ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ಗೆ ಬಂದ ನಾಗರ ಹಾವು!
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿನ್ನೆ ನಾಗರಾಜನದ್ದೇ ಸುದ್ದಿಯಾಗಿತ್ತು. ದೂರು ಹೇಳಿಕೊಳ್ಳಲು ಬರುವ ಜನರ ನಡುವೆ, ನಾಗರ ಹಾವೊಂದು ಗ್ರಾಮಾಂತರ ಠಾಣೆಯ ಆವರಣಕ್ಕೆ ಬಂದುಬಿಟ್ಟಿತ್ತು. ಪರಿಣಾಮ ಸಿಬ್ಬಂದಿಯ ಎದೆಬಡಿತ ತುಸು ಜಾಸ್ತಿಯಾಗಿತ್ತು.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿನ್ನೆ ನಾಗರಾಜನದ್ದೇ ಸುದ್ದಿಯಾಗಿತ್ತು. ದೂರು ಹೇಳಿಕೊಳ್ಳಲು ಬರುವ ಜನರ ನಡುವೆ, ನಾಗರ ಹಾವೊಂದು ಗ್ರಾಮಾಂತರ ಠಾಣೆಯ ಆವರಣಕ್ಕೆ ಬಂದುಬಿಟ್ಟಿತ್ತು. ಪರಿಣಾಮ ಸಿಬ್ಬಂದಿಯ ಎದೆಬಡಿತ ತುಸು ಜಾಸ್ತಿಯಾಗಿತ್ತು.
ಈ ನಡುವೆ ಸ್ಥಳಕ್ಕೆ ಬಂಧ ಅನೂಪ್ ಎಂಬವರು ಗ್ರಾಮಾಂತರ ಠಾಣೆಯ ಆವರಣಲ್ಲಿ ಹರಿದಾಡ್ತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
ನಡೆದಿದ್ದು ವಿವರವಾಗಿ
ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಬಂದಿದ್ದವರು ಠಾಣೆಯ ಆವರಣದಲ್ಲಿರುವ ನೆರಳಿನಲ್ಲಿ ಕುಳಿತುಕೊಂಡಿದ್ದರು, ಈ ವೇಳೆ ಅಲ್ಲಿಯೇ ಸರ ಸರ ಎಂದು ಹರಿದಾಡಿದ ಶಬ್ದ ಕೇಳಿಬಂದಿದೆ. ಅನುಮಾನ ಬಂದು ನೋಡಿದಾಗ ನಾಗರಾಜ ಬುಸುಗುಡುತ್ತಿರುವುದು ಕಾಣಿಸಿದೆ.
ಈ ವೇಳೆ ದೂರು ಸಲ್ಲಿಸಲು ಬಂದವರು, ಪೊಲೀಸರಿಗೆ ನಾಗರಾಜನ ಬಗ್ಗೆ ದೂರು ಹೇಳಿದ್ದಾರೆ. ಪೊಲೀಸರು ತಕ್ಷಣವೇ ಅನೂಪ್ಗೆ ಕರೆ ಮಾಡಿದ್ದು ಒಂದು ಹಾವು ಬಂದಿದೆ, ಹಿಡಿದು ಕಾಡಿಗೆ ಬಿಡಿ ಉಪಕಾರವಾಗುತ್ತೆ ಎಂದು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅನೂಪ್ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.