BS Yediyurappa : ಫೆಬ್ರವರಿ 27 ಕ್ಕಾ ವಿಮಾನ ನಿಲ್ದಾಣ ಉದ್ಘಾಟನೆ? ಮುಸ್ಲಿಂ ಮತ ಮತ್ತು ವಿಜಯೇಂದ್ರರ ಚರ್ಚೆ ಹಾಗೂ ಮೋದಿ ಸೂಚನೆ : ಬಿಎಸ್​ವೈ ಮಹತ್ವದ ಮಾತು!

Will the airport be inaugurated on February 27? Muslim vote and By Vijayendra's debate and Modi's suggestion: What BS Yediyurappa said?

ಶಿವಮೊಗ್ಗದಲ್ಲಿ  ಇವತ್ತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ( BS Yediyurappa) ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಎರಡು ದಿವಸ ಬಹಳ ಒಳ್ಳೆಯ ಸಭೆ ಆಯ್ತು. ದೇಶದ ಮುಂದಿನ ಮುಂದಿನ ಪರಿಸ್ಥಿತಿಗಳೇನು ಹಾಗೂ ಮುಂದಿನ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು .  ಪ್ರಧಾನಿ ನರೇಂದ್ರ ಮೋದಿಯವರು ಸುಮಾರು ಒಂದು ಗಂಟೆಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು. ಬಹಳ ಉತ್ಸಾಹದಿಂದ ನಾವೆಲ್ಲರೂ ವಾಪಸ್ ಬಂದಿದ್ದೇವೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Shivamogga airport ಫೆಬ್ರವರಿಯಲ್ಲಿ ಏರ್​ಪೋರ್ಟ್​ ಉದ್ಘಾಟನೆ ಪಕ್ಕಾ/ ಮೋದಿಯಿಂದ ₹7500 ಕೋಟಿ ಕಾಮಗಾರಿಗೆ ಚಾಲನೆ/ 5 ಮುಖ್ಯ ವಿಚಾರ ತಿಳಿಸಿದ ಸಂಸದ ರಾಘವೇಂದ್ರ

140 ಕ್ಕೂ ಹೆಚ್ಚು ಕ್ಷೇತ್ರ 

ಅಲ್ಲದೆ ರಾಜ್ಯದಲ್ಲಿ ಪಕ್ಷದ ಗೆಲುವಿಗಾಗಿ ಮೋದಿಜಿ ಅವರು ಹಾಗೂ ಅಮಿತ್ ಶಾ ಅವರು ಹೆಚ್ಚಿನ ಸಮಯವನ್ನು ಕೊಡುತ್ತಾರೆ, ಅವರುಗಳ ಸಮಯವನ್ನ ಸದುಪಯೋಗಪಡಿಸಿಕೊಂಡು 140 ಕ್ಕೂ ಹೆಚ್ಚು ಸ್ಥಾನವನ್ನುಗೆದ್ದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ತರುತ್ತೇವೆ ಎಂದು ಭರವಸೆಯನ್ನು ಕೊಟ್ಟು ಬಂದಿದ್ದೇವೆ, ಆ ವಿಶ್ವಾಸವೂ ನನಗಿದೆ ಎಂದರು. 

ಮುಸ್ಲಿಂ ಮತಗಳ ಬಗ್ಗೆ ಬಿಜೆಪಿ ಒಲವು

ಸ್ಥಳೀಯ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಕೆಲಸ ಮಾಡಬೇಕು ಎಂದು ಮೋದಿಯವರು ಸಲಹೆ ಕೊಟ್ಟಿದ್ದು,  ಮನೆ ಮನೆಗೆ ಕಾರ್ಯಕರ್ತರು ಭೇಟಿ ಮಾಡಬೇಕು ಎನ್ನುವ   ಸಲಹೆಯನ್ನ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಈಗಾಗಲೇ ನಾವು ಕೆಲಸವನ್ನು ಪ್ರಾರಂಭಿಸಿದ್ದೇವೆ ಎಂದರು. ವಿಶೇಷವಾಗಿ ಮುಸ್ಲಿಂ ಬಂಧುಗಳನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗಬೇಕು ಎನ್ನುವ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ಧಾರೆ. ಈಗಾಗಲೇ ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ ಹಾಗೆ ನಮ್ಮ ಬಗ್ಗೆ ಅವರಿಗೂ ಗೌರವವಿದೆ, ಮುಂಬರುವ ದಿನಗಳಲ್ಲಿ ಅವರನ್ನು ಇನ್ನಷ್ಟು ಸಂಪರ್ಕ ಸಾಧಿಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. 

power cut mescom : ಶಿವಮೊಗ್ಗ ನಗರದಲ್ಲಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವತ್ಯಯವಾಗಲಿದೆ! ಯಾವ್ಯಾವ ಏರಿಯಾದಲ್ಲಿ ಕರೆಂಟ್ ಇರುವುದಿಲ್ಲ ಎಂಬ ವಿವರ ಇಲ್ಲಿದೆ

ವಿಜಯೇಂದ್ರರ ಬಗ್ಗೆ ಚರ್ಚೆ ಆಗಿಲ್ಲ

ಇನ್ನೂ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಬಿ.ವೈ ವಿಜಯೇಂದ್ರರವರ (by vijayendra) ಬಗ್ಗೆ ಚರ್ಚೆ ನಡೆದಿಲ್ಲ, ಅಷ್ಟು ಸಮಯವೂ ಇರಲಿಲ್ಲ ಎಂದ ಬಿಎಸ್​ ಯಡಿಯೂರಪ್ಪ ರವರು ಬಿಕೆ ಹರಿಪ್ರಸಾದ್​ರವರ ಹೇಳಿಕೆ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ ಎಂದಿದ್ಧಾರೆ. 

ಫೆಬ್ರವರಿ 27 ರ ಒಳಗಾಗಿ

ಅಂತಿಮವಾಗಿ ಶಿವಮೊಗ್ಗದ ಏರ್​ಪೋರ್ಟ್​ ಬಗ್ಗೆ ಮಾತನಾಡಿದ, ಬಿಎಸ್​ವೈ ಮುಂದಿನ ತಿಂಗಳು 27 ರ ಒಳಗಾಗಿ ಉದ್ಘಾಟನೆ ಮಾಡೋರಿದ್ದೇವೆ. ಈ ಸಂಬಂಧ ದಿನಾಂಕ ಫಿಕ್ಸ್ ಆಗಿಲ್ಲ. ಇನ್ನೂ ನಾಲ್ಕೈದು ದಿನಗಳಲ್ಲಿ ದಿನಾಂಕ ಫಿಕ್ಸ್ ಆಗಲಿದೆ ಎಂದರು. ಪ್ರಧಾನಿಯವರು ಒಂದು ದಿನ ಸಮಯ ನೀಡಬಹುದು. 95 ಪರ್ಸೆಂಟ್ ವರ್ಕ್ ಮುಗಿದಿದೆ. ಕೆಲವೊಂದು ಕ್ಲಿಯರೆನ್ಸ್ ಸಿಗಬೇಕಿದೆ. ಅದರ ಬಗ್ಗೆ ಮಾತನಾಡಿದ್ದೇವೆ. ಅದು ಸಹ ಆಗಲಿದೆ ಎಂದಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com