ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್​ ಆಗಿದ್ದ Dysp ರವಿಕುಮಾರ್ ಹೃದಯಾಘಾತದಿಂದ ನಿಧನ

Dysp Ravikumar, who was super cop in Thirthahalli, passed away due to cardiac arrest

ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್​ ಆಗಿದ್ದ Dysp ರವಿಕುಮಾರ್ ಹೃದಯಾಘಾತದಿಂದ ನಿಧನ
ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್​ ಆಗಿದ್ದ Dysp ರವಿಕುಮಾರ್ ಹೃದಯಾಘಾತದಿಂದ ನಿಧನ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸೂಪರ್​ ಕಾಪ್ ಎಂದೇ ಖ್ಯಾತಿ ಪಡೆದಿದ್ದ  ಪೊಲೀಸ್ ಅಧಿಕಾರಿ ರವಿಕುಮಾರ್ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸದ್ಯ ಅವರು ಹಾಸನದಲ್ಲಿ ಲೋಕಾಯುಕ್ತ ಡಿವೈಎಸ್​ಪಿಯಾಗಿ ಕೆಲಸ ಮಾಡುತ್ತಿದ್ದರು. ತೀರ್ಥಹಳ್ಳಿಯಲ್ಲಿ 2000 ನೇ ಇಸವಿಯಲ್ಲಿ ಸಬ್​ ಇನ್​ಸ್ಪೆಕ್ಟರ್​ ಆಗಿ ಕೆಲಸ ಮಾಡಿದ್ದ ರವಿಕುಮಾರ್​ ರವರು ಬಳಿಕ 2019 ರಲ್ಲಿ ತೀರ್ಥಹಳ್ಳಿಗೆ ಡಿವೈಎಸ್​ಪಿಯಾಗಿ ಮತ್ತೆ ಆಗಮಿಸಿದ್ದರು. ತದನಂತರ ಸಿಒಡಿ ಟ್ರಾನ್ಸಫರ್​ ಆಗಿದ್ದರು. 

ಡೈನಾಮಿಕ್ ಪೋಲಿಸ್ ಕಾಪ್​

ಕಳೆದ 15 ದಿನಗಳ ಹಿಂದೆ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಗೆ ಬಂದಿದ್ದ ರವಿಕುಮಾರ್​ರವರು ಸಬ್​ ಇನ್​ಸ್ಪೆಕ್ಟರ್​ ಆಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್​ ಎನಿಸಿದ್ದರು. ಪ್ರಮುಖವಾಗಿ ತೀರ್ಥಹಳ್ಳಿಯ ರೌಡಿಸಂಗೆ ಮೇಜರ್ ಲಾಟಿ ಏಟು ಕೊಟ್ಟಿದ್ದ ರವಿಕುಮಾರ್​ರವರು , ಹಲವು ಇಂಟ್ರಸ್ಟಿಂಗ್​ ಕೇಸ್​ಗಳನ್ನು ಭೇದಿಸಿದ್ದರು. ಮುಖ್ಯವಾಗಿ ಅಕ್ರಮ ಚುಟವಟಿಕೆಗಳಿಗೆ ಕಡಿವಾಣ ಹಾಕಿದ್ದ ರವಿಕುಮಾರ್​ರವರು, ಪೊಲೀಸ್​ ಸ್ಟೈಲ್​ನಲ್ಲಿ ಪುಂಡ ಪೋಕರಿಗಳಿಗೆ ಉತ್ತರ ನೀಡುತ್ತಿದ್ದರು. ಅಲ್ಲದೆ ಅವರ ವರ್ಕಿಂಗ್​ ಸ್ಟೈಲ್​ನಿಂದಲೇ ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್ ಎನಿಸಿದ್ದರು. 

ಅವರ ವೃತ್ತಿ ಜೀವನದಲ್ಲಿ ಸಬ್​ಇನ್​ಸ್ಪೆಕ್ಟರ್​ ಆಗಿದ್ದ ಸಂದರ್ಭವದು. ಸೊಪ್ಪುಗುಡ್ಡೆಯಲ್ಲಿ ನಡೆದಿದ್ದ ದಿನೇಶ್​ ಎಂಬಾತನ ಕೊಲೆ ಪ್ರಕರಣವನ್ನು ಭೇದಿಸಿದ್ದ ರವಿಕುಮಾರ್​ ಬೆಂಗಳೂರಿನವರೆಗೂ ಹೋಗಿ ಆರೋಪಿಗಳನ್ನ ಬಂಧಿಸಿದ್ದರು. ಎಳ್ಳಮಾವಾಸ್ಯೆಯ ಜಾತ್ರೆ ಸಂದರ್ಭದಲ್ಲಿ ಕುರುವಳ್ಳಿ ಹಾಗೂ ಕೋಣಂದೂರಿನ ರೌಡಿಗಳ ನಡುವೆ ಹೊಡೆದಾಟ ನಡೆದಿತ್ತು. ಅದರ ಬೆನ್ನಲ್ಲೆ ದಿನೇಶ್​ ಎಂಬಾತನ ಕೊಲೆ ನಡೆಯುತ್ತದೆ. ಆ ಕೊಲೆ ಪ್ರಕರಣವನ್ನು ಭೇದಿಸುವುದು ರಾಜಕೀಯವಾಗಿಯು ಮಹತ್ವ ಪಡೆದುಕೊಂಡಿರುತ್ತದೆ. ಈ ವೇಳೆ ಕೇಸ್ ಕೈಗೆತ್ತಿಕೊಂಡಿದ್ದ ರವಿಕುಮಾರ್ 2 ತಿಂಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ ಆರೋಪಿಗಳನ್ನು ಹಿಡಿದು ಅಂದರ್ ಮಾಡಿದ್ದರು. 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com