್ನಬಸಪ್ಪನವರೇ ಅಲ್ಲಮಪ್ರಭುರವರು 12 ಶತಮಾನದವರು, ನಿಮ್ಮ ಊರಿನವರು. ಇವತ್ತು ಏನಾದರೂ ಅನುಭವ ಮಂಟಪ ಇದೆಯಲ್ಲಾ, ಇವತ್ತಿನ ಪಾರ್ಲಿಮೆಂಟ್, ವಿಧಾನಸಭೆ ಅಲ್ಲಿಂದಲೇ ಆರಂಭವಾಗಿದ್ದು. ಅದರ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುರವರು. ಹಾಗಾಗಿ ಫ್ರೀಡಂಪಾರ್ಕ್ಗೆ ಅವರ ಹೆಸರು ಇಡುವುದು ಸೂಕ್ತ ಎಂದು ಭಾವಿಸುತ್ತೇನೆ ಎಂದರು.
ಬಹಳ ಜನ ಟೀಕೆ ಮಾಡುತ್ತಾರೆ. ಐದು ಗ್ಯಾರಂಟಿಗಳು ಎಲ್ಲಿ ಜಾರಿಯಾದವು , ನೀವೆ ಸಾಕ್ಷಿ ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ನೀವು ಪರಿಶೀಲಿಸಿ ಇವತ್ತು ಜಾರಿಯಾಗಿದ್ದು ಐದು ಗ್ಯಾರಂಟಿಗಳಲ್ಲಿ ಒಂದು ಎಂದು ಸಿದ್ದರಾಮಯ್ಯರವರು ಜೈ ಕರ್ನಾಟಕ ಎಂದು ಘೋಷಿಸಿ ತಮ್ಮ ಭಾಷಣ ಮುಗಿಸಿದರು