ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

Students of journalism department of Kuvempu University in Shivamogga district have delivered the news through Artificial Intelligence through AI News Anchor

ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು  ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS

ಕಳೆದೊಂದು ವಾರದಿಂದ ಆರ್ಟಿಫಿಶಲ್ ಇಂಟೆಲೆನ್ಸಿಯ ನ್ಯೂಸ್ ಆ್ಯಂಕರ್​ಗಳ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಏಐ ಸಾಫ್ಟವೇರ್​ಗಳು ಇಂತಹದ್ದೊಂದು ಕೃತಕ ನ್ಯೂಸ್ ಆ್ಯಂಕರ್​ಗಳನ್ನು ಸೃಷ್ಟಿ ಮಾಡುತ್ತಿದ್ದು, ಸದ್ಯ ಇಂಗ್ಲೀಷ್​ ಭಾಷೆಯಲ್ಲಿ ತಂತ್ರಜ್ಞಾನದ ಮಾಯಾಂಗನೆಯರ ಪ್ರತಿಭೆ ಅತ್ಯತ್ತಮವಾಗಿ ಹೊರಕ್ಕೆ ಬರುತ್ತಿದೆ. ಆದರೆ ಭಾರತದ ಸ್ಥಳೀಯ ಭಾಷೆಗಳು ಈ ಕೃತಕ ಸುಂದರಿಯರಿಗೆ ಕಷ್ಟವಾಗುತ್ತಿದೆ. 

ಆದಾಗ್ಯು ಒಡಿಯಾ ಚಾನಲ್​ ವೊಂದು ಮೊದಲು ಈ ಸಾಫ್ಟ್​ವೇರ್ ಸೃಷ್ಟಿತ ಆ್ಯಂಕರ್​ನ್ನ ಮೊದಲು ಸ್ಕ್ರೀನ್ ಮೇಲೆ ತಂದಿದೆ. ಆನಂತರ ಕನ್ನಡ ನ್ಯೂಸ್ ಫಸ್ಟ್ ಮತ್ತು ಪವರ್ ಟಿವಿ ಏಇ ನಿರೂಪಕಿಯನ್ನು ತಮ್ಮ ಟಿವಿ ಪರದೇ ಮೇಲೆ ಬಿತ್ತರಿಸಿದ್ದವು. ಇದೀಗ  ವಿಷಯ ಏನೆಂದರೆ ಶಿವಮೊಗ್ಗದಲ್ಲಿಯು ಈ ಡೂಪ್ಲಿಕೇಟ್​ ನಿರೂಪಕಿಯ ಆಗಮನವಾಗಿದೆ. 

ಹೌದು, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿಭಾಗದಲ್ಲಿ ಕೃತಕ ಸುಂದರಿಯನ್ನ ಸೃಷ್ಟಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳೇ ಕೂಡಿಕೊಂಡು ನಡೆಸುವ ಸಹ್ಯಾದ್ರಿ ಟಿವಿಯಲ್ಲಿ ನಿನ್ನೆ ಮೊದಲ ಭಾರಿಗೆ ಗೀತಾ ಎಂಬ ಹೆಸರಿನ ಎಐ ನಿರೂಪಕಿಯ ಮೂಲಕ ನ್ಯೂಸ್​ ಓದಿಸಲಾಗಿದೆ. ಶಿವಮೊಗ್ಗದ ಮಟ್ಟಿಗೆ ಇದು ಮೊದಲ ಪ್ರಯತ್ನವಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯತ್ನಕ್ಕೆ ಹಲವರ ಶಹಬ್ಬಾಸ್ ಎಂದಿದ್ಧಾರೆ. ಮಲೆನಾಡಿನ ಅಪ್ಪಟ ಭಾಷೆಯೊಂದಿಗೆ ಸುದ್ದಿ ಓದಿದ ಕೃತಕ ಆ್ಯಂಕರ್ ಗೀತಾಳ ಕಾರ್ಯನಿರ್ವಹಣೆ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. 


