ಶಿವಮೊಗ್ಗದಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ
Fire breaks out at Bhoopalam's house on Kuvempu Road in Shivamogga due to short circuit Father dies while saving son's life
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಬಂಗ್ಲೆಯಲ್ಲಿ ಇವತ್ತು ಬೆಳಗ್ಗಿನ ಜಾವವೇ ಬೆಂಕಿ ಕಾಣಿಸಿಕೊಂಡಿತ್ತು. ಭೂಪಾಳಂರವರ ಮನೆಯ ಮೇಲ್ಗಡೆಯಿರುವ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಇಡೀ ಕೊಠಡಿ ಬೆಂಕಿಯಲ್ಲಿ ಹೊತ್ತಿ ಉರಿದಿತ್ತು.
ಜೀವ ತೆಗೆದ ಹೊಗೆ
BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್ ಸರ್ಕಿಟ್-ಬೆಂಕಿ/ ಶರತ್ ಸಾವು, ಮಗು ಸ್ಥಿತಿ ಗಂಭೀರ
ಇನ್ನೂ ಈ ಘಟನೆಯಲ್ಲಿ ಶರತ್ರವರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣವಾಗಿದ್ದು ಹೊಗೆ. ಹೌದು, ಮೇಲ್ಗಡೆಯಲ್ಲಿರುವ ಬೆಡ್ ರೂಮ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಸ್ಟೆಬಲೈಸೆರ್ಗೆ ಸ್ಫೋಟಗೊಂಡಿತ್ತು. ಇದರ ಬೆನ್ನಲ್ಲೆ, ಕೊಠಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಹೊಗೆಯು ಇಡೀ ಮನೆಯನ್ನ ಆವರಿಸಿದೆ. ಎಲ್ಲೆಡೆ ಹೊಗೆ ಆವರಿಸಿದ್ದರ ಹೊರತಾಗಿ ಶರತ್ ತಮ್ಮ ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ.
ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು
ಮಗನ ಜೀವ ಉಳಿಸಿ ಪ್ರಾಣ ಬಿಟ್ಟ ತಂದೆ,
ಈ ವೇಳೆ ತಮ್ಮ ಮಗನನ್ನು ರಕ್ಷಿಸಿಲು ತೆರಳಿದ್ದ ಶರತ್ಗೆ ದಟ್ಟವಾಗಿ ಆವರಿಸಿದ್ದ ಹೊಗೆ ಉಸಿರಾಟದ ಸಮಸ್ಯೆ ತಂದಿಟ್ಟಿದೆ. ಆದಾಗ್ಯು ತಮ್ಮ ಮಗನನ್ನು ರಕ್ಷಿಸಿಕೊಂಡು ಹೊರಬಂದ ಶರತ್ ವಿಪರೀತ ಹೊಗೆ ಸೇವೆಯಿಂದಾಗಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಶಿವಮೊಗ್ಗದ ನಗರದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನಿಡಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್ಗೆ , ಬಿಂದಾಸ್ ಆಗಿ ಕುಣಿದ ಲೇಡಿಸ್ ಫ್ಯಾನ್ಸ್
ಭೂಪಾಳಂ ಚಂದ್ರಶೇಖರ್ರವರು ಶಿವಮೊಗ್ಗ ನಗರವಷ್ಟೆ ಅಲ್ಲದೆ ಜಿಲ್ಲೆಯಲ್ಲಿಯೇ ಪ್ರತಿಷ್ಟಿತ ಕುಟುಂಬವಾಗಿದೆ, ಇವರ ಕುಟುಂಬಸ್ಥರಾದ ಶರತ್ ರವರ ನಿವಾಸ ಶಿವಮೊಗ್ಗ ಜಿಲ್ಲಾ ಪಂಚಾಯತ್ ಎದುರು ಇತ್ತು. ಈ ಮನೆಯನ್ನು ಸಾಕಷ್ಟು ರಕ್ಷಣಾತ್ಮಕವಾಗಿ ಕಟ್ಟಲಾಗಿದೆ. ಈ ನಡುವೆ ಶಾರ್ಟ್ ಸರ್ಕ್ಯೂಟ್ನಿಂದಾದ ಘಟನೆಯು ಸಾಕಷ್ಟು ಅಚ್ಚರಿ ಮೂಡಿಸುತ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Fire breaks out at Bhoopalam's house on Kuvempu Road in #shivamogga due to short circuit/Father dies while saving son's life #ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಭೂಪಾಳಂರವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ/ ಮಗನ ಜೀವ ಉಳಿಸುವ ವೇಳೆ ಸಾವನ್ನಪ್ಪಿದೆ ತಂದೆ pic.twitter.com/hn08nRn4Qs — malenadutoday.com (@CMalenadutoday) January 8, 2023
ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್?