ಈತ ಬಾಂಗ್ಲಾದೇಶದ ಪ್ರಜೆ | ಭದ್ರಾವತಿಯಲ್ಲಿದೆ ಈತನ ಮೇಲೆ ಕೇಸ್ | ಸುಳಿವು ಸಿಕ್ಕರೆ ತಕ್ಷಣ ತಿಳಿಸಿ

Bhadravati Police regarding a Bangladeshi national found loitering suspiciously in the area.   Bhadravati Old Town Police Station

ಈತ ಬಾಂಗ್ಲಾದೇಶದ ಪ್ರಜೆ | ಭದ್ರಾವತಿಯಲ್ಲಿದೆ ಈತನ ಮೇಲೆ ಕೇಸ್  | ಸುಳಿವು ಸಿಕ್ಕರೆ ತಕ್ಷಣ ತಿಳಿಸಿ
Bhadravati Old Town Police Station

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

ಶಿವಮೊಗ್ಗ, ಜಿಲ್ಲೆ  ಭದ್ರಾವತಿ ರೈಲ್ವೆ ಸ್ಟೇಷನ್,  ಮಾರ್ಕೇಟ್ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ  ಬಾಂಗ್ಲಾದೇಶಿ ಪ್ರಜೆಯೊಬ್ಬನನ್ನ ಹುಡುಕಿಕೊಡುವ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ. 

ಈತನ ಹೆಸರನ್ನ ಮಹಮ್ಮದ್‍ರುಮನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ, 25 ವರ್ಷ, ಮುಸ್ಲಿಂ ಜನಾಂಗ, ರೆಫೀಜೆಟರ್ ರಿಫೇರಿ ಕೆಲಸ, ವಾಸ: ಶ್ರೀದಾಂಪುರ್ ಗ್ರಾಮ, ಬಾರಿಖಾಲಿ ಪೋಸ್ಟ್, ಮುನಶಿಗಂಜ್ ಜಿಲ್ಲೆ, ಬಾಂಗ್ಲಾದೇಶ ಎಂದು ಗೊತ್ತಾಗಿದೆ. 

ಈತ ಭಾರತದೇಶಕ್ಕೆ ಬರಲು ಪಾಸ್‍ಪೋರ್ಟ್, ವೀಸಾ ಅಥವಾ ಅಧಿಕೃತ ದಾಖಲೆಗಳನ್‌  ಹೊಂದಿಲ್ಲವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದು, ಈ ಆರೋಪಿತನು ಯಾವುದೇ ದಾಖಲಾತಿಗಳು ಇಲ್ಲದೇ ಬಾಂಗ್ಲಾದೇಶದಿಂದ ಭಾರತ ದೇಶಕ್ಕೆ ಬಂದಿದ್ದರಿಂದ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಯುತ್ತಿದೆ. ಆದರೆ  ಆರೋಪಿಯು ನ್ಯಾಯಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಈ ನಿಟ್ಟಿನಲ್ಲಿ ನ್ಯಾಯಲಯವು ಈ ಆರೋಪಿತನ ಪತ್ತೆ  ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರಕ್ಲೋಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡುಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

----------------------

A notice has been issued by the Bhadravati Police regarding a Bangladeshi national found loitering suspiciously in the area.   Bhadravati Old Town Police Station