ಮುರುಡೇಶ್ವರದಲ್ಲಿ ಸಮುದ್ರ ಸ್ನಾನಕ್ಕೆ ಇಳಿದಿದ್ದ ಸಾಗರ ತಾಲ್ಲೂಕಿನ ಇಬ್ಬರು ಯುವಕರ ದುರ್ಮರಣ
Two youths from Sagar taluk drown in sea in Murudeshwar
ಭಟ್ಕಳ ತಾಲ್ಲೂಕಿನ ಮುರುಡೇಶ್ವರ (murudeshwar) ದೇವಾಲಯಕ್ಕೆ ಪ್ರವಾಸಕ್ಕೆಂದು ಬಂದಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಇಬ್ಬರು ಯುವಕರು ಅಲ್ಲಿಯ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇವತ್ತು ಅವರ ಶವ ಪತ್ತೆಯಾಗಿದೆ.
ಕಳೆದ ಸೋಮವಾರ ಪ್ರವಾಸಕ್ಕೆ ಬಂದಿದ್ದ ಸಾಗರ ತಾಲೂಕಿನ ಪುನೀತ್ ಚೌಡಪ್ಪ(30) ಹಾಗೂ ಇನ್ನೊಬ್ಬ ಯುವಕ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಅಲೆಯ ಹೊಡೆತಕ್ಕೆ ಇಬ್ಬರು ಸಹ ಸಮುದ್ರ ಪಾಲಾಗಿದ್ದರು. ಇನ್ನೂ ಈ ಇಬ್ಬರ ಪೈಕಿ ಪುನೀತ್ ಎಂಬವರ ಶವ ಅವತ್ತೆ ಪತ್ತೆಯಾಗಿತ್ತು. ಆದರೆ ಇನ್ನೊಬ್ಬ ಯುವಕನ ಶವ ಪತ್ತೆಯಾಗಿರಲಿಲ್ಲ. ಇವತ್ತು ಯುವಕನ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com