ಶಿವಮೊಗ್ಗದ ಕುಂಸಿ ಬಳಿ ಭೀಕರ ಅಪಘಾತ ! ಹೊಸನಗರ ಮಾರೀ ಜಾತ್ರೆಗೆ ಹೋಗಿ ಬರ್ತಿದ್ದ ಇಬ್ಬರು ಯುವಕ ಸಾವು!
Kumsi : Fatal accident near Kumsi in Shimoga Two youths , returning from a marijatra in Hosanagara were found dead.
ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿ ಬರುವ ಕೆರೆಕೋಡಿಯ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ಧಾರೆ. ಘಟನೆಯಲ್ಲಿ ಶಿವಮೊಗ್ಗದ ಪುರಲೆಯ ಅನಿಲ್ ಊರಗಡೂರು ಬಳಿಯ ಇಂದಿರಾ ನಗರದ ರಂಜಿತ್ ಇಬ್ಬರು ಮೃತಪಟ್ಟಿದ್ದಾರೆ.
ಹೊಸನಗರದಲ್ಲಿ ಮಾರಿಜಾತ್ರೆಯನ್ನು ಮುಗಿಸಿ ಬರುತ್ತಿದ್ದ ವೇಳೆ ಶಿಕಾರಿಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಬಸ್ನ ಮುಂಭಾಗ ಕೂಡ ಜಖಂ ಆಗಿದೆ. ಈ ಸಂಬಂಧ ಕುಂಸಿ ಪೊಲೀಸರು ಪರಿಶೀಲನೆ ನಡೆಸಿದ್ದು, ವಿಚಾರಣೆ ನಡೆಸ್ತಿದ್ಧಾರೆ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com