500 ರೂಪಾಯಿ ವಿಚಾರಕ್ಕೆ ಕಿರಿಕ್​ ! ದಾಖಲಾಯ್ತು ಐಪಿಸಿ 323,324,504,506,34 & ಅಟ್ರಾಸಿಟಿ ಕೇಸ್​!

500 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ಅಂತಿಮವಾಗಿ ಹೊಡೆದಾಟ, ನಿಂದನೆಗೆ ಕಾರಣವಾಗಿ  ಸಾಲು ಸಾಲು ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಕೇಸ್ ಆಗಲು ಕಾರಣವಾಗಿದೆ. ಶಿವಮೊಗ್ಗ ಸೀಗೇಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್​ ದಾಖಲಾಗಿದೆ. 

ನಡೆದಿದ್ದೇನು?

ದಾಖಲಾಗಿರುವ ಎಫ್ಐಆರ್​ನ ಪ್ರಕಾರ,  ಸೀಗೇಹಟ್ಟಿನಿವಾಸಿ ಲಕ್ಷ್ಮಣ್​ ಎಂಬವರ ಅಳಿಯನ ಬಳಿ ಉಮೆಶ್ , ಮಂಜಣ್ಣ  ಎಂಬವರು ಐನೂರು ರೂಪಾಯಿ ಪಡೆದುಕೊಂಡಿದ್ದರಂತೆ.ಈ ವೇಳೆ ಆರೋಪಿಗಳು ದೂರುದಾರರ ಅಳಿಯನ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದೇ ವಿಚಾರಕ್ಕಾಗಿ ಲಕ್ಷ್ಮಣ್​ ಹಾಗೂ ಇತರರು ಪ್ರಶ್ನಿಸಲು, ಆರೋಪಿಗಳ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ಧಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಸದ್ಯ ಈ ಘಟನೆ ಸಂಬಂಧ,  IPC 1860 (U/s-323,324,504,506,34); The SC & ST (Prevention of Atrocities) Amendment Act 2015 (U/s-3(1)(r),3(1)(s),3(2)(va)) ಅಡಿಯಲ್ಲಿ ದೊಡ್ಡಪೇಟೆ ಪೊಲೀಸರು ಕೇಸ್ ದಾಖಲಿಸಿದ್ಧಾರೆ. 


ಬೆಳಗ್ಗೆ ಬೆಳಗ್ಗೆ ಹುಷಾರ್! ಬೈಕ್​ನಲ್ಲಿ ಬೆನ್ನಟ್ಟಿ ನಡೆಸ್ತಾರೆ ಕ್ರೈಂ ! ಚಿಕ್ಕಲ್​ನಲ್ಲಿ ಏನು ನಡೆಯಿತು ಗೊತ್ತಾ?

ಶಿವಮೊಗ್ಗ ನಗರದ ಚಿಕ್ಕಲ್​ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ. 

ನಡೆದಿದ್ದೇನು ?

ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ.  ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ,  ಅರ್ಧ ಸರ ಮಾತ್ರ ಕಳ್ಳರ ಕೈಗೆ ಬಂದಿದೆ. ಘಟನೆ ಬೆನ್ನಲ್ಲೆ ಮಹಿಳೆ ಕೂಗಿದ್ದರಿಂದ  ಕಳ್ಳರು ಅಲ್ಲಿಂದ ಎಸ್ಕೇಪ್​ ಆಗಿದ್ಧಾರೆ. 

 

ಚಿಕ್ಕಲ್ ನಿವಾಸಿ ಲತಾ ಎಂಬವರು ಮನೆಯ ಸಮೀಪದ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.   50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.  ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

 artificial intelligence kannada, artificial intelligence kannada notes pdf, ai kannada, c artificial intelligence, artificial intelligence essay in kannada, artificial intelligence information in kannada, artificial intelligence in kannada, artificial intelligence in kannada meaning, artificial intelligence meaning in kannada, is artificial intelligence born or made, is ai really ai, what is artificial in artificial intelligence, kannada ai,