ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್ ಆಗಿದ್ದ Dysp ರವಿಕುಮಾರ್ ಹೃದಯಾಘಾತದಿಂದ ನಿಧನ
Dysp Ravikumar, who was super cop in Thirthahalli, passed away due to cardiac arrest
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದಿದ್ದ ಪೊಲೀಸ್ ಅಧಿಕಾರಿ ರವಿಕುಮಾರ್ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸದ್ಯ ಅವರು ಹಾಸನದಲ್ಲಿ ಲೋಕಾಯುಕ್ತ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು. ತೀರ್ಥಹಳ್ಳಿಯಲ್ಲಿ 2000 ನೇ ಇಸವಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದ ರವಿಕುಮಾರ್ ರವರು ಬಳಿಕ 2019 ರಲ್ಲಿ ತೀರ್ಥಹಳ್ಳಿಗೆ ಡಿವೈಎಸ್ಪಿಯಾಗಿ ಮತ್ತೆ ಆಗಮಿಸಿದ್ದರು. ತದನಂತರ ಸಿಒಡಿ ಟ್ರಾನ್ಸಫರ್ ಆಗಿದ್ದರು.
ಡೈನಾಮಿಕ್ ಪೋಲಿಸ್ ಕಾಪ್
ಕಳೆದ 15 ದಿನಗಳ ಹಿಂದೆ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಗೆ ಬಂದಿದ್ದ ರವಿಕುಮಾರ್ರವರು ಸಬ್ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್ ಎನಿಸಿದ್ದರು. ಪ್ರಮುಖವಾಗಿ ತೀರ್ಥಹಳ್ಳಿಯ ರೌಡಿಸಂಗೆ ಮೇಜರ್ ಲಾಟಿ ಏಟು ಕೊಟ್ಟಿದ್ದ ರವಿಕುಮಾರ್ರವರು , ಹಲವು ಇಂಟ್ರಸ್ಟಿಂಗ್ ಕೇಸ್ಗಳನ್ನು ಭೇದಿಸಿದ್ದರು. ಮುಖ್ಯವಾಗಿ ಅಕ್ರಮ ಚುಟವಟಿಕೆಗಳಿಗೆ ಕಡಿವಾಣ ಹಾಕಿದ್ದ ರವಿಕುಮಾರ್ರವರು, ಪೊಲೀಸ್ ಸ್ಟೈಲ್ನಲ್ಲಿ ಪುಂಡ ಪೋಕರಿಗಳಿಗೆ ಉತ್ತರ ನೀಡುತ್ತಿದ್ದರು. ಅಲ್ಲದೆ ಅವರ ವರ್ಕಿಂಗ್ ಸ್ಟೈಲ್ನಿಂದಲೇ ತೀರ್ಥಹಳ್ಳಿಯಲ್ಲಿ ಸೂಪರ್ ಕಾಪ್ ಎನಿಸಿದ್ದರು.
ಅವರ ವೃತ್ತಿ ಜೀವನದಲ್ಲಿ ಸಬ್ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭವದು. ಸೊಪ್ಪುಗುಡ್ಡೆಯಲ್ಲಿ ನಡೆದಿದ್ದ ದಿನೇಶ್ ಎಂಬಾತನ ಕೊಲೆ ಪ್ರಕರಣವನ್ನು ಭೇದಿಸಿದ್ದ ರವಿಕುಮಾರ್ ಬೆಂಗಳೂರಿನವರೆಗೂ ಹೋಗಿ ಆರೋಪಿಗಳನ್ನ ಬಂಧಿಸಿದ್ದರು. ಎಳ್ಳಮಾವಾಸ್ಯೆಯ ಜಾತ್ರೆ ಸಂದರ್ಭದಲ್ಲಿ ಕುರುವಳ್ಳಿ ಹಾಗೂ ಕೋಣಂದೂರಿನ ರೌಡಿಗಳ ನಡುವೆ ಹೊಡೆದಾಟ ನಡೆದಿತ್ತು. ಅದರ ಬೆನ್ನಲ್ಲೆ ದಿನೇಶ್ ಎಂಬಾತನ ಕೊಲೆ ನಡೆಯುತ್ತದೆ. ಆ ಕೊಲೆ ಪ್ರಕರಣವನ್ನು ಭೇದಿಸುವುದು ರಾಜಕೀಯವಾಗಿಯು ಮಹತ್ವ ಪಡೆದುಕೊಂಡಿರುತ್ತದೆ. ಈ ವೇಳೆ ಕೇಸ್ ಕೈಗೆತ್ತಿಕೊಂಡಿದ್ದ ರವಿಕುಮಾರ್ 2 ತಿಂಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ ಆರೋಪಿಗಳನ್ನು ಹಿಡಿದು ಅಂದರ್ ಮಾಡಿದ್ದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com